Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ವೆವಿಧ್ಯವನ್ನು ಎತ್ತಿ ಹಿಡಿಯುವ ‘ಮರು...

ವೆವಿಧ್ಯವನ್ನು ಎತ್ತಿ ಹಿಡಿಯುವ ‘ಮರು ರೂಪಗಳು’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ23 Sept 2019 12:08 AM IST
share
ವೆವಿಧ್ಯವನ್ನು ಎತ್ತಿ ಹಿಡಿಯುವ ‘ಮರು ರೂಪಗಳು’

ಈ ದೇಶದ ಬಹು ಸಂಸ್ಕೃತಿಯನ್ನು ಏಕಸಂಸ್ಕೃತಿಯ ಪಾತ್ರೆಯಲ್ಲಿ ಕರಗಿಸುವ ಪ್ರಯತ್ನ ನಡೆಸುತ್ತಿರುವ ದಿನಗಳು ಇವು. ಇಡೀ ದೇಶದ ಭಾಷೆಯನ್ನು, ಮಾತನ್ನು, ಅಭಿವ್ಯಕ್ತಿಯನ್ನು ಹಿಂದಿಯ ಮೂಲಕ ಹಿಡಿದಿಡಲು ಪ್ರಭುತ್ವ ಪ್ರಯತ್ನಿಸುತ್ತಿದೆ. ಈಗಾಗಲೇ ಇಂಗ್ಲಿಷ್ ದಾಳಿಯಿಂದ ತತ್ತರಿಸಿರುವ ಪ್ರಾದೇಶಿಕ ಭಾಷೆಗಳಿಗೆ ಹಿಂದಿ ಇನ್ನೊಂದು ಸವಾಲಾಗಿ ಪರಿಣಮಿಸಿದೆ. ಇಂಗ್ಲಿಷ್‌ಗಿಂತ ಹಿಂದಿ ಭಿನ್ನವಾದುದು. ಅವಕಾಶಗಳನ್ನು ತನ್ನದಾಗಿಸಲು ಅನಿವಾರ್ಯ ಎನ್ನುವ ಕಾರಣಕ್ಕಾಗಿ ಇಂಗ್ಲಿಷನ್ನು ಪ್ರಾದೇಶಿಕ ಭಾಷೆಯ ಜೊತೆ ಜೊತೆಗೇ ಒಪ್ಪಿಕೊಂಡಿದ್ದಾರೆ. ಆದರೆ ಹಿಂದಿಯನ್ನು ಆ ರೀತಿಯಲ್ಲಿ ಒಪ್ಪಿಕೊಳ್ಳುವುದಕ್ಕೆ ಯಾವುದೇ ಕಾರಣವಿಲ್ಲ. ಈ ದೇಶದ ಸಾಂಸ್ಕೃತಿಕ ಏಕ ಸೂತ್ರಕ್ಕೆ ತರುವ ದುರುದ್ದೇಶ ಬಿಟ್ಟರೆ ಅದರ ಹಿಂದೆ ಇನ್ನೇನೂ ಇಲ್ಲ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಬೇರೆ ಬೇರೆ ಭಾಷೆಗಳನ್ನು ಇನ್ನಿತರ ಭಾಷೆಗಳಿಗೆ ಭಾಷಾಂತರಿಸುತ್ತಾ ದೇಶದ ವೈವಿಧ್ಯಗಳನ್ನು ಎತ್ತಿ ಹಿಡಿಯುವ ಅನಿವಾರ್ಯ ಹಿಂದೆಂದಿಗಿಂತ ಹೆಚ್ಚಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರತಿ ವರ್ಷ ಅನುವಾದ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಗಳು ಈ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
