ಕಲಬೆರಕೆ ಸೇಂದಿ ಮಾರಾಟ: ಆರೋಪಿಗಳ ಸೆರೆ
![ಕಲಬೆರಕೆ ಸೇಂದಿ ಮಾರಾಟ: ಆರೋಪಿಗಳ ಸೆರೆ ಕಲಬೆರಕೆ ಸೇಂದಿ ಮಾರಾಟ: ಆರೋಪಿಗಳ ಸೆರೆ](https://www.varthabharati.in/sites/default/files/images/articles/2019/09/24/211726-1569347664.jpg)
ರಾಯಚೂರು, ಸೆ.24: ಕಲಬೆರಕೆ ಸೇಂದಿ ಮಾರಾಟ ಜಾಲ ಪತ್ತೆ ಸಲುವಾಗಿ ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಅಬಕಾರಿ ಅಧಿಕಾರಿ, ಬರೋಬ್ಬರಿ 1500 ಲೀಟರ್ ಕಲಬೆರಕೆ ಸೇಂದಿ ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಮೈಲಾರ ನಗರದಲ್ಲಿ ಆರೋಪಿ ನರಸಿಂಹಲು ಎಂಬಾತನ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳು, ಒಂದೇ ತಿಂಗಳಲ್ಲಿ ನಾಲ್ಕನೆ ಬಾರಿ ದಾಳಿ ನಡೆಸಿದ್ದು, ಈ ವೇಳೆ ಸಿಎಚ್ ಪೌಡರ್ ಕಲಬೆರಕೆ ಸೇಂದಿ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಮಲ್ಲಯ್ಯ, ಮಲ್ಲೇಶ್ ನಾಯಕ್, ಹಝೀ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ನರಸಿಂಹಲು, ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡು ಕಲಬೆರಕೆ ಸೇಂದಿ ತಯಾರಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
Next Story