Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಹೆಣ್ಣು ಮನಸ್ಸಿನ ಕವಿತೆಗಳು....

ಹೆಣ್ಣು ಮನಸ್ಸಿನ ಕವಿತೆಗಳು....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ7 Sept 2019 12:33 AM IST
share
ಹೆಣ್ಣು ಮನಸ್ಸಿನ ಕವಿತೆಗಳು....

‘‘ನನ್ನ ಮೊದಲ ಸಂತೃಪ್ತ ಕವಿತೆ ಅಮ್ಮ ಮಾತ್ರ. ಅಮ್ಮನ ಬದುಕಿನ ಪಾಡನ್ನು ಕಟ್ಟಲು ಸಾಗಿದ ಪದಗಳ ಹುಡುಕಾಟ ‘ಕಣ್ಣೀರು’ ಕವನ ಸಂಕಲನ ತರುವವರೆಗೂ ಕಾಡಿದೆ, ಕಾಡುತ್ತಲೇ ಇರಲಿ ಎಂಬುದೇ ನನ್ನ ಆಶಯ. ಇಂದಿಗೂ ನಾನು ಸಂಪೂರ್ಣವಾಗಿ ಕಾವ್ಯದ ಒಡಲಾಳ ತಿಳಿದವನಲ್ಲ. ಅದು ಸಾಧ್ಯವೂ ಇಲ್ಲ. ಕನ್ನಡ ಸಾಹಿತ್ಯವನ್ನು ಈಗೀಗ ಆಸ್ವಾದಿಸುತ್ತಿರುವ ನನಗೆ ಬಹುವಾಗಿ ಕಾಡಿದ್ದು ಕಾವ್ಯ. ಇಡೀ ಭಾವನೆಗಳನ್ನು ಒಂದೆರಡು ಸಾಲಲ್ಲಿ ಹೇಳುವ ಪ್ರಕ್ರಿಯೆ ಅಮೋಘವಾದುದು. ಕೃತಿಯಲ್ಲಿರುವ ಕವಿತೆಗಳೆಲ್ಲಾ ನನ್ನ ಅಂತರಂಗದ ಆಂತರ್ಯ ಕದಡಿದವೇ ಆಗಿವೆ. ಅವು ಎಂದಿಗೂ ಬಲವಂತವಾಗಿ ಮೂಡಿದವಲ್ಲ. ಹಾಗಾಗಿಯೇ ನನ್ನ ಕವಿತೆಗಳ ಮೇಲೆ ನನ್ನ ನಂಬಿಕೆ ನಿಮ್ಮನ್ನೂ ಸಹ ಕಾಡಬಲ್ಲವೆಂದು...’’ ತನ್ನ ‘ಕಣ್ಣೀರು’ ಕವನ ಸಂಕಲನದ ಆಶಯದ ಕುರಿತಂತೆ ಕವಿ ಚಲಪತಿ ವಿ. ಹೀಗೆ ತೋಡಿಕೊಳ್ಳುತ್ತಾರೆ.
