Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ29 Sept 2019 11:59 PM IST
share
ಓ ಮೆಣಸೇ…

ಸಿದ್ದರಾಮಯ್ಯನವರ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ನಮ್ಮ ಪಕ್ಷದಲ್ಲಿ ಕಾರ್ಯಕರ್ತರೇ ಇರಲಿಲ್ಲ.

- ಕೆ.ಆರ್.ರಮೇಶ್ ಕುಮಾರ್, ಮಾಜಿ

ವಿಧಾನಸಭಾ ಸ್ಪೀಕರ್ ಈಗ ನಾಯಕರೂ ಉಳಿದಿಲ್ಲವಲ್ಲ?

---------------------

  ದೇಶ ಭಕ್ತಿ ಇದ್ದರೆ ಸಾಲದು ದೇಶದ ಬಗ್ಗೆ ಜ್ಞಾನವೂ ಇರಬೇಕು.
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ವೇಷ ಭಕ್ತಿ ಇದ್ದವರು ಒಳ್ಳೆಯ ಲಾಯರ್‌ನ್ನು ಹೊಂದಿರುವುದು ಅತ್ಯಗತ್ಯ.

---------------------

ನಾನು ಈಗಲೂ ಎಚ್.ಡಿ. ದೇವೇಗೌಡರು ಮಾಡಿರುವ ಉಪಕಾರಕ್ಕೆ ದೇವರ ಮನೆಯಲ್ಲಿ ಅವರ ಫೋಟೊ ಇಟ್ಟು ಪೂಜಿಸುತ್ತೇನೆ.

- ಎಚ್. ವಿಶ್ವನಾಥ್, ಅನರ್ಹ ಶಾಸಕ
ದಿನ ಅವರ ತಲೆಯ ಮೇಲೆ ತೆಂಗಿನ ಕಾಯಿ ಒಡೆಯುತ್ತೀರಿ ಎನ್ನುವ ಆರೋಪವಿದೆ.

---------------------

ಗೃಹ ಬಂಧನದಲ್ಲಿರುವ ಕಾಶ್ಮೀರದ ರಾಜಕೀಯ 
ನೇತಾರರನ್ನು ಅತಿಥಿಗಳಂತೆ ನೋಡಿಕೊಳ್ಳಲಾಗುತ್ತಿದೆ.

- ಜಿತೇಂದ್ರ ಸಿಂಗ್, ಕೇಂದ್ರ ಸಚಿವ
ಅತಿಥಿಗಳಂತೆ ಬೇಡ, ಈ ದೇಶ ಪ್ರಜೆಗಳಂತೆ ನೋಡಿಕೊಳ್ಳಿ.

---------------------

ವಿಶ್ವದಲ್ಲಿ ಎಲ್ಲಿಯಾದರೂ ಕೈಗೆಟಕುವ ದರದಲ್ಲಿ ಡೇಟಾ ಲಭ್ಯವಿದ್ದರೆ ಅದು ಭಾರತದಲ್ಲಿ ಮಾತ್ರ.

- ನರೇಂದ್ರಮೋದಿ, ಪ್ರಧಾನಿ
ಹೌದು, ಈ ದೇಶದ ಜನರ ಡೇಟಾಗಳು ಇಂದು ಎಲ್ಲರ ಕೈಗೆಟಕುವಂತಿದೆ.

---------------------

‘ಪಾಕ್ ಆಕ್ರಮಿತ ಕಾಶ್ಮೀರ’ ಎಂಬ ಸಮಸ್ಯೆ ಸೃಷ್ಟಿಯಾಗಲು ಅಂದಿನ ಪ್ರಧಾನಿ ನೆಹರೂ ಅವರೇ ಕಾರಣ.

- ಅಮಿತ್ ಶಾ, ಕೇಂದ್ರ ಸಚಿವ
  ಗುಜರಾತ್ ಆಕ್ರಮಿತ ಭಾರತ ಎಂಬ ಸಮಸ್ಯೆ ಸೃಷ್ಟಿಯಾಗಲು ಕಾರಣ ಯಾರು?

---------------------

ಎನ್‌ಆರ್‌ಸಿಯಿಂದ ಒಬ್ಬ ಹಿಂದೂ ಕೂಡಾ ದೇಶ ತೊರೆಯುವುದಿಲ್ಲ.

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಆರ್ಯರು ಹಿಂದೂಗಳಲ್ಲ ಎನ್ನುವ ವಾದವಿದೆ.

---------------------

ಪ್ರಧಾನಿ ಮೋದಿ ಏನೇ ಮಾಡಿದರೂ ಅದು ಸರಿಯಾಗಿಯೇ ಇರುತ್ತದೆ.

- ಎಸ್.ಎಲ್. ಭೈರಪ್ಪ, ಹಿರಿಯ ಸಾಹಿತಿ
ಏನೇ ಮಾಡಿದರೂ ಅದನ್ನು ಎತ್ತಿ ಬಾಯಿಗೆ ಹಾಕಿಕೊಳ್ಳುತ್ತೀರಿ ಎಂದಾಯಿತು.

