ಬಸ್ ಚಾಲಕನಿಗೆ ಥಳಿತ: ದೂರು
ಉಡುಪಿ, ಅ.5: ಬಸನ್ನು ಅಡ್ಡಗಟ್ಟಿ ಚಾಲಕನಿಗೆ ಥಳಿಸಿ ಜೀವ ಬೆದರಿಕೆ ಯೊಡ್ಡಿರುವ ಘಟನೆ ಅ.2ರಂದು ಸಂಜೆ 6.30ರ ಸುಮಾರಿಗೆ ನಗರದ ಅಲಂಕಾರು ಥಿಯೇಟರ್ ಬಳಿ ನಡೆದಿದೆ.
ಹಲ್ಲೆಗೆ ಒಳಗಾದ ಕೊಹಿನೂರು ಬಸ್ಸಿನ ಚಾಲಕ, ಅಜ್ಜರಕಾಡು ನಿವಾಸಿ ಮಹಮ್ಮದ್ ಶರೀಕ್(23) ಎಂಬವರು ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೈಫುದ್ದೀನ್, ಅಕ್ರಮ್, ವಿಜಯ್, ಮುನಾಫ್, ಪವಿತ್ರ ಹಾಗೂ ಇತರರು ಸೇರಿ ಬಸ್ಸನ್ನು ಅಡ್ಡ ಕಟ್ಟಿ ಶರೀಕ್ಗೆ ಅವಾಚ್ಯ ಶಬ್ದದಿಂದ ಬೈದು ಸೈಫುದ್ದೀನ್ ಬೂಟ್ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿರುವು ದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





