ಕೇರಳದ ರಾಜ್ಯಪಾಲರಾಗಿ ಆರಿಫ್ ಮುಹಮ್ಮದ್ ಖಾನ್ ಪ್ರಮಾಣ ವಚನ ಸ್ವೀಕಾರ

ತಿರುವನಂತಪುರ, ಸೆ. 4: ಕೇಂದ್ರದ ಮಾಜಿ ಸಚಿವ ಆರಿಫ್ ಮುಹಮ್ಮದ್ ಖಾನ್ ಕೇರಳದ 22ನೇ ರಾಜ್ಯಪಾಲರಾಗಿ ಇಲ್ಲಿನ ರಾಜಭವನದಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಕೇರಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರು ಖಾನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉಪಸ್ಥಿತರಿದ್ದರು. ಖಾನ್ ಅವರು ಮೊದಲು ಮಲಯಾಳಂನಲ್ಲಿ, ಅನಂತರ ಇಂಗ್ಲೀಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 9 ಸಚಿವರು, ಸಂಸದರು, ಶಾಸಕರು ಉನ್ನತ ಅದಿಕಾರಿಗಳು, ರಕ್ಷಣಾ ಅಧಿಕಾರಿಗಳು, ಖಾನ್ ಅವರ ಪತ್ನಿ ರೇಷ್ಮಾ ಆರಿಫ್ ಸಹಿತ ನೂತನ ರಾಜ್ಯಪಾಲರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ರಾಜ್ಯಪಾಲರಾಗಿ 5 ವರ್ಷಗಳ ಅಧಿಕಾರಾವಧಿ ಪೂರೈಸಿದ ಪಿ. ಸದಾಶಿವಂ ಅವರ ಉತ್ತರಾಧಿಕಾರಿಯಾಗಿ ಖಾನ್ ಕರ್ತವ್ಯ ನಿರ್ವಹಿಸಲಿದ್ದಾರೆ.
Next Story