Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ​‘ಮಾತೆ’ಯಾಗಿಯೇ ಶೋಷಣೆಗೊಳಗಾಗುವ ಹೆಣ್ಣು:...

​‘ಮಾತೆ’ಯಾಗಿಯೇ ಶೋಷಣೆಗೊಳಗಾಗುವ ಹೆಣ್ಣು: ವೀಣಾ ಶೆಟ್ಟಿ

‘ಶಕ್ತ್ಯೋಪಾಸನೆ ಮತ್ತು ಸ್ತ್ರೀ ಸಮಾಜ’ ಕುರಿತು ವಾಕ್ಯಗೋಷ್ಠಿ

ವಾರ್ತಾಭಾರತಿವಾರ್ತಾಭಾರತಿ11 Oct 2019 10:54 PM IST
share

ಗುರುಪುರ, ಅ.11: ವರ್ಷಗಳ ಹಿಂದೆ ಪುರುಷ ಸಮಾಜವು ಸ್ತ್ರೀಯರಿಗೆ ಕೆಲವು ನಿರ್ಬಂಧ ಹೇರಿತ್ತು. ಅದೇ ಹೊತ್ತಿಗೆ ಹೆಣ್ಣು ಪೂಜನೀಯಳು ಅಥವಾ ‘ಮಾತೆ’ ಎಂಬ ಹೇರಿಕೆ ಅಥವಾ ಒಂದು ಚೌಕಟ್ಟಿನಲ್ಲಿರಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಅಲ್ಲಿಂದ ಮುಂದಕ್ಕೆ ಹೆಣ್ಣು ಮಾತೆಯಾಗಿಯೇ ಶೋಷಣೆಗೊಳಗಾಗುತ್ತಿದ್ದಾಳೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಹೆಣ್ಣು ‘ಮಾತೆ’ ಎಂಬುದಕ್ಕಿಂತಲೂ ಆಕೆ ‘ಶಕ್ತಿ’ ಎಂದು ಹೇಳಬೇಕಾಗುತ್ತದೆ. ಗಂಡಿನಂತೆ ಹೆಣ್ಣಿಗೂ ಸಕಲ ಫಲಾಪೇಕ್ಷೆ ಇದೆ. ಆದ್ದರಿಂದ ಹೆಣ್ಣು ತನ್ನ ‘ಶಕ್ತಿ’ ಮೂಲಕ ಸಾಮಾಜಿಕ ವಂಚನೆ ಅಥವಾ ಶೋಷಣೆಯಿಂದ ಹೊರ ಬಂದು ಎಲ್ಲದರಲ್ಲೂ ಹಕ್ಕುದಾರಳಾಗಬೇಕು ಎಂದು ಎಂಆರ್‌ಪಿಎಲ್ ಅಧಿಕಾರಿ ಚೇಳ್ಯಾರುಗುತ್ತು ವೀಣಾ ಆರ್. ಶೆಟ್ಟಿ ಹೇಳಿದರು.

ಪ್ರಾಚೀನ ಭಾರತ ಧರ್ಮಾಡಳಿತ ಪುನರುತ್ಥಾನ ಕೂಟ (ಗುತ್ತು-ಬೀಡು-ಬಾವ-ಬಾರಿಕೆ-ಪರಡಿ ಮತ್ತು ಮಾಗಂದಡಿಗಳ ಸಂಗಮ)ಇದರ ಆಶ್ರಯದಲ್ಲಿ ಗುರುಪುರ ಗೋಳಿದಡಿಗುತ್ತಿನಲ್ಲಿ ‘ಶಕ್ತ್ಯೋಪಾಸನೆ ಮತ್ತು ಸ್ತ್ರೀ ಸಮಾಜ’ ಕುರಿತು ಗುರುವಾರ ನಡೆದ ಚಿಂತನ-ಮಂಥನ ವಾಕ್ಯಗೋಷ್ಠಿಯಲ್ಲಿ ‘ಪ್ರಕೃತಿಯಲ್ಲಿ ಸಕಲ ಫಲಾಪೇಕ್ಷಿಯಾಗಿ ಹೆಣ್ಣು’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

