ಆರೋಪಿಗೆ ಸಬ್ಇನ್ಸ್ಪೆಕ್ಟರ್ ಥಳಿತ ಪ್ರಕರಣ: ತನಿಖೆಗೆ ಮಾಜಿ ಡಿಸಿಎಂ ಆಗ್ರಹ
![ಆರೋಪಿಗೆ ಸಬ್ಇನ್ಸ್ಪೆಕ್ಟರ್ ಥಳಿತ ಪ್ರಕರಣ: ತನಿಖೆಗೆ ಮಾಜಿ ಡಿಸಿಎಂ ಆಗ್ರಹ ಆರೋಪಿಗೆ ಸಬ್ಇನ್ಸ್ಪೆಕ್ಟರ್ ಥಳಿತ ಪ್ರಕರಣ: ತನಿಖೆಗೆ ಮಾಜಿ ಡಿಸಿಎಂ ಆಗ್ರಹ](https://www.varthabharati.in/sites/default/files/images/articles/2019/09/13/209807-1568383353.jpg)
ಬೆಂಗಳೂರು, ಸೆ.13: ಆರೋಪಿಯೊಬ್ಬನಿಗೆ ಸುಬ್ರಹ್ಮಣ್ಯ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಕಂಠೇಗೌಡ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣ ಸಂಬಂಧ ಗೃಹ ಸಚಿವರು ತನಿಖೆ ನಡೆಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.
ಈ ಕುರಿತು ಶುಕ್ರವಾರ ಟ್ವಿಟ್ ಮಾಡಿರುವ ಅವರು, ಆರೋಪಿಯೊಬ್ಬರಿಗೆ ಪೋಲೀಸ್ ಠಾಣೆಯಲ್ಲಿ ಕಿರುಕುಳ ಕೊಟ್ಟಿರುವ ದೃಶ್ಯಾವಳಿ ಗಮನಕ್ಕೆ ಬಂದಿದೆ. ಇಂತಹ ಘಟನೆಗಳಿಂದಲೇ ಪೋಲೀಸರ ಮೇಲೆ ಜನರಲ್ಲಿ ಭೀತಿ ಹೆಚ್ಚುವುದು. ಆರೋಪಿಯನ್ನು ಅಪರಾಧಿಯೆಂದು ನಿರ್ಧರಿಸಿ ಶಿಕ್ಷಿಸುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇರುವುದು. ಹಾಗಾಗಿ, ಈ ಬಗ್ಗೆ ಕೂಡಲೇ ಗೃಹ ಸಚಿವರು ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
Next Story