Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬೃಹತ್ ಗುಪ್ತಚರ ವೈಫಲ್ಯದಿಂದ ಪುಲ್ವಾಮ...

ಬೃಹತ್ ಗುಪ್ತಚರ ವೈಫಲ್ಯದಿಂದ ಪುಲ್ವಾಮ ದಾಳಿ: ಸಿಆರ್ ಪಿಎಫ್ ಆಂತರಿಕ ವರದಿ

ಕೇಂದ್ರ ಸರಕಾರಕ್ಕೆ ಭಾರೀ ಮುಜುಗರ

ವಾರ್ತಾಭಾರತಿವಾರ್ತಾಭಾರತಿ6 Sept 2019 4:26 PM IST
share
ಬೃಹತ್ ಗುಪ್ತಚರ ವೈಫಲ್ಯದಿಂದ ಪುಲ್ವಾಮ ದಾಳಿ: ಸಿಆರ್ ಪಿಎಫ್  ಆಂತರಿಕ ವರದಿ

“39 ಯೋಧರ ಬಳಿ ಇದ್ದದ್ದು, ಕೇವಲ 4 ಶಸ್ತ್ರಾಸ್ತ್ರಗಳು”

ಹೊಸದಿಲ್ಲಿ: 43 ಸಿಆರ್ ಪಿಎಫ್ ಯೋಧರನ್ನು ಬಲಿಪಡೆದ ಫೆಬ್ರವರಿ 14ರ ಪುಲ್ವಾಮ ಉಗ್ರ ದಾಳಿಯು ಬೃಹತ್ ಗುಪ್ತಚರ ವೈಫಲ್ಯದ ನಂತರ ಸಂಭವಿಸಿತ್ತು ಎಂದು ಸಿಆರ್ ಪಿಎಫ್ ಆಂತರಿಕ ವರದಿ ತಿಳಿಸಿದ್ದು, ಕೇಂದ್ರ ಸರಕಾರಕ್ಕೆ ಭಾರೀ ಮುಜುಗರವುಂಟು ಮಾಡುವ ಬೆಳವಣಿಗೆ ಇದಾಗಿದೆ ಎಂದು India Today ವರದಿ ಮಾಡಿದೆ.  

ಪುಲ್ವಾಮ ಉಗ್ರ ದಾಳಿಯು ಗುಪ್ತಚರ ವೈಫಲ್ಯದಿಂದಾಗಿ ಸಂಭವಿಸಿದೆ ಎಂಬುದನ್ನು ಕೇಂದ್ರ ಗೃಹ ಸಚಿವಾಲಯವು ಜೂನ್ ತಿಂಗಳಲ್ಲಿ ಬಲವಾಗಿ ತಿರಸ್ಕರಿಸಿತ್ತಲ್ಲದೆ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಈ ಕುರಿತಂತೆ ಹೇಳಿಕೆ ಕೂಡ ನೀಡಿದ್ದರು.

ಗುಪ್ತಚರ ಏಜನ್ಸಿಗಳು ಐಇಡಿಯಿಂದ ಸಂಭವಿಸಬಹುದಾದ ಸಂಭಾವ್ಯ ಅಪಾಯದ ಕುರಿತಂತೆ ಸಿಆರ್‍ ಪಿಎಫ್ ಅನ್ನು ಎಚ್ಚರಿಸಿದ್ದರೂ, ಕಾರಿನ ಮೂಲಕ ಆತ್ಮಾಹುತಿ ದಾಳಿ ನಡೆಯಬಹುದೆಂಬ ಕುರಿತಂತೆ ಯಾವುದೇ ಮಾಹಿತಿ ನೀಡಲಾಗಿರಲಿಲ್ಲ ಎಂದು ಆಂತರಿಕ ವರದಿ ತಿಳಿಸಿದೆ.

ಸಿಆರ್ ಪಿಎಫ್ ಯೋಧರ ದೊಡ್ಡ ಪಡೆಯನ್ನು ಪುಲ್ವಾಮ ಮೂಲಕ ಹಾದು ಹೋಗಲು ಅನುಮತಿಸಿರುವುದು ಕೂಡ ಸರಿಯಾದ ಕ್ರಮವಾಗಿರಲಿಲ್ಲ ಎಂದು ವರದಿ ಹೇಳಿದೆ. ಸಿಆರ್ ಪಿಎಫ್ ಪಡೆಯಲ್ಲಿ 78 ವಾಹನಗಳು ಹಾಗೂ 2,547 ಜವಾನರಿದ್ದರಲ್ಲದೆ ವಾಹನಗಳು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದಾಗ ಈ ದಾಳಿ ನಡೆದಿತ್ತು ಎಂದು India Today ವರದಿ ತಿಳಿಸಿದೆ.

