Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಏನಿದು ಮಾಲ್‌ಎಬ್ಸಾರಪ್ಶನ್ ಸಿಂಡ್ರೋಮ್?

ಏನಿದು ಮಾಲ್‌ಎಬ್ಸಾರಪ್ಶನ್ ಸಿಂಡ್ರೋಮ್?

ವಾರ್ತಾಭಾರತಿವಾರ್ತಾಭಾರತಿ26 Sept 2019 7:50 PM IST
share
ಏನಿದು ಮಾಲ್‌ಎಬ್ಸಾರಪ್ಶನ್ ಸಿಂಡ್ರೋಮ್?

ನಾವು ದಿನನಿತ್ಯ ಸೇವಿಸುವ ಅಗತ್ಯ ಪೋಷಕಾಂಶಗಳು ಮತ್ತು ದ್ರವಗಳನ್ನು ಹೀರಿಕೊಳ್ಳುವುದು ಸಣ್ಣಕರುಳಿನ ಮುಖ್ಯ ಕೆಲಸವಾಗಿದೆ. ನಮ್ಮ ಆಹಾರದಲ್ಲಿಯ ಪ್ರೋಟಿನ್‌ಗಳು,ಕೊಬ್ಬುಗಳು,ಖನಿಜಗಳು ಇತ್ಯಾದಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಣ್ಣಕರುಳಿಗೆ ಸಾಧ್ಯವಾಗದಿದ್ದಾಗ ಅಂತಹ ಸ್ಥಿತಿಯನ್ನು ಮಾಲ್‌ಎಬ್ಸಾರಪ್ಶನ್ ಸಿಂಡ್ರೋಮ್(ಎಂಎಸ್) ಎಂದು ಕರೆಯಲಾಗುತ್ತದೆ. ಹೀಗಾದಾಗ ನಾವು ಸೇವಿಸುವ ಆಹಾರದ ಲಾಭಗಳನ್ನು ಪಡೆದುಕೊಳ್ಳಲು ಶರೀರಕ್ಕೆ ಸಾಧ್ಯವಾಗುವುದಿಲ್ಲ.

► ಕಾರಣಗಳು

  ಹಾನಿಗೀಡಾದ ಕರುಳುಗಳು,ಪಿತ್ತಕೋಶ ಅಥವಾ ಯಕೃತ್ತು ರೋಗಗಳು,ಸಣ್ಣ ಕರುಳಿಗೆ ಹಾನಿಯನ್ನುಂಟು ಮಾಡಬಹುದಾದ ಔಷಧಿಗಳು,ಆ್ಯಂಟಿ ಬಯಾಟಿಕ್‌ಗಳ ದೀರ್ಘಕಾಲಿಕ ಬಳಕೆ,ಕ್ರೋನ್ಸ್ ಡಿಸೀಸ್,ದೀರ್ಘಕಾಲಿಕ ಪ್ಯಾಂಕ್ರಿಯಾಟೈಟಿಸ್,ಸಿಲಿಯಾಕ್ ಡಿಸೀಸ್ ಇತ್ಯಾದಿ ಕಾಯಿಲೆಗಳು,ಲ್ಯಾಕ್ಟೋಸ್ ಅಸಹಿಷ್ಣುತೆ,ಗ್ಯಾಸ್ಟ್ರಿಕ್ ಅಥವಾ ತೂಕ ಇಳಿಕೆ ಶಸ್ತ್ರಚಿಕಿತ್ಸೆ, ಕ್ಷಯ ಇತ್ಯಾದಿಗಳು ಸೇರಿದಂತೆ ಹಲವಾರು ಕಾರಣಗಳಿಂದಾಗಿ ಎಂಎಸ್ ಉಂಟಾಗುತ್ತದೆ.

► ಲಕ್ಷಣಗಳು

ರೋಗದ ಕಾರಣದ ತೀವ್ರತೆಗೆ ಅನುಗುಣವಾಗಿ ಎಂಎಸ್ ಲಕ್ಷಣಗಳು ಬದಲಾಗಬಹುದು. ಪದೇ ಪದೇ ಅತಿಸಾರ, ನಾಲಿಗೆಯ ಉರಿಯೂತ ಮತ್ತು ನೋವು,ನಿಶ್ಶಕ್ತಿ,ದಣಿವು,ಹೊಟ್ಟೆಯುಬ್ಬರ,ಹೊಟ್ಟೆ ಸೆಳೆತ,ಮೂಳೆಗಳಲ್ಲಿ ನೋವು, ರಕ್ತಹೀನತೆ,ತೂಕ ಇಳಿಕೆ,ಚರ್ಮದ ಮೇಲೆ ಹಪ್ಪಳೆಗಳಿಂದ ಕೂಡಿದ ದದ್ದುಗಳು ಇವು ಎಂಎಸ್‌ನ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

