ಶಾರದಾ ಚಿಟ್ ಫಂಡ್ ಹಗರಣ : ಕೋಲ್ಕತ್ತಾ ಮಾಜಿ ಪೊಲೀಸ್ ಮುಖ್ಯಸ್ಥರಿಗೆ ಜಾಮೀನು
ಕೋಲ್ಕತ್ತಾ, ಅ. 1: ಶಾರದಾ ಚಿಟ್ ಪಂಡ್ ಹಗರಣಕ್ಕೆ ಸಂಬಂಧಿಸಿ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ಗೆ ಕೊಲ್ಕತ್ತಾ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದೆ.
ಕುಮಾರ್ ಅವರು 50 ಸಾವಿರ ರೂಪಾಯಿ ಖಾತರಿಯ ಬಾಂಡ್ ನೀಡಬೇಕು. ಅವರ ಕಸ್ಟಡಿ ವಿಚಾರಣೆ ಅಗತ್ಯ ಇಲ್ಲ. ಆದರೆ, ಸಿಬಿಐ ಸಮನ್ಸ್ ನೀಡಿದಾಗ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಹೇಳಿದೆ. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಲಾಭ ಮಾಡಿಕೊಂಡ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ರಾಜೀವ್ ಕುಮಾರ್ ಪುರಾವೆಗಳನ್ನು ನೀಡದಿರುವ ಹಾಗೂ ತಿರುಚುವ ಸಾಧ್ಯತೆ ಇದೆ ಎಂದು ಸಿಬಿಐ ಆರೋಪಿಸಿತ್ತು.
ಸಿಟ್ನ ಮುಖ್ಯಸ್ಥರಾಗಿದ್ದಾಗ ವಶಪಡಿಸಿಕೊಂಡ ಕೆಲವು ಸಾಧನಗಳನ್ನು ರಾಜೀವ್ ಕುಮಾರ್ ಅವರ ವಶದಲ್ಲಿ ಇದೆ. ಶಾರದಾ ಸಮೂಹ ರಾಜಕೀಯ ನಾಯಕರು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ನೀಡಿದ ಪ್ರತಿಫಲಗಳ ವಿವರಗಳನ್ನು ಒಳಗೊಂಡ ಡೈರಿ ಹಾಗೂ ಪೆನ್ಡ್ರೈವ್ಗಳನ್ನು ಅವರು ಸಿಬಿಐಗೆ ಹಸ್ತಾಂತರಿಸದೆ ತನ್ನಲ್ಲೇ ಇರಿಸಿಕೊಂಡಿದ್ದಾರೆ ಎಂದು ಸಿಬಿಐ ಆಪಾದಿಸಿತ್ತು.
Next Story