‘ಮರು ರೂಪಗಳು’ ಪ್ರಾಧಿಕಾರದ ಒಂದು ವಿಶಿಷ್ಟ ಪ್ರಯತ್ನವಾಗಿದೆ. ಈ ಕೃತಿಯಲ್ಲಿ ಹತ್ತು ಭಾಷೆಗಳಲ್ಲಿ ಬಂದಿರುವ ಕವಿತೆಗಳನ್ನು ಒಟ್ಟು ಸೇರಿಸಲಾಗಿದೆ. ಪ್ರಾದೇಶಿಕ ಭಾಷೆಗಳು ಹೇಗೆ ತನ್ನ ವೈವಿಧ್ಯಗಳ ಮೂಲಕವೇ ಈ ದೇಶವನ್ನು ಸುಂದರವಾಗಿಸಿದೆ ಎನ್ನುವುದನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಹಿರಿಯ ಕವಿ ಎಚ್. ಎಸ್. ಶಿವಪ್ರಕಾಶ್ ಅವರು ಸುಮಾರು 25 ವರ್ಷಗಳ ಹಿಂದೆ ವಿವಿಧ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ ಕವಿತೆಗಳ ಸಂಕಲನ ಇದು. ಹಿಂದಿ, ಉರ್ದು, ಕಾಶ್ಮೀರಿ, ಇಂಗ್ಲಿಷ್, ನೈಜೀರಿಯಾ, ಐರ್ಲೆಂಡ್, ತಮಿಳು, ಪಾಕಿಸ್ತಾನಿ, ಬಂಗಾಳಿ, ಜರ್ಮನಿ, ಚಿಲಿ, ಒರಿಯಾ ಸೇರಿದಂತೆ ಹಲವು ಭಾಷೆಗಳ, ದೇಶಗಳ ಕವಿತೆಗಳು ಇಲ್ಲಿವೆ. ಗಜಾನನ ಮಾಧವ ಮುಕ್ತಿಬೋಧ್, ನೂನ್ ಮೀಮ್ ರಾಶಿದ್, ಬೋರಿಸ್ ಪಾಸ್ತರ್‌ನಾಕ್, ಸಂತ ತುಕರಾಮ, ವಿಲಿಯಂ ಬಟ್ಲರ್ ಏಟ್ಸ್, ತಿರುನಾವುಕ್ಕರಸ್ ಅಪ್ಪರ್, ವಿಲಿಯಂ ಬ್ಲೇಕ್, ಅಖ್ತರ್ ಉಲ್ ಈಮಾನ್, ವೊಲೆಪೊಯಿಂಕಾ, ಕಾಳಿದಾಸ, ರವೀಂದ್ರನಾಥ ಠಾಗೋರ್, ಪಾಬ್ಲೋ ನೆರೂಡ, ಹೀಬಾ ಖಾತೂನ್, ರಮಾಕಾಂತ ರಥ, ವಿಲಿಯಂ ಶೇಕ್ಸ್‌ಪಿಯರ್, ಜಫರ್ ಇಕ್ಬಾಲ್...ಹೀಗೆ ಬೇರೆ ಬೇರೆ ಭಾಷೆಗಳ ಕವಿಗಳು ಇಲ್ಲಿ ಕಾವ್ಯದ ಮೂಲಕ ಒಂದಾಗಿದ್ದಾರೆ.
‘ಈ ಕರಗಳ ಝಣಕಾರವೇ...ಅರಿವಿನ ಮುಂಗಣ್ಣು’’ ಎಂದು ಉರ್ದುವಿನಲ್ಲಿ ಬರೆಯುವ ನೂನ್ ಮೀಮ್ ರಾಶಿದ್, ‘‘ಇದು ಕೆಟ್ಟ ಕಾಲ, ಹಾಡು ಕವಿತೆಗಳು ಕೆಟ್ಟಜನರ ಕಸುಬು/ಕಪಟ ವೇಷಿಗಳು ನೆಲಕೆ ನೆಲವನ್ನ ಲೂಟಿ ಹೊಡೆದವರಿಂದ...’’ ಎಂದು ಬರೆಯುವ ಸಂತ ತುಕರಾಮ, ‘ತುಂಬಾ ನಾಚಿಕೆ ನನಗೆ/ನಾನೂನು ನಿಮ್ಮ ಜೊತೆ ಹರಿಸಲಿಲ್ಲ ರಕ್ತ...’ ಎಂದು ವರ್ತಮಾನವನ್ನು ಹಿಂದಿಯಲ್ಲಿ ವ್ಯಂಗ್ಯ ಮಾಡುವ ಗಜಾನನ ಮಾಧವ ಮುಕ್ತಿಬೋಧ್, ‘ಬಾ ಬಾರೋ ಗೆಣೆಕಾರ...’ ಎಂದು ಕಾಶ್ಮೀರಿ ಭಾಷೆಯಲ್ಲಿ ಹಾಡುವ ಹೀಬಾ ಖಾತೂನ್....ಇಲ್ಲಿರುವ ಎಲ್ಲ ಕವಿತೆಗಳು ವರ್ತಮಾನದ ಕಲ್ಲೆದೆಯನ್ನು ತಟ್ಟುವಂಥವುಗಳು. 190 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ.

share
-ಕಾರುಣ್ಯಾ
-ಕಾರುಣ್ಯಾ
Next Story
X