ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಪದಕ ವಿಜೇತರಿಗೆ ಮಂಗಳೂರಿನಲ್ಲಿ ಭವ್ಯ ಸ್ವಾಗತ

ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡಕ್ಕೆ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮೂವರ ಪೈಕಿ ಪ್ರದೀಪ್ ಆಚಾರ್ಯ (ಹಿರಿಯರ ವಿಭಾಗ) ಮತ್ತು ಹೃತಿಕ್ ಅಲೆವೂರಾಯ (ಕಿರಿಯರ ವಿಭಾಗ) ಅವರು ಬುಧವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಹೃತ್ಪೂರ್ವಕ ಸ್ವಾಗತ ಕೋರಲಾಯಿತು. ವಿಜೇತರೊಂದಿಗೆ ತರಬೇತುದಾರ ಸತೀಶ್ ಕುದ್ರೋಳಿ ಅವರನ್ನೂ ಬರಮಾಡಿಕೊಳ್ಳಲಾಯಿತು.