ಸಿಆರ್ ಪಿಎಫ್ ವಾಹನಗಳು ಸಾಗುವಾಗ ಇತರ ನಾಗರಿಕ ವಾಹನಗಳನ್ನೂ ಸಾಗಲು ಅನುಮತಿಸಿದ್ದೂ ಸಿಆರ್ ಪಿಎಫ್ ಗೆ ದುಬಾರಿಯಾಗಿ ಪರಿಣಮಿಸಿತ್ತು ಎಂದು ಆಂತರಿಕ ವರದಿ ಹೇಳಿದೆ. ದಾಳಿಗೊಳಗಾದ ಸಿಆರ್ ಪಿಎಫ್ ವಾಹನದಲ್ಲಿ 39 ಯೋಧರಿದ್ದರೂ ಕೇವಲ ನಾಲ್ಕು ಶಸ್ತ್ರಾಸ್ತ್ರಗಳಿದ್ದವು ಹಾಗೂ ಅವರ ಶಸ್ತ್ರಾಸ್ತ್ರಗಳು ಅವರು ತಮ್ಮ ಘಟಕ ತಲುಪಿದ ನಂತರವಷ್ಟೇ ದೊರೆಯಬಹುದಾಗಿತ್ತು ಎಂದು ವರದಿ ಹೇಳಿದೆ.

ಸ್ಥಿರ ಸಿಆರ್ ಪಿಎಫ್ ಬಂಕರ್ ವಾಹನದಿಂದ ತೆಗೆಯಲಾದ ವೀಡಿಯೋದಲ್ಲಿ ಆರ್‍ಒಪಿ ಕರ್ತವ್ಯದಲ್ಲಿದ್ದ ಎಎಸ್‍ಐ ಮೋಹನ್ ಲಾಲ್ ಎಂಬವರು ಉಗ್ರನ ವಾಹನ ತಡೆಯಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಉತ್ತರಾಖಂಡದ ಬರ್ಕೋಟ್ ಗ್ರಾಮದ ಮೋಹನ್ ಲಾಲ್ ಗೆ  ಮರಣೋತ್ತರ ಶೌರ್ಯ ಪ್ರಶಸ್ತಿಯನ್ನೂ ತನಿಖಾ ವರದಿ ಶಿಫಾರಸು ಮಾಡಿದೆ.

ಆತ್ಮಾಹುತಿ ಬಾಂಬರ್ ಇದ್ದ ಕಾರು ಝಿಗ್ ಝ್ಯಾಗ್ ಮಾದರಿಯಲ್ಲಿ ಸಂಚರಿಸಿತ್ತು ಎಂದೂ ವರದಿ ತಿಳಿಸಿದೆ. ನಿಯಮದ ಪ್ರಕಾರ  ಪ್ರತಿ ನಾಲ್ಕು ಸಿಆರ್‍ಪಿಎಫ್ ವಾಹನಗಳ ನಡುವೆ ಅಂತರವಿರಬೇಕಾಗಿದ್ದು, ಈ ನಿಯಮವನ್ನು ಸಿಆರ್ ಪಿಎಫ್ ಪಾಲಿಸಿದ್ದರಿಂದ ಆತ್ಮಾಹುತಿ ಬಾಂಬರ್ ನ ವಾಹನ  ಕೇವಲ ಒಂದು ಸಿಆರ್‍ಪಿಎಫ್ ವಾಹನಕ್ಕೆ ಹಾನಿಯೆಸಗಿತ್ತು ಎಂದು ವರದಿ ತಿಳಿಸಿದೆ.

ಈ 15 ಪುಟಗಳ ತನಿಖಾ ವರದಿಯನ್ನು ಮೇ ತಿಂಗಳಲ್ಲಿ ಸಿಆರ್‍ ಪಿಎಫ್ ಡಿಜಿಗೆ ಸಲ್ಲಿಸಲಾಗಿದೆ.

ಕೃಪೆ: www.indiatoday.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X