Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ9 Sept 2019 12:07 AM IST
share
ಓ ಮೆಣಸೇ…

ಸರ್ವ ಜನಾಧರಿತ ರಾಜಕೀಯ ಕಾಂಗ್ರೆಸ್‌ನ ಧ್ಯೇಯವಾಗಿದೆ - ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕ
 
ಆರೆಸ್ಸೆಸ್‌ನವರನ್ನೂ ತಬ್ಬಿಕೊಂಡರೆ ಸರ್ವಜನರನ್ನು ಆಧರಿಸಿದಂತಾಗುತ್ತದೆ.

---------------------
 
ಬ್ಯಾಂಕ್ ವಿಲೀನದ ಬಳಿಕ ಒಬ್ಬನೇ ಒಬ್ಬ ನೌಕರನನ್ನು ಕೆಲಸದಿಂದ ತೆಗೆಯುವುದಿಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
 
ವಿಲೀನಕ್ಕೆ ಮೊದಲೇ ತೆಗೆದು ಆಗಿರಬೇಕು.

---------------------
 
ರಾಹುಲ್ ಗಾಂಧಿ ರಾಜಕೀಯ ಬಾಲಾಪರಾಧಿಯಂತೆ ವರ್ತಿಸುತ್ತಿದ್ದಾರೆ - ಸತ್ಯಪಾಲ್ ಮಲಿಕ್, ಜಮ್ಮು-ಕಾಶ್ಮೀರದ ರಾಜ್ಯಪಾಲ
  ತಾವೇಕೆ ಕಾಶ್ಮೀರದ ಜೈಲರ್ ಥರ ವರ್ತಿಸುತ್ತಿದ್ದೀರಿ?
---------------------
 
ನಾನು ದ್ವೇಷ ರಾಜಕಾರಣದ ಬಲಿಪಶು - ಡಿ.ಕೆ. ಶಿವಕುಮಾರ್, ಮಾಜಿ ಸಚಿವ
 
ನಾನಲ್ಲ, ನಾನಲ್ಲ ಎಂದರಂತೆ ಸಿದ್ದರಾಮಯ್ಯ.

---------------------
 
ಹಿಂದೂ-ಮುಸ್ಲಿಮರ ನಡುವಿನ ಪ್ರೀತಿ, ವಿಶ್ವಾಸ ಈ ಜಿಲ್ಲೆಯಲ್ಲಿ ಇನ್ನೂ ಇದೆ - ನಳಿನ್ ಕುಮಾರ್ ಕಟೀಲು, ಸಂಸದ
 
ಹೌದು, ಯಾರು ಎಷ್ಟೇ ಬೆಂಕಿ ಕೊಟ್ಟರೂ ಮತ್ತೆ ಚಿಗುರುವ ಶಕ್ತಿ ಅದಕ್ಕಿದೆ.

---------------------
 
ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ನಾಯಿಯೂ ಮೂಸುವುದಿಲ್ಲ - ಪದ್ಮನಾಭ ಪ್ರಸನ್ನ, ಕೆಜೆಪಿ ರಾಜ್ಯಾಧ್ಯಕ್ಷ
  ಸದ್ಯಕ್ಕೆ ಹಾಗಾದರೆ ಬಿಜೆಪಿಯನ್ನು ನಾಯಿ ಮೂಸುತ್ತಿದೆ ಎಂದಾಯಿತು.
---------------------
 
ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯದ ಎಲ್ಲ 13 ಅಣೆಕಟ್ಟೆಗಳು ಭರ್ತಿಯಾಗಿವೆ - ವಿ.ಸೋಮಣ್ಣ, ಸಚಿವ
  ಯಡಿಯೂರಪ್ಪ ಅವರೇ ಬಾವಿಯಿಂದ ಸೇದಿ ಅಣೆಕಟ್ಟೆಗಳನ್ನು ಭರ್ತಿ ಮಾಡಿದ್ದಂತೆ.
---------------------
 
ಡಿಕೆಶಿ ಬಂಧನದಿಂದ ನನಗೆ ಸಂತೋಷವಾಗಿಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ,
  ತಮ್ಮ ಬಂಧನವೂ ಯಾವತ್ತಾದರೂ ಆಗಬಹುದು ಎಂಬ ಭಯವೇ?
---------------------
 
ದೇಶದ ಎಲ್ಲಾ ನದಿಗಳನ್ನು ಸ್ವಚ್ಛಗೊಳಿಸಬೇಕಿದೆ - ಶೋಭಾಕರಂದ್ಲಾಜೆ, ಸಂಸದೆ
 
ಮೊದಲು ರಾಜಕಾರಣಿಗಳು ತಮ್ಮ ಮೆದುಳನ್ನು ಸ್ವಚ್ಛಗೊಳಿಸುವ ಅಗತ್ಯವಿದೆ.

