Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾಧ್ಯಮಗಳು ಯಾರಿಗೆ ಜವಾಬ್ದಾರರಾಗಿರಬೇಕು?

ಮಾಧ್ಯಮಗಳು ಯಾರಿಗೆ ಜವಾಬ್ದಾರರಾಗಿರಬೇಕು?

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ತನ್ನ ಹೊಣೆಗಾರಿಕೆ ಹಾಗೂ ಉದ್ದೇಶಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು.

ಕೃಪೆ: Economic and Political Weeklyಕೃಪೆ: Economic and Political Weekly12 Sept 2019 11:53 PM IST
share
ಮಾಧ್ಯಮಗಳು ಯಾರಿಗೆ ಜವಾಬ್ದಾರರಾಗಿರಬೇಕು?

ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮಾಧ್ಯಮವೊಂದು ಎರಡು ಕರ್ತವ್ಯಗಳನ್ನು ನಿರ್ವಹಿಸಬೇಕಿರುತ್ತದೆ. ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಜನರು ತೀರ್ಮಾನಕ್ಕೆ ಬರಲು ಸಹಾಯವಾಗುವಂತೆ ಮಾಹಿತಿಗಳನ್ನು ತಲುಪಿಸುವುದು ಮತ್ತು ಜನರ ಅದರಲ್ಲೂ ತಮ್ಮ ಧ್ವನಿ ದುರ್ಬಲ ಎಂದು ಭಾವಿಸುವ ಜನವರ್ಗದ ದುಮ್ಮಾನಗಳಿಗೆ ಮತ್ತು ಸಲಹೆಗಳಿಗೆ ವೇದಿಕೆಯಾಗುವುದು. ರಾಷ್ಟ್ರದ ಸಮಗ್ರತೆಯನ್ನು ಸಾಧಿಸಲು ಇವು ಅತ್ಯಂತ ಕೀಲಕವಾದ ಅಂಶಗಳಲ್ಲವೇ?


