Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹೊರಜಿಲ್ಲೆಗೆ ಮರಳು ಸಾಗಿಸಿದರೆ ಭಾರೀ...

ಹೊರಜಿಲ್ಲೆಗೆ ಮರಳು ಸಾಗಿಸಿದರೆ ಭಾರೀ ದಂಡ: ಉಡುಪಿ ಜಿಲ್ಲಾಧಿಕಾರಿ

ವಾರ್ತಾಭಾರತಿವಾರ್ತಾಭಾರತಿ26 Sept 2019 10:21 PM IST
share
ಹೊರಜಿಲ್ಲೆಗೆ ಮರಳು ಸಾಗಿಸಿದರೆ ಭಾರೀ ದಂಡ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಸೆ. 26: ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ವ್ಯಾಪ್ತಿ ಪ್ರದೇಶದ ಎಂಟು ಮರಳು ದಿಬ್ಬಗಳ ತೆರವಿಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎರಡು-ಮೂರು ದಿನಗಳಲ್ಲಿ ಮರಳು ಸಾಗಾಟಕ್ಕೆ ಅಗತ್ಯವಿರುವ ಅನುಮತಿ ಪತ್ರವನ್ನು ಗುತ್ತಿಗೆದಾರರಿಗೆ ನೀಡಲಾಗುವುದು. ಆದರೆ ಹೊರಜಿಲ್ಲೆಗೆ ಮರಳು ಸಾಗಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟವಾಗಿ ಹೇಳಿದ್ದಾರೆ.

ನಗರಸಭೆಯಲ್ಲಿ ಕರೆದ ಸುದ್ದಿಗೋಷ್ಠಿ ವೇಳೆ ಮರಳುಗಾರಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯ ಏಳು ಸದಸ್ಯರ ಮರಳು ಉಸ್ತುವಾರಿ ಸಮಿತಿ, ಎನ್‌ಜಿಟಿ ಬಳಿ ಅಫಿದಾವತ್ ಸಲ್ಲಿಸಿರುವ 170 ಮಂದಿಯ ಪೈಕಿ ಕ್ರಿಮಿನಲ್ ಕೇಸು ದಾಖಲಾಗಿರುವ 12 ಮಂದಿಯನ್ನು ಹೊರತು ಪಡಿಸಿ ಉಳಿದ 158 ಮಂದಿಯಿಂದ ಅರ್ಜಿ ಪಡೆದು ಪರವಾನಿಗೆಯನ್ನು ನೀಡಲಾಗುತ್ತಿದೆ ಎಂದರು.

ಈಗಾಗಲೇ 600ರಿಂದ 700 ಮರಳು ಸಾಗಾಟ ಲಾರಿಗಳಿಗೆ, ಮರಳು ತೆಗೆಯುವ ದೋಣಿಗಳಿಗೆ ಜಿಪಿಎಸ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಗುರುತಿಸಿರುವ ಎಂಟು ಮರಳು ದಿಬ್ಬಗಳಿಗೆ ಜಿಯೋ ಫೆನ್ಸಿಂಗ್‌ನ್ನು ಈಗಾಗಲೇ ಅಳವಡಿಸಲಾಗಿದೆ. ತಂದ ಮರಳು ದಾಸ್ತಾನಿಗೆ ಧಕ್ಕೆ ಗುರುತಿಸಿ ಅಲ್ಲೂ ಜಿಪಿಎಸ್ ಅಳವಡಿಕೆ ಮಾಡಲಾಗುತ್ತಿದೆ ಎಂದರು.

ಮರಳನ್ನು ಜಿಲ್ಲೆಯೊಳಗೆ ವಿತರಿಸಬೇಕಾಗಿದೆ. ಹೊರಜಿಲ್ಲೆಗೆ ಸಾಗಾಟಕ್ಕೆ ಪ್ರಯತ್ನಿಸಿದರೆ, ಜಿಪಿಎಸ್ ಉಲ್ಲಂಘನೆಗಾಗಿ ಮೊದಲ ಬಾರಿಗೆ 50,000ರೂ. ಎರಡನೇ ಬಾರಿಗೆ ಒಂದು ಲಕ್ಷ ರೂ. ಹಾಗೂ ಮತ್ತೂ ಮುಂದುವರಿದರೆ ಅವರ ಪರವಾನಿಗೆಯನ್ನು ರದ್ದುಪಡಿಸಲು ಏಳು ಸದಸ್ಯರ ಮರಳು ಉಸ್ತುವಾರಿ ಸಮಿತಿ ನಿರ್ಧರಿಸಿದೆ ಎಂದವರು ಹೇಳಿದರು.

ಅಲ್ಲದೇ ಯಾರೂ ಸಹ ಮರಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಟ್ಟುಕೊಳ್ಳುವಂತಿಲ್ಲ. ತಮಗೆ ಬೇಕಿದ್ದಷ್ಟೇ ಮರಳನ್ನು ಖರೀದಿಸಬೇಕು. ಯಾವುದೇ ಉದ್ದೇಶಕ್ಕೆ ದಾಸ್ತಾನಿರಿಸಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಹಾಗೂ ಅಲ್ಲಿಗೆ ಮರಳು ಸರಬರಾಜು ಮಾಡಿದ ಲಾರಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಂಗಳೂರಿನಲ್ಲಿದ್ದಂತೆ ಉಡುಪಿಯಲ್ಲೂ ಮರಳು ಆ್ಯಪ್‌ನ ಮೂಲಕ ಎಲ್ಲವನ್ನೂ ನಿರ್ವಹಿಸುವ ಉದ್ದೇಶ ನಮಗಿತ್ತು. ಆದರೆ ಕೆಲವು ಕಾರಣ ಗಳಿಂದ ಮೂರು ತಿಂಗಳಿಗೆ ಇದರಿಂದ ರಿಯಾಯಿತಿ ನೀಡಲಾಗಿದೆ. ಬಜೆಯಲ್ಲಿ ಟೆಂಡರ್ ಆಗಿರುವ ಹೂಳೆತ್ತುವ ಸಂದರ್ಭದಲ್ಲಿ ದೊರೆಯುವ ಮರಳನ್ನು ಮರಳು ಆ್ಯಪ್ ಮೂಲಕ ನಿರ್ವಹಿಸಲಾಗುವುದು. ಮೂರು ತಿಂಗಳ ಬಳಿಕ ಎಲ್ಲವೂ ಆ್ಯಪ್ ಮೂಲಕವೇ ನಡೆಯಲಿದೆ ಎಂದರು.