---------------------
 
ಯಾರೋ ಮಹಿಳೆಯರು ಹೇಳಿದರೆಂದು ಮದ್ಯ ನಿಷೇಧ ಮಾಡಲು ಆಗಲ್ಲ - ಎಚ್. ನಾಗೇಶ್, ಸಚಿವ
  ಅಂದರೆ ನಿಮ್ಮ ಮನೆಯ ಮಹಿಳೆಯರೇ ಹೇಳಬೇಕೇ?
---------------------
 
ಪ್ರಧಾನಿ ಮೋದಿ ಜತೆ ಧೈರ್ಯದಿಂದ ಮಾತನಾಡ ಬಲ್ಲ, ವಾದ ಮಾಡಬಲ್ಲ ನಾಯಕತ್ವ ಭಾರತಕ್ಕೆ ಅಗತ್ಯವಿದೆ - ಮುರಳಿ ಮನೋಹರ ಜೋಷಿ, ಬಿಜೆಪಿ ಮುಖಂಡ
  ಅವರು ಭಾರತದ ಶತ್ರುರಾಷ್ಟ್ರದ ಪ್ರಧಾನಿಯೇ?
---------------------
 
ಏಕ ಭಾರತ-ಏಕ ಚುನಾವಣೆ ಪರಿಕಲ್ಪನೆಗೆ ಚುನಾವಣಾ ಆಯೋಗ ಸಿದ್ಧವಿದೆ - ಸುನಿಲ್ ಅರೋರ, ಕೇಂದ್ರ ಚುನಾವಣಾ ಆಯೋಗದ ಆಯುಕ್ತ
  ಜನರು ಸಿದ್ಧರಾಗುವ ಅಗತ್ಯವಿಲ್ಲವೇ?
---------------------
 
ಅಣ್ವಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ವಿಶ್ವದಲ್ಲೇ ಅಪಾಯಕಾರಿ ರಾಷ್ಟ್ರ - ಜಿಮ್ ಮ್ಯಾಟಿಸ್, ಅಮೆರಿಕದ ಮಾಜಿ ರಕ್ಷಣಾ ಸಚಿವ
  ಅಮೆರಿಕ ಅಣ್ವಸ್ತ್ರವನ್ನೇ ಹೊಂದಿಲ್ಲವೇ?
---------------------
 
ಆಡಳಿತ ಪಕ್ಷದ ಮೇಲೆ ದ್ವೇಷ ರಾಜಕರಣದ ಆರೋಪ ಬರುವುದು ಸಹಜ - ಈಶ್ವರಪ್ಪ, ಸಚಿವ
  ತಾವು ಯಡಿಯೂರಪ್ಪ ವಿರುದ್ಧ ನಡೆಸುತ್ತಿರುವ ದ್ವೇಷ ರಾಜಕಾರಣ ಯಾವುದರ ವ್ಯಾಪ್ತಿಯಲ್ಲಿ ಬರುತ್ತದೆ?
---------------------
 
ಜೆಡಿಎಸ್ ಪಕ್ಷವು ಮುಖಂಡರನ್ನು ತಯಾರಿಸುವ ಕಾರ್ಖಾನೆಯಾಗಿದೆ - ಎಚ್.ಡಿ. ರೇವಣ್ಣ, ಮಾಜಿ ಸಚಿವ
 
ಆ ಕಾರ್ಖಾನೆಯ ಒಡೆತನ ಮಾತ್ರ ದೇವೇಗೌಡರ ಕೈಯಲ್ಲಿದೆ.

