ಬಾವಿಗೆ ಬಿದ್ದು ಯುವಕ ಮೃತ್ಯು
ಹೆಬ್ರಿ, ಅ.3: ನಾಲ್ಕುರು ಗ್ರಾಮದ ಕಜ್ಕೆ ಅರಮನೆಜಡ್ಡು ಎಂಬಲ್ಲಿ ಅ.1ರಂದು ಸಂಜೆ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಅರಮನೆಜಡ್ಡು ನಿವಾಸಿ ಉದಯ ಕುಮಾರ್ (32) ಎಂದು ಗುರುತಿಸಲಾಗಿದೆ.
ಇವರು ಹಳೆಯ ಬಾವಿಯ ಆವರಣ ಗೋಡೆಯ ಕಲ್ಲು ಗಳನ್ನು ತೆಗೆದು ಸರಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