‘ಮಂತ್ರ ಉಪಾಸನೆ ಮತ್ತು ಹೆಣ್ಣು’ ವಿಷಯದಲ್ಲಿ ಮಾತನಾಡಿದ ಆಶಾ ಜಗದೀಶ ಸ್ತ್ರೀಯೊಬ್ಬಳು ಮಂತ್ರೋಚ್ಛಾರ, ಪೂಜೆ ಮಾಡಬಾರದೆಂಬುದಿಲ್ಲ. ಹಿಂದಿನ ಕಾಲದಲ್ಲಿ ಪುರುಷರಿಗೆ ಸಮಾನವಾಗಿ ಪೂಜಾ ಕಾರ್ಯಕ್ರಮಗಳಲ್ಲಿ ಸ್ತ್ರೀ ಸಕ್ರಿಯವಾಗಿ ಭಾಗಿಯಾಗುತ್ತಿದ್ದಳು. ಅದಕ್ಕೆ ವೇದದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಆದರೆ ಅದಕ್ಕೊಂದು ವಯೋಮಿತಿ ಎಂಬುದಿದೆ. ಮಂತ್ರಗಳನ್ನು ತಪ್ಪಾಗಿ ಪಠಿಸಿದರೆ ಮಂತ್ರದ ಫಲ ಸಿಗುವುದಿಲ್ಲ. ಮಂತ್ರೋಚ್ಛಾರದಿಂದ ಸ್ಮರಣಶಕ್ತಿ ಹೆಚ್ಚುತ್ತದೆ. ಹಾಗಾಗಿ ಹೆಣ್ಣು ಮಂತ್ರೋಚ್ಛಾರ ಮಾಡಬಹುದು ಎಂದರು.

‘ಅಗ್ನಿ ಮತ್ತು ಹೆಣ್ಣು’ ವಿಷಯದಲ್ಲಿ ಮಾತನಾಡಿದ ಆಸರೆ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಡಾ. ಆಶಾ ಜ್ಯೋತಿ ರೈ ಅಗ್ನಿ ಎಂದರೆ ದೇವರು, ಪಂಚಭೂತಗಳಿಂದ ಮಾನವನ ಸೃಷ್ಟಿಯಾಗಿದೆ ಎಂಬ ನಂಬಿಕೆ ಇದೆ. ಹಾಗಾಗಿ ದೈನಂದಿನ ಕಾರ್ಯಗಳಲ್ಲಿ ಅಗ್ನಿ ಸಾಕ್ಷ್ಯಿಯಾಗಿದೆ. ಆತ್ಮದೊಳಗೂ ಅಗ್ನಿ ಇದೆ. ಅಗ್ನಿ ಸ್ತ್ರೀ ಸಖಿ. ಹೆಣ್ಣಿನಲ್ಲಿ ಮುಖ್ಯವಾಗಿ ‘ಪಂಚಾಗ್ನಿ ಧಾರಣಾ ಶಕ್ತಿ’(ಆಕಾಶ, ಮೋಡ, ಪೃಥ್ವೀ, ಪುರುಷ ಮತ್ತು ಸ್ತ್ರೀ) ಕಾಣಬಹುದು. ಇಲ್ಲಿ ಬರುವ ‘ಸ್ತ್ರೀ’ ಸಾಕ್ಷಾತ್ ಅಗ್ನಿಯಾಗಿದೆ. ಈ ಮೂಲಕ ಹೆಣ್ಣಿಗೆ ಪ್ರಕೃತಿಯೇ ವಿಶೇಷ ಜವಾಬ್ದಾರಿ ನೀಡಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಹೆಣ್ಣು ತನ್ನ ಮೂಲಗುಣಗಳಿಗೆ ತಕ್ಕುದಾಗಿ ನಡೆದುಕೊಳ್ಳಬೇಕು. ಮಹಿಳೆಗೆ ಮಹಿಳೆಯೇ ಬೆಂಗಾವಲಾದಾಗ ಮಾತ್ರ ಇದು ಸಾಧ್ಯ ಎಂದರು.

ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ವಾಕ್ಯಗೋಷ್ಠಿಯ ಸಮನ್ವಯಕಾರರಾಗಿದ್ದರು. ಸುನೀಲಾ ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X