Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ6 Oct 2019 11:44 PM IST
share
ಓ ಮೆಣಸೇ…

 ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ದಾರಿ ಅವರಿಗೆ, ನಮ್ಮ ದಾರಿ ನಮಗೆ - ಉಮೇಶ್ ಕತ್ತಿ, ಬಿಜೆಪಿ ಶಾಸಕ
ತಮ್ಮ ಕತ್ತಿ ಹೆಸರಿಗೆ ತಕ್ಕಂತೆ ಕತ್ತಿ ಇಟ್ಟಿದ್ದೀರಿ.

---------------------

ಸಾಹಿತಿ ಬರವಣಿಗೆ ಬಿಟ್ಟು ಜಯಕಾರ, ಧಿಕ್ಕಾರ ಕೂಗಲು ಹೋಗಬಾರದು - ಎಸ್.ಎಲ್. ಭೈರಪ್ಪ, ಸಾಹಿತಿ
ಜಯಕಾರ, ಧಿಕ್ಕಾರ ಏನಿದ್ದರೂ ಬರವಣಿಗೆಯ ಮೂಲಕವೇ ಮಾಡಿ.

---------------------

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೇಶದ ವರ್ಚಸ್ಸು ಬದಲಾಗಿದೆ - ಲತಾ ಮಂಗೇಶ್ಕರ್, ಗಾಯಕಿ
ಕೋಗಿಲೆಗೆ ಕಾಗೆಯ ಮೇಲೆ ಒಲವು ಬಂದಂತಿದೆ.

---------------------

ನನ್ನದು ತಂತಿ ಮೇಲಿನ ನಡಿಗೆ - ಯಡಿಯೂರಪ್ಪ, ಮುಖ್ಯಮಂತ್ರಿ
ಸರಕಾರ ನಡೆಸುವ ಬದಲು ಸರ್ಕಸ್ ಕಂಪೆನಿ ನಡೆಸುತ್ತಿರುವಂತಿದೆ.

---------------------

ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಿ ನದಿಗಳೆಲ್ಲ ತುಂಬಿವೆ - ಜಿ.ಟಿ. ದೇವೇಗೌಡ, ಶಾಸಕ
ಮಳೆ ನೀರು ಯಡಿಯೂರಪ್ಪರ ಕುತ್ತಿಗೆವರೆಗೆ ಬಂದಿದೆ.

---------------------

ಯಡಿಯೂರಪ್ಪರ ಬೆಂಬಲದಿಂದಾಗಿ ವೀರಶೈವ ಸಮಾಜ ಉಳಿದಿದೆ - ಶಾಮನೂರು ಶಿವಶಂಕರಪ್ಪ, ಅ.ಭಾ.ವೀರಶೈವ ಮಹಾಸಭಾ ಅಧ್ಯಕ್ಷ
ವೀರಶೈವ ಸಮಾಜವನ್ನು ಉಳಿಸುವುದಕ್ಕಾಗಿ ಅವರು ಲಿಂಗಾಯತ ಧರ್ಮವನ್ನೇ ಬಲಿಕೊಟ್ಟಿದ್ದಾರೆ.

---------------------

ಗೋಡ್ಸೆ ವಿಚಾರಧಾರೆಯನ್ನು ದೇಶದಿಂದ ಹೊರದಬ್ಬ ಬೇಕಾಗಿದೆ - ದೇವನೂರ ಮಹಾದೇವ, ಸಾಹಿತಿ
ಹೊರದೇಶಗಳಲ್ಲೂ ಗೋಡ್ಸೆ ಚಿಂತನೆ ಹರಡಲಿ ಎನ್ನುವ ಆಸೆಯೇ?

---------------------

ರಾಜಕಾರಣ ಎಂಬುದು ಸನ್ಯಾಸಿಗಳ ಸಂಘ ಅಲ್ಲ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಬಯಲಾಗುತ್ತಿರುವ ಲೈಂಗಿಕ ಹಗರಣಗಳನ್ನು ಗಮನಿಸಿದಾಗ ನಿಜ ಅನ್ನಿಸುತ್ತದೆ.

---------------------

ಅನರ್ಹ ಶಾಸಕರನ್ನು ಕಡೆಗಣಿಸುವುದೂ ಇಲ್ಲ, ತಲೆ ಮೇಲೆ ಕೂರಿಸಿಕೊಳ್ಳುವುದೂ ಇಲ್ಲ - ಸಿ.ಟಿ. ರವಿ, ಸಚಿವ
ಅವರೀಗ ಯಡಿಯೂರಪ್ಪರ ಎದೆ ಮೇಲೆ ಕೂತಿದ್ದಾರೆ.

