ಶ್ರೀನಗರದ ಮಾರುಕಟ್ಟೆಯಲ್ಲಿ ಗ್ರೆನೇಡ್ ದಾಳಿ: 8 ಮಂದಿಗೆ ಗಾಯ
ಹೊಸದಿಲ್ಲಿ, ಅ.12: ಜಮ್ಮು ಕಾಶ್ಮೀರದ ಶ್ರೀನಗರದ ಮಾರುಕಟ್ಟೆಯೊಂದರಲ್ಲಿ ಶಂಕಿತ ಉಗ್ರರಿಂದ ನಡೆದ ಗ್ರೆನೇಡ್ ದಾಳಿಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
370ನೆ ವಿಧಿ ರದ್ದತಿ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಮೂರನೆ ದಾಳಿಯ ಘಟನೆ ಇದಾಗಿದೆ. ಹರಿ ಸಿಂಗ್ ಹರಿ ಸ್ಟ್ರೀಟ್ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿದರು. ಗ್ರೆನೇಡ್ ರಸ್ತೆಬದಿಯಲ್ಲಿ ಸ್ಫೋಟಗೊಂಡಿತು ಎಂದವರು ಮಾಹಿತಿ ನೀಡಿದ್ದಾರೆ.
Next Story