Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಬೆಂಗಳೂರು: ‘ಹುಸೇನ್ ದಿನ’ ಆಚರಣೆ-...

ಬೆಂಗಳೂರು: ‘ಹುಸೇನ್ ದಿನ’ ಆಚರಣೆ- ಸೌಹಾರ್ದಕ್ಕಾಗಿ ಧ್ವನಿಗೂಡಿಸಿದ ಸಂದೇಶ

ವಾರ್ತಾಭಾರತಿವಾರ್ತಾಭಾರತಿ13 Oct 2019 10:14 PM IST
share
ಬೆಂಗಳೂರು: ‘ಹುಸೇನ್ ದಿನ’ ಆಚರಣೆ- ಸೌಹಾರ್ದಕ್ಕಾಗಿ ಧ್ವನಿಗೂಡಿಸಿದ ಸಂದೇಶ

ಬೆಂಗಳೂರು, ಅ.13: ಇಮಾಮ್ ಹುಸೇನ್(ರ) ಅವರ ಗುಣಗಾನ, ಉರ್ದು ಶಹರಿಗಳು, ಭಕ್ತಿಯ ಜೈಕಾರಗಳು, ಸೌಹಾರ್ದ ಮತ್ತು ಸಹೋದರತೆಯ ಸಂದೇಶಗಳನ್ನು ಪ್ರವಚನದ ಮೂಲಕ ಸಾರುವ ಮೂಲಕ ‘ಹುಸೇನ್ ದಿನ’ ಆಚರಿಸಲಾಯಿತು.

ರವಿವಾರ ನಗರದ ಜಾನ್ಸನ್ ಮಾರ್ಕೆಟ್ ಬಳಿಯಿರುವ ಶಿಯಾ ಆರಾಮ್‌ಗಾ(ಖಬರಸ್ಥಾನ) ಆವರಣದಲ್ಲಿ 27ನೆ ವಾರ್ಷಿಕ ‘ಹುಸೇನ್ ದಿನ’ವನ್ನು ಶಿಯಾ ಸಮುದಾಯದ ಮುಸ್ಲಿಮರು ಆಚರಿಸಿದರು. ಜತೆಗೆ, ‘ಐಕ್ಯತೆಗಾಗಿ ಜೊತೆಯಾಗಿ’ ಎಂಬುದು ಈ ಬಾರಿಯ ಆಚರಣೆಯ ಧ್ಯೇಯವಾಕ್ಯವಾಗಿತ್ತು. ಇದರಂತೆ ಭಾಗವಹಿಸಿದ್ದ ಅಧ್ಯಾತ್ಮ ಗುರುಗಳು, ಧಾರ್ಮಿಕ ಮುಖಂಡರು, ರಾಜಕಾರಣಿಗಳು ಮತ್ತು ಕಲಾವಿದರು ಕೆಡುಕನ್ನು ತಿರಸ್ಕರಿಸುವ ಹಾಗೂ ಧಾರ್ಮಿಕ ಸಾಮರಸ್ಯ ಬೆಳೆಸುವ ಮಾತುಗಳನ್ನು ಹಂಚಿಕೊಂಡಿದ್ದು, ವಿಶೇಷವಾಗಿತ್ತು.

ಆರಂಭದಲ್ಲಿ ಮಾತನಾಡಿದ ಜೈನ ಧರ್ಮದ ಚಿಂತಕ, ಅಹಿಂಸಾ ವಿಶ್ವ ಭಾರತೀ ಸಂಸ್ಥಾಪಕ ಆಚಾರ್ಯ ಡಾ.ಲೋಕೇಶ್ ಮುನಿ, ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ, ನಾವು ಇಮಾಮ್ ಹುಸೇನ್ ಅವರ ತತ್ವಗಳನ್ನು ಅನುಸರಿಸಬೇಕು ಎಂದು ಸಲಹೆ ಮಾಡಿದರು.