---------------------

ಮುಖ್ಯಮಂತ್ರಿ ಯಡಿಯೂರಪ್ಪರನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಡಿಕೆಶಿಯನ್ನು ನೋಡಿದಾಗ ನಿಮಗೆ ಏನನ್ನಿಸುತ್ತಿದೆ ಎನ್ನುವುದನ್ನೂ ಹೇಳಿ.

---------------------

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನನ್ನನ್ನು ಪರಸ್ಪರ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ - ಈಶ್ವರಪ್ಪ, ಸಚಿವ
ನನ್ನನ್ನು ಅಂಟಿಕೊಂಡ ಶನಿ ಅದು ಎನ್ನುತ್ತಿದ್ದಾರೆ ಯಡಿಯೂರಪ್ಪ.

---------------------

ಕೋಟಿ ಕೋಟಿ ರೂಪಾಯಿ ದುಡಿಮೆಗಿಂತ ನೆಮ್ಮದಿಯ ಬದುಕು ಮುಖ್ಯವಾಗಬೇಕು - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ನಿಮ್ಮ ನೆಮ್ಮದಿಯ ಬದುಕಿಗಾಗಿ ಜನರ ನೆಮ್ಮದಿಯನ್ನು ಕೆಡಿಸದಿರಿ.

---------------------

ಗುರುಕುಲಗಳು ಮನೆಯೇ ಹೊರತು ಜೈಲಲ್ಲ - ಸುರೇಶ್‌ಕುಮಾರ್, ಸಚಿವ
ಕುಲ ನೋಡಿ ಶಿಷ್ಯರನ್ನು ಆರಿಸುವ ವ್ಯವಸ್ಥೆಯೇ ಗುರುಕುಲ.

---------------------

ವಿಶ್ವವು ಭಾರತದಿಂದ ಬಹಳಷ್ಟು ನಿರೀಕ್ಷಿಸುತ್ತಿದೆ - ನರೇಂದ್ರ ಮೋದಿ, ಪ್ರಧಾನಿ
ಭಾರತದ ಜನರು ಕೂಡ ನಿಮ್ಮಿಂದ ನಿರೀಕ್ಷಿಸುತ್ತಿದ್ದಾರೆ.

---------------------

ನಮ್ಮನ್ನು ಆಳಿದವರು ಗಾಂಧಿ ಚಿಂತನೆಗಳನ್ನು ಅನುಸರಿಸಿದ್ದರೆ ಇಂದಿನ ಅನೇಕ ಸಮಸ್ಯೆಗಳು ಇರುತ್ತಲೇ ಇರಲಿಲ್ಲ - ಮೋಹನ್ ಭಾಗವತ್, ಆರೆಸ್ಸ್ಸೆಸ್ ಮುಖಂಡ
ಅದಕ್ಕೆ ತಾನೆ ಗೋಡ್ಸೆಯ ಕೈಯಲ್ಲಿ ಗಾಂಧಿಯನ್ನು ಕೊಲ್ಲಿಸಿದ್ದು.

---------------------

ರಾಜ್ಯದ ಜನರು ನೆನಪಿನಲ್ಲಿಟ್ಟುಕೊಳ್ಳುವ ಯಾವ ಸಾಧನೆಯನ್ನ್ನೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಲ್ಲ - ಶೋಭಾ ಕರಂದ್ಲಾಜೆ, ಸಂಸದೆ
ಒಮ್ಮೆ ಜೈಲಿಗೆ ಹೋಗಿ ಬಂದಿದ್ದರೆ ನೆನಪಿಟ್ಟುಕೊಳ್ಳುತ್ತಿದ್ದರೇನೋ, ಅಲ್ಲವೇ?

---------------------

ಅನರ್ಹ ಶಾಸಕರೆಲ್ಲ ಚುನಾವಣೆಯಲ್ಲಿ ಗೆದ್ದು ಎಲ್ಲರೂ ಸಚಿವರಾಗುತ್ತಾರೆ - ಎಚ್. ನಾಗೇಶ್, ಸಚಿವ

ಅಂದರೆ ಅರ್ಹರ್ಯಾರೂ ಗೆಲ್ಲುವುದಿಲ್ಲವೇ?

---------------------

ಪ್ರಧಾನಿ ಮೋದಿಗೆ ಸರಿಸಾಟಿ ಯಾರೂ ಇಲ್ಲ - ಡಾ. ದೊಡ್ಡರಂಗೇಗೌಡ, ಸಾಹಿತಿ
ಮತ್ತೇಕೆ ತಡ, ಅವರ ಹೆಸರಲ್ಲಿ ಮಹಾಕಾವ್ಯವೊಂದನ್ನು ಬರೆದು ಜ್ಞಾನಪೀಠಕ್ಕೆ ಅರ್ಹರಾಗಿ.

