ನಾಟಿ ವೈದ್ಯೆ ಶ್ರೀಮತಿ ರಾಮು
ಮಂಗಳೂರು, ಅ.3: ಮಂಗಳೂರು ತಾಲೂಕು ಮುನ್ನೂರು ಗ್ರಾಮದ ತೇವುಲ ಗ್ರಾಮದ ದಿ.ಮಂಜಪ್ಪ ಬೆಲ್ಚಡರ ಪತ್ನಿ ನಾಟಿ ವೈದ್ಯೆ ಶ್ರೀಮತಿ ರಾಮು(90)ಇತ್ತೀಚೆಗೆ ನಿಧನರಾಗಿದ್ದಾರೆ.
ಮೃತರು ಮುನ್ನೂರು ಗ್ರಾಮದ ಸಿಪಿಎಂ ಮುಖಂಡರಾದ ಕೆ.ಆನಂದ ಬೆಲ್ಚಡ, ಕೆ.ವಿಶ್ವ ನಾಥ ಸಹಿತ 5 ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನ ಪಡೆಯಲು ಸಿಪಿಐಎಂ ಮುಖಂಡರಾದ ವಸಂತ ಆಚಾರಿ, ಕೆ.ಕೃಷ್ಣಪ್ಪ ಸಾಲಿಯಾನ್, ಪದ್ಮಾವತಿ ಶೆಟ್ಟಿ, ಭಾರತಿ ಬೋಳಾರ್, ಚಿತ್ರ ನಟ ಅರವಿಂದ ಬೋಳಾರ್, ಗ್ರಾಮ ಪಂಚಾಯತ್ ಸದಸ್ಯ ಗಣೇಶ್, ಜಯಂತ ನಾಯ್ಕ್, ಜಯಂತ ಪೂಜಾರಿ, ಮಹಾಬಲ ಬಟ್ಟೆದಡಿ, ಜೀವನ್ ರಾಜ್ ಮೊದಲಾದ ವರು ಭೇಟಿ ನೀಡಿದ್ದರು.
Next Story