ಯುವಕನ ಅಪಹರಿಸಿ ಕೊಲೆ
![ಯುವಕನ ಅಪಹರಿಸಿ ಕೊಲೆ ಯುವಕನ ಅಪಹರಿಸಿ ಕೊಲೆ](https://www.varthabharati.in/sites/default/files/images/articles/2019/09/3/208227-1567514842.jpg)
ಬೆಂಗಳೂರು, ಸೆ.3: ಅಪರಾಧ ಹಿನ್ನೆಲೆಯ ಯುವಕನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಹೊಂಗಸಂದ್ರ ರಸ್ತೆಯಲ್ಲಿ ನಡೆದಿದೆ. ನಗರದ ಬೇಗೂರಿನ ಸುನೀಲ್(28) ಕೊಲೆಯಾದವರು ಎಂದು ತಿಳಿದುಬಂದಿದೆ.
ಹೊಂಗಸಂದ್ರ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸುನೀಲ್ನನ್ನು ದುಷ್ಕರ್ಮಿಗಳ ತಂಡ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿ ಕೊಲೆಗೈದು ಪರಾರಿ ಆಗಿದೆ ಎನ್ನಲಾಗಿದೆ.
ಹಳೆ ದ್ವೇಷದಿಂದ ಸ್ನೇಹಿತರಿಂದಲೇ ಸುನೀಲ್ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.
Next Story