ನಾನ್ ಸಿಆರ್‌ಝಡ್‌ನಲ್ಲಿ ಬಜೆಯಲ್ಲಿ ಎರಡು ಟೆಂಡರ್ ಆಗಿದೆ. ಇದರಲ್ಲಿ ಒಂದು ಶೀಘ್ರವೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಉಳಿದ 22 ಕಡೆ ಮರಳು ಗಾರಿಕೆ ನಡೆಸಲು ಇನ್ನೂ ಯಾವುದೇ ಟೆಂಡರ್ ಬಂದಿಲ್ಲ ಎಂದು ಜಗದೀಶ್, ಮರಳು ಅಗತ್ಯವಿದ್ದರೆ ಜಿಲ್ಲೆಯ ಚೆಕ್‌ಡ್ಯಾಂಗಳಲ್ಲೂ ಮರಳುಗಾರಿಕೆಯನ್ನು ಮಾಡಲು ಸಾಧ್ಯವಿದೆ ಎಂದರು.

ಜಿಲ್ಲೆಗೆ ಬೇಕಿರುವುದು 2.5 ಲಕ್ಷ ಮೆಟ್ರಿಕ್‌ ಟನ್ ಮರಳು

 ಅಧಿಕೃತ ಸರ್ವೆ ನಡೆಯದಿದ್ದರೂ, ಒಂದು ಅಂದಾಜಿನ ಪ್ರಕಾರ ಉಡುಪಿ ಜಿಲ್ಲೆಗೆ ಪ್ರತಿ ವರ್ಷ 2.5 ಲಕ್ಷ ಮೆಟ್ರಿಕ್ ಟನ್ ಮರಳಿನ ಅಗತ್ಯವಿದೆ. ಈಗಾಗಲೇ ಗುರುತಿಸಿರುವ ಎಂಟು ಮರಳು ದಿಬ್ಬಗಳಲ್ಲಿ ಎಂಟು ಮೆಟ್ರಿಕ್ ಟನ್ ಮರಳಿನ ಲಭ್ಯವಿದೆ ಎಂದು ಎನ್‌ಐಟಿಕೆ ತಜ್ಞರು ವರದಿ ಸಲ್ಲಿಸಿದ್ದಾರೆ. ಒಂದೆರಡು ದಿಬ್ಬಗಳ ತೆರವಿಗೆ ಮೀನುಗಾರರ ವಿರೋಧವಿದ್ದು, ಅವರನ್ನು ಮನ ಒಲಿಸಿ ಅಲ್ಲೂ ದಿಬ್ಬ ತೆರವಿಗೆ ಪ್ರಯತ್ನಿಸಲಾಗುವುದು. ಮತ್ತೆ ಬೇಕಿದ್ದರೆ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಅಪಾರ ಮರಳು ಲಭ್ಯವಿದೆ. ಹೀಗಾಗಿ ಜಿಲ್ಲೆಗೆ ಮರಳಿನ ಅಭಾವ ಆಗುವುದಿಲ್ಲ ಎಂದರು.

ಮೂರು ತಿಂಗಳಿಗೆ ಮಾತ್ರ ಪರವಾನಿಗೆ

ಈಗ 158 ಮಂದಿಗೆ ಮರಳು ದಿಬ್ಬ ತೆರವಿಗೆ ಮೂರು ತಿಂಗಳ ಮಟ್ಟಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ. ಮತ್ತೆ ಅದನ್ನು ಮುಂದುವರಿಸಲು ಬಯಸಿದರೆ, ಮತ್ತೆ ಪರವಾನಿಗೆಯನ್ನು ಮರಳು ಆ್ಯಪ್ ಮೂಲಕವೇ ಪಡೆಯಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳ ತೆರವಿಗೆ ಕಳೆದ ವರ್ಷ ಪಡೆದ ಎನ್‌ಜಿಟಿಯಿಂದ ಪಡೆದ ಅನುಮತಿ ಇನ್ನೂ ಮೂರು ತಿಂಗಳಿದೆ. ಒಂದು ವರ್ಷದ ಅನುಮತಿ ಜನವರಿಗೆ ಮುಗಿಯಲಿದೆ. ಹೀಗಾಗಿ ಜನವರಿಯಲ್ಲಿ ಮತ್ತೆ ಹೊಸದಾಗಿ ಮರಳು ದಿಬ್ಬ ಗುರುತಿಸುವ ಪ್ರಕ್ರಿಯೆ ನಡೆಯ ಬೇಕು. ಇದಕ್ಕೆ ಸಂಬಂಧಿತರಿಂದ ಅನುಮತಿಯನ್ನು ಪಡೆಯಬೇಕು ಎಂದು ಅವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X