---------------------

ಅನರ್ಹ ಶಾಸಕರು ಹಾಗೂ ಬಿಜೆಪಿಗೆ ನೆರೆ ಸಂತ್ರಸ್ತರ ಶಾಪ ತಟ್ಟಲಿದೆ.

- ಎಂ.ಬಿ. ಪಾಟೀಲ್, ಮಾಜಿ ಸಚಿವ

ಅನರ್ಹ ಶಾಸಕರೇ ಬಿಜೆಪಿಗೆ ಶಾಪವಾಗಿ ಪರಿವರ್ತನೆಯಾಗಿದ್ದಾರೆ.

---------------------

ಎಚ್.ಡಿ. ಕುಮಾರ ಸ್ವಾಮಿ ಧರ್ಮರಾಯ ಇದ್ದಹಾಗೆ. ಎಲ್ಲದಕ್ಕೂ ಯಸ್ ಅಂತಾರೆ.

- ಎಚ್.ಡಿ. ರೇವಣ್ಣ, ಮಾಜಿ ಸಚಿವ

 ದೇವೇಗೌಡರು ಧೃತರಾಷ್ಟ್ರ ಇದ್ದ ಹಾಗೆ, ಮಕ್ಕಳು ಏನು ಕೇಳಿದರು ಯಸ್ ಅಂತಾರಂತೆ.

---------------------
  ನಾನಿೀಗ ಕಾಡಿನಲ್ಲಿ ಕಳೆದು ಹೋದ ಮಗುವಿನಂತಾಗಿದ್ದೇನೆ.

- ಜಗ್ಗೇಶ್, ಬಿಜೆಪಿ ನಾಯಕ ಹಾಗೂ ನಟ

ಕಾಡಿನಲ್ಲಿ ಕಳೆದು ಹೋದ ‘ಕಳ್ಳೇಕಾಯಿ’ಯಂತೆ ಎಂದರೆ ಚೆನ್ನಾಗಿತ್ತು.

---------------------

ನೊಬೆಲ್ ಪ್ರಶಸ್ತಿಗೆ ನಾನು ಅರ್ಹ, ಆದರೆ ಅವರು ಅದನ್ನು ನನಗೆ ಕೊಡುವುದಿಲ್ಲ.

- ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಮೋದಿ ಮತ್ತು ನಿಮಗಿಬ್ಬರಿಗೂ ಜಂಟಿಯಾಗಿ ಗೊಬೆಲ್ ಪ್ರಶಸ್ತಿ ನೀಡಲಾಗುತ್ತದೆಯಂತೆ.

---------------------

ಒಳ ಪಂಗಡಗಳು ಒಗ್ಗೂಡಿದರೆ ವೀರ ಶೈವರನ್ನು ಮಣಿಸಲು ಯಾರಿಗೂ ಸಾಧ್ಯವಿಲ್ಲ. -

ಶಾಮನೂರು ಶಿವಶಂಕರಪ್ಪ, ಶಾಸಕ
  ಲಿಂಗಾಯತರು ಒಗ್ಗೂಡಿದರೆ ವೀರಶೈವರ ಗತಿಯೇನು?

---------------------

ಪಾಕಿಸ್ತಾನಕ್ಕಿಂತ ಈ ನಾನು ಭಾರತದ ಬಗ್ಗೆ ಹೆಚ್ಚು ಆತಂಕಗೊಂಡಿದ್ದೇನೆ.

- ಇಮ್ರಾನ್ ಖಾನ್, ಪಾಕ್ ಪ್ರಧಾನಿ
ಪಾಕಿಸ್ತಾನಕ್ಕಾಗಿ ಆತಂಕ ಪಡುವುದಕ್ಕೆ ಟ್ರಂಪ್ ಇದ್ದಾರೆ ಎಂಬ ಧೈರ್ಯವೇ?

---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ನನಗೇನೂ ಲಾಭ ಆಗಿಲ್ಲ

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅವರು ಮಾಜಿ ಮುಖ್ಯಮಂತ್ರಿ ಆದದ್ದು ನಿಮಗೆ ಲಾಭವಾಯಿತಲ್ಲವೇ?

---------------------

ರಾಜಕೀಯ ಎಂಬುದು ಸೋಡಾ ಗ್ಯಾಸ್ ಇದ್ದಂತೆ.

- ಸಿ.ಟಿ. ರವಿ, ಸಚಿವ
ಒಟ್ಟಿನಲ್ಲಿ ತಮಗೆ ಗ್ಯಾಸ್ ಟ್ರಬಲ್ ಸಮಸ್ಯೆ ಇದೆ ಎಂದಾಯಿತು.

---------------------

ಹಿಂದೂಗಳಿಗೆ ಭಾರತವೊಂದು ಬಿಟ್ಟು ಬೇರೆ ನೆಲ ಎಲ್ಲಿದೆ.

