Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಐಐಟಿಗಳಲ್ಲಿ ಎಂಟೆಕ್ ಶುಲ್ಕ ಶೇ. 900ರ...

ಐಐಟಿಗಳಲ್ಲಿ ಎಂಟೆಕ್ ಶುಲ್ಕ ಶೇ. 900ರ ವರೆಗೆ ಏರಿಕೆ

ವಾರ್ತಾಭಾರತಿವಾರ್ತಾಭಾರತಿ28 Sept 2019 11:07 PM IST
share
ಐಐಟಿಗಳಲ್ಲಿ ಎಂಟೆಕ್ ಶುಲ್ಕ ಶೇ. 900ರ ವರೆಗೆ ಏರಿಕೆ

ಹೊಸದಿಲ್ಲಿ, ಸೆ. 28: ಎಂಟೆಕ್ ಕೋರ್ಸ್‌ಗಳ ಶುಲ್ಕವನ್ನು ಸರಿಸುಮಾರು ಶೇ. 900ರ ವರೆಗೆ ಏರಿಕೆ ಮಾಡಲು ಹಾಗೂ ಎಂಟೆಕ್ ಅನ್ನು ವಾರ್ಷಿಕ ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗುವ ಬಿಟೆಕ್ ಕೋರ್ಸ್‌ನ ಮಟ್ಟಕ್ಕೆ ತರಲು ಐಐಟಿಯ ಮಂಡಳಿ ಶುಕ್ರವಾರ ನಿರ್ಧರಿಸಿದೆ.

ಪ್ರಸ್ತುತ ಐಐಟಿಗಳಲ್ಲಿ ಎಂಟೆಕ್‌ನ ಪ್ರವೇಶ ಹಾಗೂ ಬೋಧನಾ ಶುಲ್ಕ ಪ್ರತಿ ಸೆಮಿಸ್ಟರ್‌ಗೆ 5 ಸಾವಿರದಿಂದ 10 ಸಾವಿರದ ವರೆಗೆ ಇದೆ. ತಮ್ಮ ಗೇಟ್ ಅಂಕಗಳ ಆಧಾರದಲ್ಲಿ ಎಂಟೆಕ್ ಕೋರ್ಸ್‌ಗೆ ಸೇರುವ ವಿದ್ಯಾರ್ಥಿಗಳಿಗೆ ತಿಂಗಳ 12,400 ರೂಪಾಯಿ ಶಿಷ್ಯ ವೇತನ ನೀಡುವುದನ್ನು ಐಐಟಿಗಳು ಸ್ಥಗಿತಗೊಳಿಸಲಿವೆ. ಹೊಸ ಬೋಧಕ ಸಿಬ್ಬಂದಿಯ 5 ವರ್ಷದ ಸೇವಾವಧಿ ಬಳಿಕ ಸಾಧನೆ ಪರಿಶೀಲಿಸಿ ಅವರನ್ನು ಮುಂದುವರಿಸಬೇಕೇ ? ಅಥವಾ ಕೈ ಬಿಡಬೇಕೆ ಎಂದು ನಿರ್ಧರಿಸುವ ‘ಟೆನ್ಯೂರ್ ಟ್ರಾಕ್ ಪಾಥ್‌ವೇ’ (ನೂತನ ಬೋಧಕರ ಸಾಮರ್ಥ್ಯ ಮೌಲ್ಯಮಾಪನ)ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅಧ್ಯಕ್ಷತೆಯಲ್ಲಿ ನಡೆದ ಐಐಟಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಮುಂಬೈ ಐಐಟಿಯಲ್ಲಿ ಎಂಟೆಕ್‌ನ ಒಂದು ಸೆಮಿಸ್ಟರ್‌ಗೆ ಬೋಧನಾ ಶುಲ್ಕ 5000 ರೂ. ಆಗಿದ್ದರೆ, ಐಐಟಿ ದಿಲ್ಲಿಯಲ್ಲಿ 10,000 ರೂ. ಆಗಿದೆ. ಐಐಟಿ ಮದ್ರಾಸ್‌ನಲ್ಲಿ ಬೋಧನಾ ಶುಲ್ಕ 5,000 ರೂ. ಆಗಿದ್ದು, ಇದರಲ್ಲಿ 3,750 ರೂ. ಒಂದು ಬಾರಿ ಪಾವತಿಸಬೇಕಾಗಿದೆ. ಐಐಟಿ ಖರಗ್‌ಪುರ್‌ನಲ್ಲಿ ಮೊದಲ ಸೆಮಿಸ್ಟರ್ ಶುಲ್ಕ 25,950. ರೂ. ಆಗಿದ್ದು, ಇದರಲ್ಲಿ ಮರುಪಾವತಿಸಬಹುದಾದ ಶುಲ್ಕ 6,000 ರೂ. ಮತ್ತು ಮುಂದಿನ ಸೆಮಿಸ್ಟರ್‌ನ ಶುಲ್ಕ 10,550 ರೂ. 23 ಐಐಟಿಗಳಲ್ಲಿ ಏಳು ಹಳೆಯ ಸಂಸ್ಥೆಗಳಲ್ಲಿ ಸುಮಾರು 14,000 ಎಂಟೆಕ್ ವಿದ್ಯಾರ್ಥಿಗಳಿದ್ದಾರೆ. ಶುಲ್ಕ ಏರಿಕೆಯ ಸಂದರ್ಭ ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ನೇರ ಲಾಭ ವರ್ಗಾವಣೆ ಅಥವಾ ಶಿಕ್ಷಣ ಸಾಲದ ಮೂಲಕ ನೆರವು ನೀಡಬೇಕು ಎಂದು ಸಲಹೆ ನೀಡಲಾಗಿದೆ.