ನಮ್ಮಲ್ಲಿ ಧರ್ಮ, ಜಾತಿ ಎಂಬ ಭಾವನೆಗಳೇ ಹೆಚ್ಚು. ಹಾಗಾಗಿಯೇ ಅವು ಶಾಶ್ವತವಾಗಿ ಉಳಿಸಿಕೊಂಡಿದ್ದೇವೆ. ಆದರೆ, ಇಮಾಮ್ ಹುಸೇನ್ ಅವರು ಹಾಗಿರಲಿಲ್ಲ. ಏಕತೆಯ ಜೀವನಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಸತ್ಯ ಮತ್ತು ನ್ಯಾಯಕ್ಕಾಗಿ ಬಹುದೊಡ್ಡ ಸವಾಲುಗಳನ್ನು ಎದುರಿಸಿ, ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಕೋಮುವಾದ, ಕಾಶ್ಮೀರ, ಅಯೋಧ್ಯೆ ಸೇರಿದಂತೆ ಯಾವುದೇ ವಿವಾದ ಇರಲಿ. ಅದನ್ನು ಹಿಂಸೆಯಿಂದ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಒಮ್ಮೆ ಪರಸ್ಪರ ಕುಳಿತು ಕೊಂಡು ಮಾತುಕತೆ ನಡೆಸಿದರೆ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಡಾ.ಲೋಕೇಶ್ ಮುನಿ ನುಡಿದರು.

ಕರ್ನಾಟಕ ಪ್ರದೇಶ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್‌ನ ಕಾರ್ಯನಿರ್ವಹಕ ಕಾರ್ಯದರ್ಶಿಯೂ ಆಗಿರುವ ಕ್ರೈಸ್ತ ಧರ್ಮ ಗುರು ರೆವರೆಂಡ್ ಮೊನ್‌ಸಿಗ್ನೋರ್ ಎಸ್.ಜಯನಾಥನ್ ಮಾತನಾಡಿ, ಎಲ್ಲ ಧರ್ಮಗಳು ತ್ಯಾಗ, ಬಲಿದಾನ, ಸೇವೆ, ಕ್ಷಮೆ, ಕರುಣೆ, ಸದ್ಭಾವನೆಯ ತತ್ವಗಳನ್ನು ಪ್ರತಿಪಾದಿಸುತ್ತವೆ. ಆದರೆ, ದ್ವೇಷಿಸುವಂತ ವಾತಾವರಣವನ್ನು ಕೆಲವು ಶಕ್ತಿಗಳು ನಿರ್ಮಿಸುತ್ತಿವೆ. ಅವರ ವಿರುದ್ಧ ಇಮಾಮ್ ಹುಸೇನ್ ವಾದಿಗಳು ಒಂದಾಗಬೇಕಿದೆ ಎಂದರು.

ಉತ್ತರ ಪ್ರದೇಶದ ಶ್ರೀ ಸ್ವಾಮಿ ಗ್ಲೋಬಲ್ ಪೀಸ್ ಫೌಂಡೇಶನ್ ಸಂಸ್ಥಾಪಕ ಸ್ವಾಮಿ ಸಾರಂಗ್‌ಜಿ ಮಹಾರಾಜ್ ಮಾತನಾಡಿ, ಭಿನ್ನ ನಂಬಿಕೆ, ಸಾಮಾಜಿಕ ವರ್ಗದ ಕಾರಣಕ್ಕೆ ಜನರನ್ನು ದ್ವೇಷಿಸಲಾಗುತ್ತಿದೆ. ಇದರಿಂದ ದೇಶದ ಕೆಲವು ಕಡೆ ನಡುರಸ್ತೆಯಲ್ಲೇ ಹಿಂಸೆಯ ಕೃತ್ಯಗಳು ನಡೆಯುತ್ತಿವೆ. ಮನುಕುಲಕ್ಕೆ ಈಗ ಬೇಕಾಗಿರುವುದು ಇಮಾಮ್ ಹುಸೇನ್ ಪ್ರತಿಪಾದಿಸಿದ ಶಾಂತಿಯ ಸಂದೇಶ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೌಲಾನ ಡಾ.ಹಸನ್ ಕುಮೈಲಿ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಆಗಾ ಸುಲ್ತಾನ್ ಸ್ವಾಗತಿಸಿದರು. ಭಾರತದಲ್ಲಿನ ಇರಾನ್ ದೇಶದ ರಾಯಭಾರಿ ಡಾ.ಅಲಿ ಚೆಗಿನಿ , ಬಿಎಸ್ಪಿ ಸಂಸದ ಕೆ.ಡ್ಯಾನಿಷ್ ಅಲಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೌದ್ಧ ಧಾರ್ಮಿಕ ಮುಖಂಡ ಲಾಮಾ ದುಬೂಮ್ ತುಲ್ಕು, ರಂಗಭೂಮಿ ಕಲಾವಿದ ಆಮಿರ್ ರಝಾ ಹುಸೇನ್, ಪ್ರೊ.ಸಯ್ಯದ್ ಐನುಲ್ ಹಸನ್ ಆಬಿದಿ, ಶಕೀಲ್ ಹಸನ್ ಶಮ್ಸಿ, ಡಾ.ಮುಹಮ್ಮದ್ ಅಬ್ಬಾಸ್ ಖಾಕಿ, ಶೈಲೇಂದ್ರ ಸಿಂಗ್ ಚೌಹಾಣ್, ನಿವೃತ್ತ ಐಎಎಸ್ ಅಧಿಕಾರಿ ಝಮೀರ್ ಪಾಷ, ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಝೀಂ, ಅಲ್ಲಾಮ ಶಬೀರ್ ಅಲಿ ವಾರ್ಸಿ ಸೇರಿದಂತೆ ಪ್ರಮುಖರಿದ್ದರು.

