Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಸಮಗ್ರ ಗೋವಿನ ಹಾಡು

ಸಮಗ್ರ ಗೋವಿನ ಹಾಡು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ7 Oct 2019 12:01 AM IST
share
ಸಮಗ್ರ ಗೋವಿನ ಹಾಡು

   ‘ಗೋವಿನ ಹಾಡು’ ಪದ್ಯವನ್ನು ಓದದೆ ಬೆಳೆದ ಮಕ್ಕಳು ತೀರಾ ಕಡಿಮೆ. ಪುಣ್ಯಕೋಟಿಯ ಸತ್ಯಸಂಧತೆ, ಹುಲಿಯ ಮನಃಪರಿವರ್ತನೆಯ ಕತೆಯನ್ನು ಕೇಳಿ ಒಮ್ಮೆಯಾದರೂ ಕಣ್ಣೀರು ಹಾಕಿದವರೇ ಎಲ್ಲ. ಈ ಹಾಡನ್ನು ಬರೆದವನು ಒಬ್ಬ ಅನಾಮಿಕ. ಈ ಲೇಖಕನ ಹಿನ್ನೆಲೆಯನ್ನು ತಿಳಿಯುವ ಪ್ರಯತ್ನವನ್ನು ಹಲವು ಸಂಶೋಧಕರು ಮಾಡಿದ್ದಾರೆ. ಕೊನೆಯ ಪಕ್ಷದಲ್ಲಿ ಬರುವ ‘ಮದ್ದುರ ಶ್ರೀ ನಾರಸಿಂಹನೆ’ ಸ್ತೋತ್ರದಿಂದ ಈತ ಮದ್ದೂರಿನವನಿರಬೇಕು ಎಂದೂ ಊಹಿಸಲಾಗಿದೆ. ಅದೇನೇ ಇರಲಿ. ಈ ಹಾಡು ನೂರಾರು ಪಾಠಾಂತರಗಳನ್ನು ಪಡೆದಿದೆ. ಮೂಲದಲ್ಲಿ ಸರಳವಾಗಿದ್ದ ಹಾಡು, ಜನರಿಂದ ಜನರಿಗೆ ಹರಡುತ್ತಾ ಬೆಳೆಯುತ್ತಾ ಹೋಗಿದೆ. ಈ ಪದ್ಯದ ಗಾತ್ರವನ್ನು ಊಹಿಸುವುದೇ ಅಸಾಧ್ಯವಾಗಿದೆ. ಹೀಗಿರುವಲ್ಲಿ, ಮೂಲ ಪದ್ಯವೆಂದು ಗುರುತಿಸಲಾಗುವ ಪಠ್ಯವೊಂದನ್ನು ಕನ್ನಡ ಸಾಹಿತ್ಯ ಪರಿಷತ್ ಅಚ್ಚು ಹಾಕಿದೆ. ಮೂಲ ಪಠ್ಯವನ್ನು ಹುಡುಕುವ ಪ್ರಯತ್ನ ಹಲವರು ಮಾಡಿದ್ದಾರೆ. ಡಿ. ಎಲ್. ನರಸಿಂಹಾಚಾರ್ಯರು ಇಂತಹ ಪ್ರಯತ್ನವನ್ನು ಮೊದಲಿಗೆ ಮಾಡಿದ್ದರು. ಟಿ. ಕೇಶವಭಟ್ಟರು ಕೂಡ ಒಂದು ಪಠ್ಯವನ್ನು ಪ್ರಕಟಿಸಿದ್ದಾರೆ. ಅಥವಾ ಸರಳ ರೂಪದ ಹಾಡು ವಿವಿಧ ಕವಿಗಳಿಂದಾಗಿ ಅದು ಕಠಿಣವಾಗುತ್ತಾ ಹೋಯಿತೋ ಎಂಬ ವಾದವೂ ಇದೆ.

