ದ್ರಾವಿಡ್ ವಿರುದ್ಧ ಹಿತಾಸಕ್ತಿ ಸಂಘರ್ಷ ಆರೋಪ: ಇಂದು ಡಿಕೆ ಜೈನ್ ತೀರ್ಪು

ಹೊಸದಿಲ್ಲಿ, ಸೆ.25: ಬಹು ಚರ್ಚಿತ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್ಸಿಎ) ಅಧ್ಯಕ್ಷ ರಾಹುಲ್ ದ್ರಾವಿಡ್ ವಿರುದ್ಧ ಕೇಳಿಬಂದಿರುವ ಹಿತಾಸಕ್ತಿ ಸಂಘರ್ಷದ ಕುರಿತು ಬಿಸಿಸಿಐ ಎಥಿಕ್ಸ್ ಅಧಿಕಾರಿ ಡಿ.ಕೆ. ಜೈನ್ ಗುರುವಾರ ನಿರ್ಧಾರ ಪ್ರಕಟಿಸಲಿದ್ದಾರೆ.
ಭಾರತದ ಮಾಜಿ ನಾಯಕ ದ್ರಾವಿಡ್ ಎನ್ಸಿಎ ಅಧ್ಯಕ್ಷ ಹುದ್ದೆಯ ಜೊತೆಗೆ ಇಂಡಿಯಾ ಸಿಮೆಂಟ್ಸ್ ನಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಆಜೀವ ಸದಸ್ಯ ಸಂಜೀವ್ ಗುಪ್ತಾ ದೂರು ಸಲ್ಲಿಸಿದ್ದರು. ದ್ರಾವಿಡ್ ಇಂಡಿಯಾ ಸಿಮೆಂಟ್ಸ್ನ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಆಡಳಿತಾಧಿಕಾರಿಗಳ ಸಮಿತಿ ಅಧ್ಯಕ್ಷ ವಿನೋದ್ ರಾಯ್ ಹೇಳಿದ್ದಾರೆ. ಆದರೆ, ದ್ರಾವಿಡ್ ಕಂಪೆನಿಯಿಂದ ರಜೆ ಪಡೆದಿದ್ದಾರೆ ಹೊರತು ಹುದ್ದೆಯನ್ನು ತ್ಯಜಿಸಿಲ್ಲ ಎಂದು ಸಿಒಎನ ಇನ್ನೋರ್ವ ಸದಸ್ಯರು ಹೇಳಿದ್ದಾರೆ.
Next Story