 ಅರೆಕಾಲಿಕ ಸಹಾಯಕ ಬೋಧನ ವೇತನವನ್ನು (12,400) ರದ್ದುಗೊಳಿಸಬೇಕು ಎಂದು ಹೇಳಿರುವ ಮಂಡಳಿ, ಈ ಶುಲ್ಕದ ದೊಡ್ಡ ಮೊತ್ತವನ್ನು ಸಹಾಯಕ ಬೋಧನ ವೇತನಕ್ಕೆ ನೀಡಬೇಕು ಎಂದು ಹೇಳಿದೆ. ಈ ನಿಧಿಯನ್ನು ಇತರ ವೃತ್ತಿಪರ ಚಟುವಟಿಕೆಗಳಿಗೆ ಕೂಡ ಬಳಸಬಹುದು ಎಂದು ಅದು ಹೇಳಿದೆ. ಐಐಟಿಗಳಲ್ಲಿ ಎಂಟೆಕ್ ಕೋರ್ಸ್‌ಗೆ ಸುದಾರಣೆ ತರಲು ರೂಪಿಸಲಾದ ಮೂವರು ಸದಸ್ಯರ ಸಮಿತಿಯ ಶಿಫಾರಸಿನ ಆಧಾರದಲ್ಲಿ ಈ ಪ್ರಸ್ತಾಪ ಮಾಡಲಾಗಿದೆ. ಶುಲ್ಕ ಹೆಚ್ಚಳ ಹಾಗೂ ಶಿಷ್ಯವೇತನ ರದ್ದುಗೊಳಿಸುವುದರಿಂದ ಕೋರ್ಸ್ ಬಿಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿದೆ.

 ‘ಟೆನ್ಯೂರ್ ಟ್ರಾಕ್ ಸಿಸ್ಟಮ್’ನ ಅನುಮೋದನೆಯಿಂದ ಹೊಸ ಸಿಬ್ಬಂದಿ ವರ್ಗದ ಸದಸ್ಯರ ಮೇಲೆ 5 ವರ್ಷಗಳ ಕಾಲ ನಿರ್ವಹಣೆಯ ತೂಗುಗತ್ತಿ ನೇತಾಡಲಿದೆ. ಈ ಕ್ರಮದ ಮೂಲಕ 5.5 ವರ್ಷಗಳ ಬಳಿಕ ಬಾಹ್ಯ ಸಮಿತಿ ಬೋಧನ ಸಿಬ್ಬಂದಿ ಸೇವಾವಧಿಯನ್ನು ಪರಿಶೀಲಿಸಲಿದೆ. ಸಂಸ್ಥೆಯಲ್ಲಿ ನಡೆಸಿದ ಸಂಶೋಧನೆ ಹಾಗೂ ಸೇವೆಯ ಮೌಲ್ಯ ಮಾಪನ ಅನುಸರಿಸಿ ಅವರನ್ನು ಉನ್ನತ ಸ್ಥಾನಕ್ಕೆ ಬಡ್ತಿ ನೀಡಬಹುದು ಅಥವಾ ಹುದ್ದೆ ತ್ಯಜಿಸುವಂತೆ ಕೋರಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X