ಮಾಧ್ಯಮಗಳು ತಮ್ಮ ಕಿವಿಗಳನ್ನು ನೆಲಕ್ಕೆ ಆನಿಸಿಕೊಂಡಿರಬೇಕಿರುವುದು ಮಾತ್ರವಲ್ಲದೆ, ತಳಮಟ್ಟದಲ್ಲಿರುವ ಜನರಿಗೆ ಅತ್ಯಂತ ಸಮೀಪವೂ ಇರಬೇಕಿರುವುದು ಎಷ್ಟು ಅಗತ್ಯವೆಂಬುದನ್ನು ಭಾರತದ ಮಾಧ್ಯಮರಂಗದಲ್ಲಿ ಇತ್ತೀಚೆಗೆ ನಡೆದ ಎರಡು ಪ್ರಸಂಗಗಳು ಸಾಬೀತುಪಡಿಸುತ್ತವೆ. ಎಷ್ಟೇ ಆದರೂ ಒಂದು ಪ್ರಜಾಸತ್ತಾತ್ಮಕ ಸರಕಾರದ ತಳಹದಿಯೇ ಚುನಾವಣೆಯಂತಹ ಮೂಲಭೂತ ಪ್ರಕ್ರಿಯೆಗಳ ಮೂಲಕ ಹಾಗೂ ಇನ್ನಿತರ ಸಾಧನಗಳ ಮೂಲಕ ವ್ಯಕ್ತಪಡಿಸುವ ಅಭಿಪ್ರಾಯವೇ ಆಗಿದೆ. ಹೀಗಾಗಿ ಮಾಧ್ಯಮಗಳು ತಮ್ಮ ಧ್ವನಿಯ ಋಜುತ್ವವನ್ನು ಕಾಪಾಡಿಕೊಳ್ಳಬೇಕೆಂದರೆ ಸರಕಾರ ಮತ್ತು ಆಡಳಿತ ಯಂತ್ರಾಂಗದಿಂದ ಒಂದು ವಿಮರ್ಶಾತ್ಮಕ ಅಂತರವನ್ನು ಕಾದುಕೊಳ್ಳುವುದು ಕೂಡಾ ಅತ್ಯಗತ್ಯ. ಉತ್ತರಪ್ರದೇಶದ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟದ ಭಾಗವಾಗಿ ಶಾಲಾ ಮಕ್ಕಳಿಗೆ ರೊಟ್ಟಿಯ ಜೊತೆಗೆ ಉಪ್ಪನ್ನು ನೀಡುತ್ತಿರುವುದನ್ನು ವರದಿ ಮಾಡಿದ್ದಕ್ಕಾಗಿ ಆ ಪತ್ರಕರ್ತನ ಮೇಲೆ ಉತ್ತರಪ್ರದೇಶದ ಮಿರ್ಜಾಪುರ್ ಪೊಲೀಸರು ಸರಕಾರದ ವಿರುದ್ಧ ಸಂಚು ನಡೆಸಿದ ಪ್ರಕರಣವನ್ನು ದಾಖಲಿಸಿ ಬಂಧಿಸಿದರು. ಅದಕ್ಕೆ ಮುಂಚೆ ಕಾಶ್ಮೀರದ ಪತ್ರಕರ್ತರೊಬ್ಬರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪರ್ಕ-ಸಂವಹನದ ಮೇಲೆ ವಿಧಿಸಲಾಗಿರುವ ನಿರ್ಬಂಧದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿದ ಪ್ರಕರಣದಲ್ಲಿ ಮಾಜಿ ನ್ಯಾಯಾಧೀಶರೂ ಆಗಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ (ಪಿಸಿಐ) ಅಧ್ಯಕ್ಷರು ಸರಕಾರದ ಪರವಾಗಿ ಮಧ್ಯಪ್ರವೇಶ ಮಾಡಿದರು. ಎರಡೂ ಪ್ರಕರಣಗಳಲ್ಲಿರುವ ವಿಪರ್ಯಾಸಗಳು ಕಣ್ಣಿಗೆ ರಾಚುವಂತಿದೆಯಲ್ಲದೆ ಚಿಂತೆಗೀಡು ಮಾಡುವಂತಿದೆ. ಮೊದಲನೇ ಪ್ರಕರಣದಲ್ಲಿ ವರದಿಯು ಬಯಲು ಮಾಡಿದ ಸತ್ಯಸಂಗತಿಗಳ ಬಗ್ಗೆ ಕ್ರಮತೆಗೆದುಕೊಳ್ಳುವ ಬದಲಿಗೆ ವರದಿಗಾರನ ಮೇಲೆ ಕ್ರಮತೆಗೆದುಕೊಳ್ಳಲಾಗಿದೆ. ಎರಡನೇ ಪ್ರಕರಣದಲ್ಲಿ ಯಾವ ಉದ್ದೇಶ ಮತ್ತು ಹೊಣೆಗಾರಿಕೆಗಳಿಗಾಗಿ ಪ್ರೆಸ್ ಕೌನ್ಸಿಲ್ ಅನ್ನು ರಚಿಸಲಾಯಿತೋ ಅದಕ್ಕೆ ತದ್ವಿರುದ್ಧವಾಗಿ ಆ ಸಂಸ್ಥೆ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರ ಪರವಾಗಿ ವಕಾಲತ್ತು ವಹಿಸಲು ಹೊರಟಿದೆ.

