ಹನೂರು : ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಶಾಸಕರಿಗೆ ದೂರು
![ಹನೂರು : ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಶಾಸಕರಿಗೆ ದೂರು ಹನೂರು : ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಶಾಸಕರಿಗೆ ದೂರು](https://www.varthabharati.in/sites/default/files/images/articles/2019/09/28/212264-1569650635.jpeg)
ಹನೂರು : ಅಧಿಕಾರಿಗಳು ವಾರ್ಡ್ಗಳಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಗಮನ ಹರಿಸುತ್ತಿಲ್ಲ ಎಂದು ಹನೂರು ಪಟ್ಟಣ ಪಂಚಾಯತ್ ಸದಸ್ಯರು ಶಾಸಕರ ಬಳಿ ದೂರಿದ್ದಾರೆ.
ಇತ್ತಿಚ್ಚಿಗೆ ಪಟ್ಟಣ ಪಂ. ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪಪಂ ಕಚೇರಿಗೆ ಶುಕ್ರವಾರ ಶಾಸಕರು ಭೇಟಿ ನೀಡಿದ್ದರು.
ಈ ವೇಳೆ ಕೆಲ ಸದಸ್ಯರು ಶಾಸಕರ ಬಳಿ ಮಾತನಾಡಿ, ಪಟ್ಟಣದ ಕೆಲ ವಾರ್ಡ್ಗಳಲ್ಲಿ ಸ್ವಚ್ಚತೆ ಇಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಸ್ವಚ್ಚತೆ ಮಾಡಲು ಮುಂದಾಗದೇ ಕಚೇರಿಯಲ್ಲಿಯೇ ಕಾಲಹರಣ ಮಾಡುತ್ತಾರೆ ಹಾಗೂ ಸಾರ್ವಜನಿಕರು ಈ ಸೊತ್ತು, ವಾಸಸ್ಥಳ, ಮರಣ ದೃಢೀಕರಣ ಪತ್ರ, ಪರವಾನಿಗೆ ಪತ್ರ ಸೇರಿ ವಿವಿಧ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಸೂಕ್ತ ದಾಖಲಾತಿಗಳನ್ನು ಅಧಿಕಾರಿಗಳ ಬಳಿ ನೀಡಿದರೂ ಸಹ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.
ಇದ್ದಕ್ಕೆ ಪ್ರತಿಕ್ರಯಿಸಿದ ಶಾಸಕರು ಯಾವುದೇ ಕೆಲಸಗಳಾಗಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ. ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸುವುದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೂಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭ ಪಪಂ ಸದಸ್ಯರಾದ ಮಂಜುಳಾ, ಪವಿತ್ರ, ರೂಪಶ್ರೀ, ಮುಮ್ತಾಝ್ ಬಾನು, ಗಿರೀಶ್, ಸಂಪತ್ ಕುಮಾರ್ ನಾಗರಾಜು, ಹರೀಶ್ ಆನಂದ್, ಮಹೇಶ್, ಮಹೇಶ್ ನಾಯಕ್ ಸೇರಿದಂತೆ ಹಲವರು ಹಾಜರಿದ್ದರು.