ಉಡುಪಿ : ವಿಠಲ ಶೆಟ್ಟಿ ನಿಧನ
ಉಡುಪಿ, ಅ.13: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸಂಪಿಲ ವಿಠಲ ಶೆಟ್ಟಿ(85) ಅಲ್ಪ ಕಾಲದ ಅಸೌಖ್ಯದಿಂದ ತೆಂಕನಿಡಿಯೂರು ಕೊಜಕೊಳ್ಳಿಯಲ್ಲಿರುವ ಸ್ವಗೃಹದಲ್ಲಿ ಅ.13ರಂದು ನಿಧನರಾದರು.
ವಿಠಲ ಶೆಟ್ಟಿ ಪುತ್ತೂರು, ಸೋಮವಾರಪೇಟೆ, ಉಡುಪಿ, ಕುಂದಾಪುರದಲ್ಲಿ ಬ್ಲಾಕ್ ಅಭಿವೃದ್ಧಿ ಅಧಿಕಾರಿ, ದ.ಕ. ಜಿಲ್ಲಾ ಪಂಚಾಯತ್ ಕೌನ್ಸಿಲ್ ಕಾರ್ಯ ದರ್ಶಿ, ಬೆಂಗಳೂರಿನಲ್ಲಿ ಆರ್ಡಿಪಿಆರ್ ಜಂಟಿ ನಿರ್ದೇಶಕಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.
ಮೃತರ ಇಚ್ಛೆಯಂತೆ ಅವರ ದೇಹವನ್ನು ಮಣಿಪಾಲ ಆಸ್ಪತ್ರೆಗೆ ದಾನ ಮಾಡಲಾಯಿತು. ಮೃತರು ಪತ್ನಿ ಎರೆಹುಳು ಗೊಬ್ಬರ ತಜ್ಞೆ, ಕೃಷಿ ತಜ್ಞೆ ಹೇಮಲತಾ ಶೆಟ್ಟಿ ಹಾಗೂ ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
Next Story