ಒಂದು ಪ್ರಜಾತಾಂತ್ರಿಕ ಸಮಾಜದಲ್ಲಿ ಮಾಧ್ಯಮವು ಮುಕ್ತವೂ ಆಗಿರಬೇಕು ಮತ್ತು ಜವಾಬ್ದಾರಿಯುತವಾಗಿಯೂ ನಡೆದುಕೊಳ್ಳುವಂತಿರಬೇಕು ಎನ್ನುವ ಚಿಂತನೆಯ ಆಧಾರದ ಮೇಲೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಜನ್ಮ ತಾಳಿದೆ. ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರಶ್ನೆಯೇನೆಂದರೆ ಅಂತಿಮವಾಗಿ ಮಾಧ್ಯಮಗಳು ಯಾರಿಗೆ ಜವಾಬುದಾರರಾಗಿರಬೇಕು? ಈ ದೇಶದ ಜನತೆಗೇ ಜವಾಬುದಾರರಾಗಿರಬೇಕೆಂಬುದು ಇದಕ್ಕೆ ದೊರೆಯುವ ಸ್ಪಷ್ಟವಾದ ಉತ್ತರ. ಕುತೂಹಲದಾಯಕ ವಿಷಯವೇನೆಂದರೆ, ಪಿಸಿಐ ಸ್ಥಾಪನೆಯ ಕಾರಣಗಳನ್ನು ವಿಷದೀಕರಿಸುತ್ತಾ ನೀಡಲಾಗಿರುವ ಒಂದು ಕಾರಣವೇನೆಂದರೆ ‘‘ಸರಕಾರದ ಅಥವಾ ಸರಕಾರಿ ಅಧಿಕಾರಿಗಳ ನಿಯಂತ್ರಣವು ಮಾಧ್ಯಮ ಸ್ವಾತಂತ್ರಕ್ಕೆ ಮಾರಕ’’ ಎಂಬುದಾಗಿದೆ. ಹೀಗಾಗಿ ಅದರ ಬದಲಿಗೆ ಮಾಧ್ಯಮ ವೃತ್ತಿಯಲ್ಲಿರುವವರೇ ಸೂಕ್ತವಾದ ಸಂರಚನೆಯಿಂದ ಕೂಡಿರುವ, ಪ್ರಾತಿನಿಧಿಕವಾಗಿರುವ ಮತ್ತು ಪಕ್ಷಪಾತ ಮುಕ್ತ ಸಂಸ್ಥೆಯನ್ನು ರಚಿಸಿಕೊಂಡು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲೆಂದೇ ಪಿಸಿಐ ಸ್ಥಾಪನೆಯಾಯಿತು.

