Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ದುಃಸ್ಥಿತಿಯಲ್ಲಿರುವ ಸಿಎಂ ತವರೂರು...

ದುಃಸ್ಥಿತಿಯಲ್ಲಿರುವ ಸಿಎಂ ತವರೂರು ಶಿವಮೊಗ್ಗ ಸಬ್ ರಿಜಿಸ್ಟಾರ್ ಕಚೇರಿ ಕಟ್ಟಡ!

ರಾಜ್ಯದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುವ ನೊಂದಣಿ ಇಲಾಖೆಗೆ ಅನುದಾನದ ಕೊರತೆಯೇ?!

ವರದಿ : ಬಿ. ರೇಣುಕೇಶ್ವರದಿ : ಬಿ. ರೇಣುಕೇಶ್9 Oct 2019 12:05 AM IST
share
ದುಃಸ್ಥಿತಿಯಲ್ಲಿರುವ ಸಿಎಂ ತವರೂರು ಶಿವಮೊಗ್ಗ ಸಬ್ ರಿಜಿಸ್ಟಾರ್ ಕಚೇರಿ ಕಟ್ಟಡ!

ಶಿವಮೊಗ್ಗ, ಅ. 8: ಕಚೇರಿಗಳ ನವೀಕರಣಕ್ಕೆಂದೇ, ಕೆಲ ಇಲಾಖೆಗಳು ಪ್ರತಿವರ್ಷ ಲಕ್ಷಾಂತರ ರೂ. ವ್ಯಯಿಸುತ್ತವೆ. ನೌಕರರು ಹಾಗೂ ಕಚೇರಿಗೆ ಆಗಮಿಸುವ ನಾಗರೀಕರಿಗೆ ಹಲವು ಸೌಲಭ್ಯ ಕಲ್ಪಿಸುತ್ತವೆ. ನಿಯಮಿತವಾಗಿ ಕಚೇರಿ ಗೋಡೆಗಳಿಗೆ ಸುಣ್ಣಬಣ್ಣ ಬಳಿದು ಸ್ವಚ್ಚತೆಗೆ ಒತ್ತು ನೀಡುತ್ತವೆ. ಕೆಲ ಸರ್ಕಾರಿ ಕಚೇರಿಗಳಂತೂ 'ಕಾರ್ಪೋರೇಟ್' ಆಫೀಸ್ ರೀತಿ ನಳನಳಿಸುತ್ತಿರುತ್ತವೆ.

ಆದರೆ, ಶಿವಮೊಗ್ಗದ ವಿನೋಬನಗರದಲ್ಲಿರುವ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ದ ಕಟ್ಟಡದಲ್ಲಿರುವ ಉಪ ನೊಂದಣಿ (ಸಬ್ ರಿಜಿಸ್ಟಾರ್) ಕಚೇರಿಯು ಅವ್ಯವಸ್ಥೆಯ ಆಗರವಾಗಿದೆ. ದುಃಸ್ಥಿತಿಯಲ್ಲಿದೆ. ನಾಗರೀಕರು ಮಾತ್ರವಲ್ಲದೆ, ಕಚೇರಿ ನೌಕರರು ಕೂಡ ತೊಂದರೆ ಎದುರಿಸುವಂತಾಗಿದೆ.

ಸುಣ್ಣಬಣ್ಣವಿಲ್ಲ: ಗೋಡೆಗಳು ಸುಣ್ಣಬಣ್ಣ ಕಂಡು ಅದೆಷ್ಟೊ ವರ್ಷಗಳೇ ಕಳೆದಿವೆ. ಗೋಡೆಗಳ ಮೇಲಿನ ಬಣ್ಣ ಚಕ್ಕಳ ಏಳುತ್ತಿದೆ. ದಶಕದ ಹಿಂದೆ ಮಾಡಲಾಗಿದ್ದ ಅಲ್ಯುಮಿನಿಯಂ ಪಾರ್ಟಿಷಿಯನ್ ವ್ಯವಸ್ಥೆ ಕಿತ್ತು ಹೋಗಲಾರಂಭಿಸಿದೆ. ಮಳೆ ಬಂದರೆ ಕಟ್ಟಡದ ಒಳಗಡೆ ನೀರು ತೊಟ್ಟಿಕ್ಕಲಾರಂಭಿಸುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಕಡತಗಳ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆಯೇ ಇಲ್ಲವಾಗಿದೆ. 

ಕೆಲ ಕಡತಗಳನ್ನು ಕಚೇರಿ ಪ್ರವೇಶ ದ್ವಾರದ ಬಳಿಯೇ ಶೇಖರಿಸಿಡಲಾಗಿದೆ. ಕೆಲ ವಿಭಾಗಗಳಲ್ಲಿ, ಸಿಬ್ಬಂದಿಗಳು ಕುಳಿತುಕೊಳ್ಳಲು ಸೂಕ್ತ ಜಾಗದ ವ್ಯವಸ್ಥೆಯಿಲ್ಲವಾಗಿದೆ. ಕಚೇರಿಯೊಳಗೆ ಕಾಲಿಟ್ಟರೆ, ಯಾವುದೋ ಪಾಳು ಕೊಂಪೆಗೆ ಕಾಲಿಟ್ಟ ಅನುಭವ ಉಂಟಾಗುತ್ತದೆ. 