---------------------

ಪ್ರಧಾನಿ ಮೋದಿ ದೇವರಿದ್ದಂತೆ, ಅವರನ್ನು ಬೈದರೆ ದೇವರನ್ನು ಬೈದಂತೆ - ಪ್ರತಾಪಸಿಂಹ, ಸಂಸದ
ನಿಮ್ಮ ಆ ದೇವರ ತಲೆಯ ಮೇಲೆ 100 ತೆಂಗಿನಕಾಯಿ ಒಡೆಯುವ ಹರಕೆ ಹೊತ್ತಿದ್ದಾರಂತೆ ಕೇಜ್ರಿವಾಲ್.

---------------------
ಸಮ್ಮಿಶ್ರ ಸರಕಾರದ ವಿರುದ್ಧ ಅಸಮಾಧಾನ ಇದ್ದುದರಿಂದಲೇ ನನಗೆ ಅನಾರೋಗ್ಯ ಕಾಡಿತು - ಶ್ರೀಮಂತ ಪಾಟೀಲ್, ಅನರ್ಹ ಶಾಸಕ
ಬಹುಶಃ ಈಗ ಅನಾರೋಗ್ಯ ಉಲ್ಬಣಿಸಿರಬೇಕು.

---------------------

ನಾನು ಮೊದಲು ನಕ್ಸಲ್ ಆಗಿದ್ದೆ, ಬಳಿಕ ಆರೆಸ್ಸೆಸ್ ಸೇರಿಕೊಂಡೆ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಗಾಂಧೀಜಿಯ ಕೊಲೆಯನ್ನು ನಕ್ಸಲರ ತಲೆಗೆ ಕಟ್ಟುವ ಹುನ್ನಾರವೇ?

---------------------

ನಾನು ಮೊದಲಿನಿಂದಲೂ ಭಾರತೀಯ ಜನತಾ ಪಕ್ಷದವನು- ಚಿದಾನಂದ ಮೂರ್ತಿ, ಸಂಶೋಧಕ
ನೀವು ವಿದ್ವಾಂಸರು ಎಂದು ನಾವಿದುವರೆಗೆ ತಪ್ಪು ತಿಳಿದಿದ್ದೆವು, ಕ್ಷಮಿಸಿ.

---------------------

ಮಹಾತ್ಮಾ ಗಾಂಧಿಯಂತಹ ವ್ಯಕ್ತಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ - ದೇವೇಗೌಡ, ಮಾಜಿ ಪ್ರಧಾನಿ
ತಮ್ಮ ಮಗನ ರೂಪದಲ್ಲಿ ಗಾಂಧಿ ಪುನರ್‌ಜನ್ಮ ಎತ್ತಿದ್ದಾನೆ ಎಂದು ಹೇಳಲಿಲ್ಲವಲ್ಲ ಪುಣ್ಯ

---------------------
ಬಿಜೆಪಿಯವರು ನಮ್ಮ ಮಕ್ಕಳನ್ನು(ಅನರ್ಹ ಶಾಸಕರು) ಕರೆದು ಕೊಂಡು ಹೋಗಿ ಬೀದಿಪಾಲು ಮಾಡಿದ್ದಾರೆ - ಸಿ.ಎಂ. ಇಬ್ರಾಹೀಂ, ವಿ.ಪ. ಸದಸ್ಯ
ಬೀದಿ ಪಾಲಾಗಲು ನೀವು ಕೂಡ ಅತ್ಯುತ್ಸಾಹದಲ್ಲಿದ್ದಿರಂತೆ ಹೌದೇ?

---------------------

ನೆರೆ ಪೀಡಿತ ಜನರ ಸಹಾಯಕ್ಕೆ ಧಾವಿಸದ ಸಂಸದರನ್ನು ಆಯ್ಕೆ ಮಾಡಿರುವುದಕ್ಕೆ ನಮ್ಮ ಚಪ್ಪಲಿಯಲ್ಲಿ ನಮಗೆ ನಾವೇ ಹೊಡೆದುಕೊಳ್ಳಬೇಕು - ಶಂಕರ ಬಿದರಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ
ಜನ ತಮ್ಮ ಮನೆಯ ಹೊರಗೆ ಚಪ್ಪಲಿ ಹಿಡಿದು ಕಾಯುತ್ತಿದ್ದಾರೆ ಸಾರ್...

share
ಪಿ.ಎ.ರೈ
ಪಿ.ಎ.ರೈ
Next Story
X