ಕಳೆದ ಹಲವಾರು ದಶಕಗಳಿಂದ ಪಿಸಿಐ ಅನ್ನು ಅಧಿಕಾರವಿಲ್ಲದ ಸಂಸ್ಥೆಯೆಂದು ದೂರುತ್ತಾ ಬರಲಾಗಿದೆ. ಆದರೆ ಹಲವಾರು ಸಂದರ್ಭಗಳಲ್ಲಿ ಅದರ ಕೊಡುಗೆಯನ್ನು ಸಹ ಗುರುತಿಸಿ ಪ್ರಶಂಸಿಸಲಾಗಿದೆ. 1990ರ ದಶಕದಲ್ಲಿ ಪಂಜಾಬು ಮಿಲಿಟೆನ್ಸಿಗೆ ತುತ್ತಾಗಿದ್ದ ಸಂದರ್ಭದಲ್ಲಿ ಮಾಧ್ಯಮದ ಸ್ವಾತಂತ್ರ್ಯದ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದ್ದಕ್ಕಾಗಿ ಪಿಸಿಐ ಅಪಾರ ಪ್ರಶಂಸೆಗೆ ಭಾಜನವಾಗಿದ್ದು ಅಂತಹ ಪ್ರಕರಣಗಳಲ್ಲಿ ಒಂದು. ಅಯೋಧ್ಯಾ ಮಂದಿರ-ಮಸೀದಿ ಹೋರಾಟದ ಸಂದರ್ಭದಲ್ಲೂ ಪತ್ರಿಕೆಗಳು ಒಂದು ಸಮುದಾಯದ ಪರವಾಗಿ ಪೂರ್ವಗ್ರಹದಿಂದ ವರದಿ ಮಾಡಿ ಕೋಮು ಧ್ರುವೀಕರಣಕ್ಕೆ ಕಾರಣವಾಗಿದ್ದರ ಬಗ್ಗೆಯೂ ಪಿಸಿಐ ಪತ್ರಿಕೆಗಳನ್ನು ಬಲವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಕಾಶ್ಮೀರದ ಪ್ರಕರಣದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಮಗ್ರತೆಯ ದೃಷ್ಟಿಯಿಂದ ತಾನು ಸುಪ್ರೀಂ ಕೋರ್ಟಿನಲ್ಲಿ ಮಧ್ಯಪ್ರವೇಶ ಮಾಡಿದ್ದೇನೆಂದು ಪಿಸಿಐನ ಅಧ್ಯಕ್ಷರು ಸಮರ್ಥಿಸಿಕೊಂಡಿದ್ದಾರೆ. ‘ಕಾಶ್ಮೀರ್ ಟೈಮ್ಸ್’ನ ಕಾರ್ಯನಿರ್ವಾಹಕ ಸಂಪಾದಕರು ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿರುವ ಅಹವಾಲಿನಲ್ಲಿ ಕಳೆದ ಆಗಸ್ಟ್ 5ರಿಂದ ಕಾಶ್ಮೀರದಲ್ಲಿ ಸರಕಾರವು ಸಂಪರ್ಕ ಸಂವಹನ ಮತ್ತು ಪತ್ರಕರ್ತರ ಓಡಾಟಗಳ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆರವು ಮಾಡಬೇಕೆಂದು ಮನವಿ ಮಾಡಿದ್ದಾರೆ. ಈ ನಿರ್ಬಂಧದಿಂದಾಗಿ ಕಾಶ್ಮೀರವನ್ನು ಸಂಪೂರ್ಣವಾಗಿ ಪ್ರತ್ಯೇಕಗೊಳಿಸಿ ಮಾಧ್ಯಮವನ್ನು ನಿರ್ಬಲಗೊಳಿಸಲಾಗಿದೆ. ಆದ್ದರಿಂದ ತಮ್ಮ ಬದುಕಿನ ಮೇಲೆ ಪ್ರಭಾವ ಬೀರುವ ತೀರ್ಮಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಹಕ್ಕಿನಿಂದ ಜನರು ವಂಚಿತರಾಗುತ್ತಿದ್ದಾರೆ ಎಂದು ಆ ಅಹವಾಲಿನಲ್ಲಿ ಹೇಳಲಾಗಿದೆ. ಅಸಲಿ ವಿಷಯವಿರುವುದೇ ಇಲ್ಲಿ. ಒಂದು ನಿರ್ದಿಷ್ಟ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅದರ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವಂತೆ ಮಾಡುವುದರಲ್ಲಿ ರಾಷ್ಟ್ರೀಯ ಹಿತಾಸಕ್ತಿಯಿಲ್ಲವೇ? ಮತದಾರರು ಇನ್ನು ಹೇಗೆ ತಾನೆ ತಮ್ಮ ನಿರ್ಣಯಗಳನ್ನು ರೂಪಿಸಿಕೊಳ್ಳುತ್ತಾರೆ? ಭಾರತದ ಮಾಧ್ಯಮಗಳ ಮೂಲಕ ಕಾಶ್ಮೀರದಲ್ಲಿ ಏನು ನಡೆಯುತ್ತಿದೆಯೆಂಬ ವಾಸ್ತವ ಚಿತ್ರಣ ಸಿಗುವುದಿಲ್ಲ ಎಂಬುದಂತೂ ಸುಸ್ಪಷ್ಟ. ಇಲ್ಲಿ ಗುರುತಿಸಬೇಕಾದ ಮತ್ತೊಂದು ಸಂಗತಿಯೆಂದರೆ ಭಾರತದ ಮಾಧ್ಯಮಕ್ಕೆ 1857ರ ಭಾರತದ ಪ್ರಥಮ ಸ್ವಾತಂತ್ರ್ಯಕ್ಕೆ ಪೂರ್ವದಿಂದಲೂ ಒಂದು ಉಜ್ವಲವಾದ ಇತಿಹಾಸವಿದೆ.