ಈ ‘ಗೋವಿನ ಹಾಡು’ ಶಾಲೆಯ ಪಠ್ಯದಲ್ಲಿ ಕಲಿತಿರುವುದಕ್ಕಿಂತ ಭಿನ್ನವಾಗಿದೆ ಮತ್ತು ತುಂಬಾ ದೀರ್ಘವಾಗಿದೆ. ಅಲ್ಲಿರುವಷ್ಟು ಸರಳವೂ ಅಲ್ಲ. ಸಾಧಾರಣವಾಗಿ ಜಾನಪದ ಹಾಡುಗಳನ್ನು ಶ್ರೀಸಾಮಾನ್ಯರು ಕಟ್ಟುತ್ತಾರೆ. ಅದು ಅವರ ಬದುಕಿನ ಕಾಯಕದ ಜೊತೆಗೆ ಹುಟ್ಟಿರುವಂತಹದು. ಅಲ್ಲಿ ಪಾಂಡಿತ್ಯಕ್ಕಿಂತ ಹೃದಯವಂತಿಕೆಯೇ ಕೆಲಸ ಮಾಡಿರುತ್ತದೆ. ಆ ಕಾರಣದಿಂದಲೇ ಸರಳ ಪದಗಳಲ್ಲಿ ಬದುಕಿಗೆ ಸಂಬಂಧಪಟ್ಟ ಹಿರಿದಾದುದನ್ನು ಹೇಳುತ್ತಾರೆ. ಆದರೆ ಗೋವಿನ ಹಾಡು ತುಸು ಕ್ಲಿಷ್ಟವಿದೆ. ಹಳೆಗನ್ನಡವೂ ಈ ಪದ್ಯದಲ್ಲಿ ಬಳಕೆಯಾಗಿದೆ. ಈ ಪದ್ಯದಲ್ಲಿ ಒಟ್ಟು 114 ಚರಣಗಳಿವೆ. ಬರೇ ಗೋವಿನ ಸತ್ಯವಂತಿಕೆಗಷ್ಟೇ ಪದ್ಯಗಳು ಸೀಮಿತವಾಗಿಲ್ಲ. ಬದಲಿಗೆ ಕಾಡಿನ ವರ್ಣನೆ, ಗೋವುಗಳ ವರ್ಣನೆ, ಗಿಡಮರಗಳ ವರ್ಣನೆ, ಕಾಡುಮೃಗಗಳ ವರ್ಣನೆ ಇತ್ಯಾದಿಗಳಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ. ಹೀಗೆ ವರ್ಣನೆಗಳ ನಡುವೆ ಪುಣ್ಯಕೋಟಿಯ ಸತ್ಯದ ಕತೆಯನ್ನೂ ಹೇಳುವ ಪ್ರಯತ್ನ ನಡೆಸಲಾಗಿದೆ.

ಗೋವಿನ ಹಾಡಿನ ಕತೆಯನ್ನು ಕೆಲವು ಕವಿಗಳು ಮಕ್ಕಳ ಕಣ್ಣಿನಲ್ಲಿ ನೋಡಿದ್ದರೆ, ಹಿರಿಯ ಚಿಂತಕರು ಅದನ್ನು ‘ಸಂಸ್ಕೃತಿ ಸಂಘರ್ಷ’ವಾಗಿಯೂ ಗುರುತಿಸಿದ್ದಾರೆ. ಪುಣ್ಯಕೋಟಿಯೂ ಭಾವಾನಾತ್ಮಕವಾಗಿ ಹುಲಿಯನ್ನು ಸೋಲಿಸುತ್ತದೆ. ಹುಲಿ ಸ್ವಭಾವತಃ ಮಾಂಸಾಹಾರಿ. ಹಸಿದ ಸಂದರ್ಭದಲ್ಲಿ ಗೋವನ್ನು ತಿನ್ನುವುದರಲ್ಲಿ ತಪ್ಪೇನಿದೆ? ಅದು ಹುಲ್ಲು ತಿಂದು ಬದುಕಲು ಸಾಧ್ಯವೇ? ಹಸಿದ ಹೊತ್ತಿನಲ್ಲೂ ಪುಣ್ಯಕೋಟಿಯ ಮಾತು ಕೇಳಿ ಅದನ್ನು ಹೋಗಕೊಟ್ಟದ್ದು ಹುಲಿಯ ತ್ಯಾಗ ತಾನೆ. ಹುಲಿಯ ತ್ಯಾಗವನ್ನು ಬದಿಗಿಟ್ಟು ಪುಣ್ಯಕೋಟಿಯನ್ನು ವೈಭವೀಕರಿಸುವುದು ಎಷ್ಟು ಸರಿ? ಪುಣ್ಯಕೋಟಿಯದು ಮೋಸ ಎಂದು ಬರೆದ ವಿಮರ್ಶಕರಿದ್ದಾರೆ. ಪುಣ್ಯಕೋಟಿಯನ್ನು ಬ್ರಾಹ್ಮಣ್ಯಕ್ಕೂ, ಹುಲಿಯನ್ನು ದಲಿತರಿಗೂ ಸಮೀಕರಿಸಿದವರೂ ಇದ್ದಾರೆ. ಅದೇನೇ ಇರಲಿ, ಗೋವಿನ ಹಾಡನ್ನು ಸಮಗ್ರವಾಗಿ ಪದ್ಯ ರೂಪದಲ್ಲಿ ಓದುವ ಅವಕಾಶವನ್ನು ಈ ಕೃತಿ ನೀಡುತ್ತದೆ.

22 ಪುಟಗಳ ಈ ಕೃತಿಯ ಮುಖಬೆಲೆ 25 ರೂಪಾಯಿ.

share
-ಕಾರುಣ್ಯಾ
-ಕಾರುಣ್ಯಾ
Next Story
X