ಆರ್ಥಿಕತೆ ಕುಸಿತಕ್ಕೆ ನೋಟು ರದ್ದತಿಯೇ ಕಾರಣ: ಆರ್ಥಿಕ ತಜ್ಞ ಮದನ್ ಸಬ್ನವಿಸ್

ಹೊಸದಿಲ್ಲಿ,ಸೆ.3: ಭಾರತದ ಜಿಡಿಪಿ ಶೇ.5ಕ್ಕೆ ಕುಸಿದಿದೆ. ಗ್ರಾಹಕರು ವಸ್ತುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಮತ್ತು ಕಂಪೆನಿಗಳು ಹಿಂದಿನಂತೆ ಹೂಡಿಕೆ ಮಾಡುತ್ತಿಲ್ಲ. ಈ ಸಮಸ್ಯೆ 2016ರಲ್ಲಿ ನೋಟು ರದ್ದತಿ ಘೋಷಣೆಯಾದ ದಿನದಿಂದ ಆರಂಭವಾಗಿದೆ ಎಂದು ಕೇರ್ ರೇಟಿಂಗ್ಸ್ ಲಿ.ನ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ತಿಳಿಸಿದ್ದಾರೆ.
ಹಿಂದಿನ ಅವಧಿಯ ಕಳಪೆ ಆಡಳಿತದ ಫಲವಾಗಿ ಸರಕಾರ ಇದೀಗ ಆರ್ಥಿಕತೆಯನ್ನು ಮರಳಿ ದಾರಿಗೆ ತರಲು ಕೆಲವು ವಾರಗಳಿಂದ ಹಲವು ಘೋಷಣೆಗಳನ್ನು ಮಾಡುತ್ತಿದೆ. ನೋಟು ಅಮಾನ್ಯದ ಕಾರಣ ಗ್ರಾಮೀಣ ಆರ್ಥಿಕತೆ ಕಂಗಾಲಾಗಿದೆ ಎಂದು ಅವರು ತಿಳಿಸಿದ್ದಾರೆ.
2017ರಲ್ಲಿ ಜಿಎಸ್ಟಿ ಅನುಷ್ಟಾನದಿಂದ ಪ್ರಗತಿ ಕುಂಠಿತಗೊಂಡಿತು. ಉದ್ಯೋಗ ಸೃಷ್ಟಿಯಾಗದಿರುವುದು ಮತ್ತು ಆದಾಯದಲ್ಲಿ ಏರಿಕೆಯಾಗದಿರುವ ಕಾರಣ ಜನರು ವೆಚ್ಚ ಮಾಡಲು ಹಿಂಜರಿಯುತ್ತಿದ್ದಾರೆ. ಇದರಿಂದ ಬೇಡಿಕೆ ಕಡಿಮೆಯಾಗಿದೆ. ಸರಕಾರ ಬಡ್ಡಿ ದರ ಇಳಿಕೆ ಮಾಡಿದೆ. ಆದರೆ ಬಡ್ಡಿದರ ಇಳಿಕೆಯಾಗಿದೆ ಎಂದು ಕಂಪೆನಿಗಳು ಸಾಲ ಪಡೆಯುವುದಿಲ್ಲ. ಹೊಸದಾಗಿ ಹೂಡಿಕೆ ಮಾಡಲು ಅದರ ಅವಶ್ಯಕತೆಯಿರಬೇಕಾದುದು ಮುಖ್ಯ. ಬಹಳ ಪ್ರಮುಖವಾದುದೆಂದರೆ ಬೇಡಿಕೆಯಿರಬೇಕಾದುದು ಅತ್ಯಂತ ಮುಖ್ಯ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ದ್ರವ್ಯತೆಯ ಸಮಸ್ಯೆಗಿಂತಲೂ ಸಾಲ ನೀಡಲು ಬಯಸುವುದು ಬಹಳ ಪ್ರಮುಖವಾಗುತ್ತದೆ. ಉದ್ಯಮ ನಡೆಸಲು ಆರೋಗ್ಯಕರ ವಾತಾವರಣ ಒದಗಿಸುವುದು ಮತ್ತು ಬೃಹತ್ ಸಾರ್ವಜನಿಕ ವಲಯ ಬ್ಯಾಂಕ್ಗಳ ನಿರ್ಮಾಣ ಉತ್ತಮ ನಡೆಯಾದರೂ ಶೇ.5 ಪ್ರಗತಿ ದರವನ್ನು ಒವ್ಮೆುಲೆ ಸುಧಾರಿಸಲು ಸಾಧ್ಯವಿಲ್ಲ ಎಂದು ಸಬ್ನವಿಸ್ ಅಭಿಪ್ರಾಯಿಸಿದ್ದಾರೆ.