---------------------
 
ಜವಾಹರಲಾಲ್ ನೆಹರೂ ಕೂಡ 370ನೇ ವಿಧಿ ರದ್ದು ಗೊಳ್ಳುವುದನ್ನು ಬಯಸಿದ್ದರು - ಶಶಿ ತರೂರು, ಕಾಂಗ್ರೆಸ್ ಮುಖಂಡ
  ರದ್ದುಗೊಳಿಸುವುದಕ್ಕೆ ಬಯಸಿದ್ದಿದ್ದರೆ ಅದನ್ನು ಅಲ್ಲಿ ಜಾರಿಗೊಳಿಸಿದ್ದು ಯಾಕೆ?
---------------------
 
ನೆರೆ ಸಂತ್ರಸ್ತರ ಗಂಜಿ ಕೇಂದ್ರಗಳಿಗೆ ಮುಂದಿನ ದಿನಗಳಲ್ಲಿ ಕಾಳಜಿ ಕೇಂದ್ರಗಳೆಂದು ಮರು ನಾಮಕರಣ ಮಾಡಲಾಗುವುದು - ಆರ್. ಅಶೋಕ್, ಸಚಿವ
 
ಅಂದರೆ ಇನ್ನು ಮುಂದೆ ಕೇಂದ್ರದಲ್ಲಿ ಗಂಜಿ ಸಿಗುವುದಿಲ್ಲ, ಬರೇ ಕಾಳಜಿ ಮಾತ್ರ.

---------------------
 
ಭಾರತದಲ್ಲಿ ಹುಲಿಗಳ ಸಂಖ್ಯೆ ವೃದ್ಧಿಗೆ ರಶ್ಯವೂ ಕಾರಣ - ನರೇಂದ್ರ ಮೋದಿ, ಪ್ರಧಾನಿ
  ಕಮ್ಯುನಿಸ್ಟರನ್ನು ಹುಲಿಗೆ ಹೋಲಿಸುತ್ತಿರಬೇಕು.
---------------------
 
ನಾನು ಸಚಿವನಾಗಿದ್ದಾಗ ಕ್ಷಣ ಕ್ಷಣಕ್ಕೂ ಅವಮಾನ ಮತ್ತು ನೋವು ಅನುಭವಿಸುತ್ತಿದೆ - ಜಿ.ಟಿ. ದೇವೇಗೌಡ, ಮಾಜಿ ಸಚಿವ
  ಅದಕ್ಕಾಗಿ ಇದೀಗ ಇನ್ನೊಬ್ಬರಿಗೆ ನೋವು ಕೊಟ್ಟು ಸೇಡು ತೀರಿಸಿಕೊಳ್ಳುತ್ತಿದ್ದೀರಾ?
---------------------
 
ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧ ಇಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ
 
ಈ ರೀತಿ ದಂಡ ಹಾಕುತ್ತಿದ್ದರೆ ನಿಷೇಧ ಮಾಡುವ ಅಗತ್ಯವೇ ಇಲ್ಲ.

---------------------
   
ಭಾರತೀಯರ ಹೃದಯ ಕಮಲ ಅರಳಬೇಕಾದರೆ ಸಂಸ್ಕೃತ ಭಾಷೆ ಅಗತ್ಯ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
 
ಒಟ್ಟಿನಲ್ಲಿ ಕಮಲವನ್ನು ಅರಳಿಸುವುದೇ ಸಂಸ್ಕೃತ ಭಾಷೆಯ ಗುರಿ.

---------------------
 
ಸೋನಿಯಾ ಗಾಂಧಿ ನೇತೃತ್ವದ ಇಟಾಲಿಯನ್ ಕಾಂಗ್ರೆಸ್ ಮತ್ತೊಂದು ಈಸ್ಟ್ ಇಂಡಿಯನ್ ಕಂಪೆನಿ ಆಗಿದೆ - ಸುರೇಶ್ ಅಂಗಡಿ, ಸಚಿವ
 
ರಿಲಯನ್ಸ್ ಕಂಪೆನಿಗಿಂತ ವಾಸಿ ಎನ್ನುತ್ತಿದ್ದಾರೆ ಜನ.

---------------------
 
ಇಡೀ ಜಗತ್ತೇ ಒಂದು ಕುಟುಂಬ ಎಂದು ಭಾರತ ನಂಬಿದೆ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
  ಆದರೆ ದಲಿತರನ್ನು ಬಿಟ್ಟು ಎನ್ನುವುದನ್ನು ಕಂಸದೊಳಗೆ ಸೇರಿಸಲಾಗಿದೆ.
---------------------

share
ಪಿ.ಎ.ರೈ
ಪಿ.ಎ.ರೈ
Next Story
X