ನೀರಿಲ್ಲ: ನೊಂದಣಿ ಮತ್ತಿತರ ಕೆಲಸ ಕಾರ್ಯಗಳಿಗೆಂದು, ಪ್ರತಿನಿತ್ಯ ಕಚೇರಿಗೆ ನೂರಾರು ನಾಗರೀಕರು ಆಗಮಿಸುತ್ತಾರೆ. ಸದಾ ಕಚೇರಿ ಜನಜಂಗುಳಿಯಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ಕಚೇರಿಗೆ ಆಗಮಿಸುವ ನಾಗರೀಕರಿಗೆ ಕುಡಿಯಲು ನೀರು ಕೂಡ ಸಿಗದಂತ ಸ್ಥಿತಿಯಿದೆ.

ಕೆಲವು ವೇಳೆ ತಮ್ಮ ಕೆಲಸಕಾರ್ಯ ಮಾಡಿಸಿಕೊಳ್ಳಲು, ನಾಗರಿಕರು ಗಂಟೆಗಟ್ಟಲೆ ಕಚೇರಿಯಲ್ಲಿ ಕಾದು ಕುಳಿತುಕೊಳ್ಳಬೇಕಾಗುತ್ತದೆ. ಆದರೆ ಕುರ್ಚಿಗಳ ಸಂಖ್ಯೆ ಕಡಿಮೆಯಿರುವುದರಿಂದ, ನಾಗರಿಕರು ಎಲ್ಲೆಂದರಲ್ಲಿ ಕುಳಿತುಕೊಳ್ಳುವಂತಾಗಿದೆ. ಜನಜಂಗುಳಿ ಹೆಚ್ಚಿದ್ದ ವೇಳೆಯಲ್ಲಂತೂ ಮಹಿಳೆ, ವಯೋವೃದ್ದರ ಪಾಡಂತೂ ಹೇಳತೀರದಾಗಿದೆ. 

'ಕಚೇರಿಯ ಶೌಚಾಲಯ ವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗಿತ್ತು. ನೀರಿನ ಪೂರೈಕೆಯೂ ಇಲ್ಲವಾಗಿತ್ತು. ಸಾರ್ವಜನಿಕರಿರಲಿ, ಅಧಿಕಾರಿ-ಸಿಬ್ಬಂದಿಗಳು ಶೌಚಾಲಯಕ್ಕೆ ಕಚೇರಿಯಿಂದ ಹೊರ ಹೋಗಬೇಕಾದ ದುಃಸ್ಥಿತಿಯಿತ್ತು. ಎಷ್ಟೆ ಮನವಿ ಮಾಡಿದರೂ, ಪ್ರಾಧಿಕಾರ ಆಡಳಿತ ಶೌಚಾಲಯ ದುರಸ್ತಿಗೆ ಮುಂದಾಗಿರಲಿಲ್ಲ. ಇತ್ತೀಚೆಗಷ್ಟೆ ಪ್ರಾಧಿಕಾರವು ಶೌಚಾಲಯ ದುರಸ್ತಿಗೊಳಿಸಿ, ನೀರು ಪೂರೈಸಲು ಕ್ರಮಕೈಗೊಂಡಿದೆ' ಎಂದು ಪತ್ರ ಬರಹಗಾರರೋರ್ವರು ಹೇಳುತ್ತಾರೆ. 

ಒಟ್ಟಾರೆ ರಾಜ್ಯದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುವ ಹೆಗ್ಗಳಿಕೆ ನೊಂದಣಿ ಇಲಾಖೆಯದ್ದಾಗಿದೆ. ಅದರಡಿ ಕಾರ್ಯನಿರ್ವಹಿಸುವ ಸಬ್ ರಿಜಿಸ್ಟಾರ್ ಕಚೇರಿಗಳ ವ್ಯವಸ್ಥೆ ಕೂಡ ಕಾಲಕ್ಕೆ ಅನುಗುಣವಾಗಿ ಬದಲಾಗಬೇಕಾಗಿದೆ. 

ಪ್ರಸ್ತುತ ಶಿವಮೊಗ್ಗ ಸಬ್ ರಿಜಿಸ್ಟಾರ್ ಕಚೇರಿಯ ಅವ್ಯವಸ್ಥೆ ಸರಿಪಡಿಸಲು ಇನ್ನಾದರೂ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕಾಗಿದೆ. ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮುಂದಾಗಲಿದೆವೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. 

share
ವರದಿ : ಬಿ. ರೇಣುಕೇಶ್
ವರದಿ : ಬಿ. ರೇಣುಕೇಶ್
Next Story
X