► ರೋಗನಿರ್ಧಾರ

ರೋಗಿಯು ಎಂಎಸ್‌ನಿಂದ ನರಳುತ್ತಿದ್ದಾನೆಂದು ವೈದ್ಯರು ಶಂಕಿಸಿದರೆ ಲಕ್ಷಣಗಳನ್ನು ಪರಿಶೀಲಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಲಕ್ಷಣಗಳನ್ನು ಆಧರಿಸಿ ನಿಖರ ಕಾರಣವನ್ನು ತಿಳಿದುಕೊಳ್ಳಲು ರಕ್ತ,ಬೆವರು ಮತ್ತು ಮಲ ಪರೀಕ್ಷೆ,ಲ್ಯಾಕ್ಟೋಸ್ ಹೈಡ್ರೋಜನ್ ಉಸಿರಾಟ ಪರೀಕ್ಷೆ,ಸಣ್ಣ ಕರುಳಿನ ಬಯಾಪ್ಸಿ,ಎಂಡೊಸ್ಕೋಪಿ ಇತ್ಯಾದಿ ತಪಾಸಣೆಗಳನ್ನು ನಡೆಸುತ್ತಾರೆ.

► ತಡೆಯುವುದು ಹೇಗೆ?

  ಸೋಂಕುಗಳನ್ನು ಕಡೆಗಣಿಸಬೇಡಿ,ಅವು ಕಾಯಿಲೆಗೆ ಮೂಲ ಕಾರಣಗಳಾಗಿಬಹುದು. ಅತಿಯಾದ ಮದ್ಯಪಾನವು ಎಂಎಸ್ ಮತ್ತು ಇತರ ರೋಗಗಳನ್ನು ತರುತ್ತದೆ,ಹೀಗಾಗಿ ಈ ದುಶ್ಚಟದಿಂದ ದೂರವಿದ್ದಷ್ಟೂ ಒಳ್ಳೆಯದು. ನೀರಿನ ಮೂಲ ಯಾವುದು ಎನ್ನುವುದು ಗೊತ್ತಿಲ್ಲದಿದ್ದರೆ ಕಂಡಕಂಡ ಕಡೆಗಳಲ್ಲಿ ನಲ್ಲಿ ನೀರನ್ನು ಸೇವಿಸಬೇಡಿ. ಮನೆಯಿಂದ ಹೊರಗಿದ್ದಾಗ ತಾಜಾ ಆಹಾರಗಳನ್ನೇ ಸೇವಿಸಿ,ಪ್ಯಾಕ್ ಮಾಡಲಾದ ಆಹಾರ ಸೇವನೆಯನ್ನು ನಿವಾರಿಸಿ. ಆ್ಯಂಟಿ ಬಯಾಟಿಕ್‌ಗಳು ಕರುಳುಗಳ ಮೇಲೆ ತೀವ್ರ ಹಾನಿಕಾರಕ ಪರಿಣಾಮವನ್ನುಂಟು ಮಾಡುವುದರಿಂದ ಅವುಗಳ ಬಳಕೆಗೆ ಮಿತಿಯಿರಲಿ,ಬದಲಿಗೆ ನೈಸರ್ಗಿಕ ಆ್ಯಂಟಿ ಬಯಾಟಿಕ್‌ಗಳನ್ನು ಬಳಸಿ. ಅಧಿಕ ನಾರಿನಂಶ ಇರುವ ಆಹಾರವನ್ನು ಸೇವಿಸಿ,ಇದು ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ ಹಾಗೂ ಆಹಾರವನ್ನು ಸಂಸ್ಕರಿಸಲು ಮತ್ತು ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳಲು ಶರೀರಕ್ಕೆ ಹೆಚ್ಚು ಸಮಯಾವಕಾಶವನ್ನು ನೀಡುತ್ತದೆ. ಇದು ಎಂಎಸ್ ಉಂಟಾಗುವ ಅಪಾಯವನ್ನು ತಗ್ಗಿಸುತ್ತದೆ. ವಿರೇಚಕಗಳ ಬಳಕೆಯನ್ನು ನಿವಾರಿಸಿ.

  ಅತಿಯಾದ ಒತ್ತಡವು ಸೂಕ್ತವಾಗಿ ಜೀರ್ಣವಾಗುವುದನ್ನು ತಡೆಯುವ ಮೂಲಕ ಜೀರ್ಣ ವ್ಯವಸ್ಥೆಗೆ ವ್ಯತ್ಯಯವನ್ನುಂಟು ಮಾಡುತ್ತದೆ. ಎಂಎಸ್ ಮತ್ತು ಇತರ ಜೀರ್ಣ ಸಮಸ್ಯೆಗಳಿಂದ ಪಾರಾಗಲು ಒತ್ತಡದಿಂದ ಮುಕ್ತಗೊಳ್ಳುವುದು ಮುಖ್ಯವಾಗಿದೆ. ಯೋಗ,ಧ್ಯಾನ ಮತ್ತು ಆಳ ಉಸಿರಾಟದಂತಹ ಕೆಲವು ಒತ್ತಡ ನಿವಾರಕ ಕ್ರಮಗಳನ್ನು ಅನುಸರಿಸಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X