Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೇವತಾಕಾರ್ಯದಲ್ಲಿ ಇನ್ನಿತರ...

ದೇವತಾಕಾರ್ಯದಲ್ಲಿ ಇನ್ನಿತರ ಮಾತೇಕೆ.....?

-ಹೈದರ್ ಅಲಿ, ಐವತ್ತೊಕ್ಲು,-ಹೈದರ್ ಅಲಿ, ಐವತ್ತೊಕ್ಲು,10 Sept 2019 11:18 PM IST
share

ಮಾನ್ಯರೇ,

ಯಾವುದೇ ಧರ್ಮದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಯ ಆಗರವಾಗಬೇಕು. ಮನಸ್ಸು ಮನಸ್ಸುಗಳನ್ನು ಬೆಸೆಯಬೇಕು. ದೈವ ತೃಪ್ತಿ, ಇಷ್ಟಾರ್ಥ ಸಿದ್ಧ್ದಿ, ಸಂಕಷ್ಟ ನಿವಾರಣೆಗಳಿಗೆ ದೇವರ ಮೊರೆ, ಪ್ರಾರ್ಥನೆ....ಒಟ್ಟಾರೆ, ಲೋಕ ಕಲ್ಯಾಣ, ಲೌಕಿಕ ಬದುಕಿನ ಯಶಸ್ಸು, ಮೋಕ್ಷದ ಬಯಕೆ.......ಭಕ್ತಿಯ ಸಿಂಚನವಾಗಬೇಕು. ನಾಡಿನಲ್ಲಿ ಸುಭೀಕ್ಷೆ, ದೈವಾನುಗ್ರಹದ ಗುರಿಯಾಗಿರಬೇಕು.

ಆದರೆ, ದುರಂತವೆಂದರೆ ಇಂದು ಕೆಲವು ಸಂಘಟನೆಗಳು ನಡೆಸುವ ದೇವತಾ ಕಾರ್ಯಕ್ರಮಗಳು ಜನಮನವನ್ನು ಅರಳಿಸುವುದಕ್ಕಿಂತ ಕೆರಳಿಸುತ್ತವೆ. ಪಕ್ಕಾ ರಾಜಕೀಯ ವೇದಿಕೆಯಾಗುತ್ತಿವೆ. ಅಲ್ಲಿ ದಿಕ್ಸೂಚಿ ಭಾಷಣಕ್ಕೋ,ಧಾರ್ಮಿಕ ಉಪನ್ಯಾಸಕ್ಕೋ ಬರುವ ಅತಿಥಿಗಳೆನಿಸಿದವರು ಆಡುವ ಮಾತುಗಳು ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡುತ್ತವೆ.(ಕೆಲವರನ್ನು ಆಹ್ವಾನಿಸುವುದರ ಹಿಂದೆಯೇ ದುರುದ್ದೇಶಗಳಿರುತ್ತವೆ).

ಚಪ್ಪಾಳೆ ತಟ್ಟಲು, ಶಿಳ್ಳೆ ಹೊಡೆಯಲು ಒಂದಿಷ್ಟು ಮಂದಿ ಇದ್ದಾಗ ಅವರಿಗೆ ತಾವೊಂದು ದೇವತಾ ಕಾರ್ಯಕ್ರಮದ ವೇದಿಕೆಯಲ್ಲಿರುವುದೆಂಬ ಕನಿಷ್ಠ ಪರಿಜ್ಞಾನವೂ ಇರುವುದಿಲ್ಲ. ತಮ್ಮ ಧರ್ಮದ ಕಿಂಚಿತ್ತೂ ಅರಿವಿಲ್ಲದಿದ್ದರೂ ಅನ್ಯ ಧರ್ಮದ-ಧರ್ಮೀಯರ ಬಗ್ಗೆ ವಿಮರ್ಶಿಸುತ್ತಾರೆ. ಅವರ ವೇಷ ಭೂಷಣ, ಹೆಣ್ಣುಮಕ್ಕಳು, ಆರಾಧನಾಲಯಗಳು- ಕ್ರಮಗಳು, ಅವರ ದೇಶಪ್ರೇಮ....ಒಟ್ಟಾರೆ, ಜನಮನವನ್ನು ಕೆಡಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ.

ಅಲ್ಲಿ ಒಟ್ಟು ಕಾರ್ಯಕ್ರಮದ ಉದ್ದೇಶವೇ ವಿಫಲಗೊಳ್ಳುತ್ತದೆ. ಪ್ರಚೋದಿತ ಭಾಷಣ ಮಾಡಿ, ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕೆಲವರಿಂದ ಚಪ್ಪಾಳೆ ಗಿಟ್ಟಿಸಿ ಅವರು ತೆರಳುತ್ತಾರೆ. ಪರಿಣಾಮ.... ಶಾಂತಿ, ಸಮಾಧಾನ, ಅನ್ಯೋನ್ಯತೆ ಇರುವ ನಾಡಲ್ಲಿ ಸಂಶಯದ, ಭಿನ್ನತೆಯ ಬೀಜ ಮೊಳಕೆಯೊಡೆಯುತ್ತವೆ. ಅವರು ನೀಡಿದ ಧರ್ಮದ ಅಫೀಮನ್ನು ಸೇವಿಸಿದ ಒಂದು ವಿಭಾಗ ಅನ್ಯಧರ್ಮೀಯರನ್ನು ದ್ವೇಷಿಸಲು ಆರಂಭಿಸುತ್ತದೆ. ಅವರ ಆರಾಧನಾಲಯಗಳು, ವ್ಯವಹಾರಗಳು, ಪದ್ಧತಿಗಳನ್ನು ನಾಶಗೊಳಿಸುವ ಪ್ರಯತ್ನಮಾಡುತ್ತದೆ. ದಿನಬೆಳಗಾದರೆ ಹೆಗಲಿಗೆ ಹೆಗಲುಕೊಟ್ಟು ದುಡಿಯುವ ಮಂದಿಯ ನಡುವೆ ಕೋಮುಭಾವನೆಯ ವಿಷಬೀಜ ಮೊಳೆಯುತ್ತದೆ. ರಾಜಕೀಯ ಪಕ್ಷಗಳು ಇದರ ದುರ್ಲಾಭ ಪಡೆದು, ಅಧಿಕಾರವನ್ನು ಪಡೆಯುತ್ತವೆ.
ದೇವತಾ ಕಾರ್ಯದಲ್ಲಿ ಇನ್ನಿತರ ಮಾತು ಸಲ್ಲದು. ಅದು ಮನುಷ್ಯ ಸ್ನೇಹಿ ವೇದಿಕೆಯಾಗಬೇಕು. ಇತರ ಧರ್ಮೀಯರೂ ಪಾಲ್ಗೊಳ್ಳುವ ಸೌಹಾರ್ದ ವಾತಾವರಣವಿರಬೇಕು. ಒಟ್ಟಾರೆ, ದೇವರು ಮೆಚ್ಚಿ ಹರಸುವ ಯಶಸ್ವಿ ಕಾರ್ಯಕ್ರಮವಾಗಬೇಕು. ಅದಕ್ಕಾಗಿ, ಲಂಗುಲಗಾಮಿಲ್ಲದೆ ನಾಲಗೆ ಹರಿಯಬಿಡುವ ಮಂದಿಯನ್ನು ದೂರವಿಡಬೇಕು.

share
-ಹೈದರ್ ಅಲಿ, ಐವತ್ತೊಕ್ಲು,
-ಹೈದರ್ ಅಲಿ, ಐವತ್ತೊಕ್ಲು,
Next Story
X