 ಈ ಸಂಕಲನದಲ್ಲಿ ಒಟ್ಟು 50 ಕವನಗಳಿವೆ. ಮೊದಲ ಕವಿತೆಯೇ ‘ಅವ್ವ’ನ ಮೇಲೆ ಬರೆಯಲಾಗಿದೆ. ಅವ್ವ ಎಂದಾಗ ನೆನಪಾಗುವುದು ಲಂಕೇಶರು ತನ್ನ ತಾಯಿಯ ಕುರಿತಂತೆ ಬರೆದ ಕವಿತೆ. ಹಾಗೆಯೇ ಹಲವು ಹಿರಿ-ಕಿರಿ ಕವಿಗಳು ತಮ್ಮ ಗೆಳತಿಯ ಬಳಿಕ ಬರೆದದ್ದು ತಾಯಿಯ ಬಗ್ಗೆಯೇ. ತಾಯಿ ಬೇರೆ ಬೇರೆ ರೂಪಕಗಳಲ್ಲಿ ಅಭಿವ್ಯಕ್ತಿಗೊಂಡಿದ್ದಾಳೆ. ಜನ್ಮ ಕೊಟ್ಟ ತಾಯಿ, ಮಣ್ಣು, ನಾಡು, ದೇಶ, ಭೂಮಿ, ಬ್ರಹ್ಮಾಂಡ ಹೀಗೆ ತಾಯಿಯ ಅಗಾಧತೆ ಬೆಳೆಯುತ್ತಾ ಹೋಗುತ್ತದೆ. ಇಲ್ಲಿ ಕವಿ ತನ್ನ ತಾಯಿ ಬದುಕಿನಲ್ಲಿ ಅನುಭವಿಸಿದ ನೋವು ದುಮ್ಮಾನಗಳನ್ನು ಕಟ್ಟಿಕೊಡಲು ಯತ್ನಿಸುತ್ತಾರೆ. ಇವರ ಹೆಚ್ಚಿನ ಕವಿತೆಗಳು ಮನುಷ್ಯನ ನೋವು, ದಾರಿದ್ರ, ಬಡತನ, ಸಂಕಟಗಳಿಗೆ ಧ್ವನಿಯಾಗುತ್ತವೆ.
‘ಚಿಂದಿ ಆಯುವವರು’ ಕವಿತೆಯಲ್ಲಿ ‘ಯಾರದೋ ಚಪ್ಪಲಿಗೆ ಪಾದ/ಬಟ್ಟೆಗೆ ದೇಹ, ಎಂಜಲಿಗೆ ಮೃಷ್ಟಾನ್ನ/ತಾರೆಗಳ ಒಯ್ಯಾರದಲಿ ಮಿನುಗುವ/ಗಗನವೇ ಮಹಲು, ಚಂದ್ರನೇ ನಾಳೆಯ ಬದುಕಿಗೊಂದು ಆಶಾದೀಪ’ ಎಂದು ಅವರ ಬದುಕಿನೊಳಗೂ ಬಚ್ಚಿಟ್ಟುಕೊಂಡಿರುವ ಸೌಂದರ್ಯದ ಚಿಂದಿಗಳನ್ನು ಆಯ್ದು ಓದುಗರ ಮುಂದಿಡುತ್ತಾರೆ. ಹಲವು ಕವಿತೆಗಳು ನವೋದಯ ಕಾಲದ ಗೇಯತೆಯನ್ನು ತನ್ನಾಗಿಸಿಕೊಂಡು ಬರೆಯಲ್ಪಟ್ಟಿವೆ. ಪ್ರಾಸಗಳಿಗೆ ಹೊಂದಿಕೊಳ್ಳಲು ತಿಣುಕಾಡಿವೆ. ಇವುಗಳ ನಡುವೆಯೂ ‘ತರಕಾರಿ ಮಾರುವವಳು’ ಕವಿತೆಯಲ್ಲಿ ಬರುವ ‘ಆರಿಸಿ ಬಿಸಾಡಿದ ಬದುಕಲ್ಲಿ /ಹೊಸತೆಲ್ಲಾ ಗುಡ್ಡೆಯಾಯಿತು /ಮಿಕ್ಕಿದೆಲ್ಲಾ ಇನ್ಯಾರೋ ಬುಟ್ಟಿಗೆ ಸೇರಿತು /ಅದಕ್ಕೂ ಬೆಲೆಯಿತ್ತು...’ ಎಂಬಂತಹ ಸಾಲುಗಳು ನಮ್ಮ್ನು ಕ್ಷಣ ಕಾಲ ಹಿಡಿದು ನಿಲ್ಲಿಸುತ್ತವೆ.
ನೌಟಂಕಿ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 80. ಮುಖಬೆಲೆ 80 ರೂ. ಕೃತಿಯು ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರಿಂದ ಧನಸಹಾಯ ಪಡೆದಿದೆ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X