19ನೇ ಶತಮಾನದ ಅಂತ್ಯದಿಂದ, ಹಾಗೂ ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಭಾರತದ ಮಾಧ್ಯಮದ ಇತಿಹಾಸವು ಕೆಚ್ಚೆದೆಯಿಂದ ಕೂಡಿದ, ಅಪಾಯಗಳನ್ನು ಅರಿತೂ ಸಾಹಸಕ್ಕೆ ಮುಂದಾದ ಹಾಗೂ ನಿಸ್ವಾರ್ಥದ ಕಥನಗಳಿಂದ ತುಂಬಿಹೋಗಿದೆ. ಈ ಬಗೆಯ ಹಲವಾರು ಪತ್ರಕರ್ತರು ಸ್ವಯಂ ಸಾಮಾಜಿಕ ಸುಧಾರಕರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿರುತ್ತಿದ್ದರು. ಅಷ್ಟು ಮಾತ್ರವಲ್ಲ, ಬ್ರಿಟಿಷ್ ಸರಕಾರದಿಂದ ಕ್ರೂರ ದಂಡನೆಗಳಿಗೆ ಗುರಿಯಾಗಬೇಕಾಗುತ್ತದೆಂದು ಗೊತ್ತಿದ್ದರೂ ತಮ್ಮಲ್ಲಿದ್ದ ಅಲ್ಪಸ್ವಲ್ಪಸಂಪನ್ಮೂಲಗಳನ್ನೂ ವ್ಯಯಮಾಡಿ ಇಂಗ್ಲಿಷ್ ಭಾಷೆಯನ್ನು ಒಳಗೊಂಡಂತೆ ಇತರ ಹಲವಾರು ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು.

ಪಿಸಿಐನ ಅಧ್ಯಕ್ಷರ ಮೇಲಿನ ಕ್ರಮವನ್ನು ಹಲವಾರು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಬಹಿರಂಗವಾಗಿ ಖಂಡಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಸುಪ್ರೀಂಕೋರ್ಟಿನಲ್ಲಿ ಪಿಸಿಐನ ಅಧ್ಯಕ್ಷರು ತಮ್ಮ ಅಹವಾಲನ್ನು ದಾಖಲು ಮಾಡುವ ಮುನ್ನ ಅವರು ಆ ಸಂಸ್ಥೆಯ ಕೆಲವು ಸದಸ್ಯರ ಜೊತೆ ಸಮಾಲೋಚನೆಯನ್ನೇ ಮಾಡಿರಲಿಲ್ಲವೆಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ. ಆ ಸಂಸ್ಥೆಯ ಅಧ್ಯಕ್ಷರು ತಮ್ಮ ಕ್ರಮದ ಬಗ್ಗೆ ಕೇವಲ ಪತ್ರಕರ್ತ ಸಮುದಾಯದ ಮುಂದೆ ಮಾತ್ರವಲ್ಲದೆ ಸಾರ್ವಜನಿಕರ ಮುಂದೆಯೂ ಬಹಿರಂಗ ವಿವರಣೆಯನ್ನು ನೀಡಬೇಕೆಂದು ಪತ್ರಕರ್ತರು ಆಗ್ರಹಿಸಬೇಕು. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮಾಧ್ಯಮವೊಂದು ಎರಡು ಕರ್ತವ್ಯಗಳನ್ನು ನಿರ್ವಹಿಸಬೇಕಿರುತ್ತದೆ. ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಜನರು ತೀರ್ಮಾನಕ್ಕೆ ಬರಲು ಸಹಾಯವಾಗುವಂತೆ ಮಾಹಿತಿಗಳನ್ನು ತಲುಪಿಸುವುದು ಮತ್ತು ಜನರ ಅದರಲ್ಲೂ ತಮ್ಮ ಧ್ವನಿ ದುರ್ಬಲ ಎಂದು ಭಾವಿಸುವ ಜನವರ್ಗದ ದುಮ್ಮನಗಳಿಗೆ ಮತ್ತು ಸಲಹೆಗಳಿಗೆ ವೇದಿಕೆಯಾಗುವುದು. ರಾಷ್ಟ್ರದ ಸಮಗ್ರತೆಯನ್ನು ಸಾಧಿಸಲು ಇವು ಅತ್ಯಂತ ಕೀಲಕವಾದ ಅಂಶಗಳಲ್ಲವೇ?

share
ಕೃಪೆ: Economic and Political Weekly
ಕೃಪೆ: Economic and Political Weekly
Next Story
X