‘ದುರ್ವಿಚಾರ ಹೊರಗಿಡಿ’

ಮುಸ್ಲಿಮರ ಜತೆ ದ್ವೇಷವನ್ನು ಜೋಡಿಸಲಾಗುತ್ತಿದೆ.ಅಷ್ಟೇ ಅಲ್ಲದೆ, ಅವರನ್ನು ಭಯಗೊಳಿಸಲಾಗುತ್ತಿದೆ.ಇನ್ನೂ, ರಾಜಕೀಯದವರು ಧರ್ಮದ ಮೂಲಕ ದುರ್ವಿಚಾರ ತುಂಬುತ್ತಿದ್ದಾರೆ. ಅಂಥವರನ್ನು ಅಧಿಕಾರದಿಂದ ದೂರವಿರಿಸಬೇಕು.

-ಕೆ.ಡ್ಯಾನಿಷ್ ಅಲಿ, ಬಿಎಸ್ಪಿ ಸಂಸದ

ಸತ್ಯ ಹಾಗೂ ಹಕ್ಕಿಗಾಗಿ 1400 ವರ್ಷಗಳ ಹಿಂದೆ ಇಮಾಮ್ ಹುಸೇನ್ ಕರ್ಬಲಾದಲ್ಲಿ ತಮ್ಮ ಜೀವ ಬಲಿದಾನ ಮಾಡಿದರು. ಇವತ್ತು ಇಮಾಮ್ ಹುಸೇನ್ ಅವರ ಮಾರ್ಗದರ್ಶನದಲ್ಲಿ ಮುಂದುವರೆದು ಸತ್ಯ, ನ್ಯಾಯಕ್ಕಾಗಿ ಪ್ರತಿಯೊಬ್ಬರೂ ಎದ್ದು ನಿಲ್ಲಬೇಕಿದೆ

-ಡಾ.ಅಲಿ ಚೆಗಿನಿ, ಭಾರತದಲ್ಲಿನ ಇರಾನ್ ದೇಶದ ರಾಯಭಾರಿ

ಪ್ರವಾದಿ ಮುಹಮ್ಮದ್(ಸ) ಅವರ ಮೊಮ್ಮಗನಾದ ಹುಸೇನ್ ಅವರು ಸತ್ಯ, ಶಾಂತಿ, ಸೋದರತೆ, ಸಹಬಾಳ್ವೆ ಸಮಾಜದಲ್ಲಿ ನೆಲೆಗೊಳ್ಳುವಂತೆ ಮಾಡಲು ದುಷ್ಟರೊಂದಿಗೆ ಕರ್ಬಲಾ ಕದನದಲ್ಲಿ ಹೋರಾಡುತ್ತಲೇ ಹುತಾತ್ಮರಾದರು ಎಂಬ ನಂಬಿಕೆಯಿಂದ ಶಿಯಾ ಮುಸ್ಲಿಮರು ಪ್ರತಿವರ್ಷ ‘ಹುಸೇನ್ ದಿನ’ ಆಚರಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X