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಆರ್ಯನ್ನರಿಗೆ ಮಧ್ಯ ಏಶ್ಯ ಇದೆ. ಬಂದಲ್ಲಿಗೆ ಹೊರಟರಾಯಿತು.

---------------------

ಮಹಾರಾಷ್ಟ್ರ ವಿಧಾನ ಸಭೆಗೆ ಕ್ಷೇತ್ರಗಳ ಸೀಟು ಹಂಚಿಕೆ ಭಾರತ - ಪಾಕಿಸ್ತಾನ ವಿಭಜನೆಗಿಂತಲೂ ಕಠಿಣ.

- ಸಂಜಯ್ ರಾವತ್, ಶಿವಸೇನೆ ಮುಖಂಡ
ಅಂದರೆ ದೇಶ ವಿಭಜನೆಯ ಕಾಲದಲ್ಲಾದಂತೆ ಹಿಂಸೆಯಾಗುವ ಸಾಧ್ಯತೆ ಇದೆಯೇ?

---------------------

ನಾನು ಮುಖ್ಯಮಂತ್ರಿ ಆದಾಗಲೆಲ್ಲ ಒಂದಲ್ಲ ಒಂದು ರೀತಿಯ ಅಗ್ನಿ ಪರೀಕ್ಷೆಗೆ ಒಳಗಾಗುತ್ತೇನೆ.

- ಯಡಿಯೂರಪ್ಪ, ಮುಖ್ಯಮಂತ್ರಿ
ಈ ಬಾರಿ ಅಗ್ನಿಕುಂಡದಿಂದ ಹೊರಗೆ ಬರುವುದು ಕಷ್ಟ.

---------------------
ಶಾಸಕನಾಗಿ ಅನರ್ಹಗೊಂಡ ನಾನು ಕಳೆದುಕೊಂಡಿದ್ದೇನೂ ಇಲ್ಲ.

- ಬಿ.ಸಿ. ಪಾಟೀಲ್, ಅನರ್ಹ ಶಾಸಕ
ಹೌದು, ನಿಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಕಳೆದುಕೊಂಡದ್ದು ಮತದಾರರು.

---------------------
ಪ್ರಧಾನಿ ಮೋದಿಯನ್ನು ‘ರಾಷ್ಟ್ರ ಪಿತ’ ಎಂದು ಒಪ್ಪಿಕೊಳ್ಳದವರು ಭಾರತೀಯರೇ ಅಲ್ಲ

- ಜಿತೇಂದ್ರ ಸಿಂಗ್, ಕೇಂದ್ರ ಸಚಿವ
ಈತ ಆರೆಸ್ಸೆಸ್‌ನ ರಾಷ್ಟ ಪಿತ್ಥ

---------------------

ಅನರ್ಹ ಶಾಸಕರು ಬಿಜೆಪಿಯ ಮನೆ ಅಳಿಯರಿದ್ದಂತೆ.

- ಕೆ.ಎಸ್. ಈಶ್ವರಪ್ಪ, ಸಚಿವ
  ಬಿಜೆಪಿಯ ಹೆಣ್ಣು ಮಕ್ಕಳನ್ನೆಲ್ಲ ಅವರಿಗೆ ಧಾರೆಯೆರೆದಿದ್ದೀರಾ?

---------------------

ಎಸೆಸೆಲ್ಸಿ ಮತ್ತು ಪಿಯು ಪರೀಕ್ಷಾ ಮಂಡಲಿಗಳನ್ನು ವಿಲೀನಗೊಳಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.

- ಸುರೇಶ್ ಕುಮಾರ್, ಸಚಿವ
ಅವುಗಳಲ್ಲಿ ನಗದು ಠೇವಣಿ ಸಂಗ್ರಹವೇನಾದರೂ ಇದ್ದಿದ್ದರೆ ಇಷ್ಟರಲ್ಲೇ ವಿಲೀನವಾಗಿ ಬಿಡುತ್ತಿತ್ತು.

---------------------

ಮುಂದಿನ 10 ವರ್ಷಗಳಲ್ಲಿ ಸಚಿವ ಶ್ರೀರಾಮುಲುರನ್ನು ಮುಖ್ಯಮಂತ್ರಿಯನ್ನಾಗಿಸುವ ಯೋಜನೆ ಹಾಕಿಕೊಂಡಿದ್ದೇನೆ.

- ಅನಿಲ್ ಲಾಡ್, ಮಾಜಿ ಶಾಸಕ.
ಯಡಿಯೂರಪ್ಪ ಅವರನ್ನು ಮುಖ್ಯ ಮಂತ್ರಿಯಾಗದಂತೆ ತಡೆಯಲು ಹೊಸ ಯೋಜನೆಯೇ 

share
ಪಿ.ಎ.ರೈ
ಪಿ.ಎ.ರೈ
Next Story
X