Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..!

ಓ ಮೆಣಸೇ..!

ಪಿ.ಎ.ರೈಪಿ.ಎ.ರೈ14 Oct 2019 10:52 AM IST
share
ಓ ಮೆಣಸೇ..!

♦ ನನ್ನನ್ನು ಮೂಲೆಗುಂಪು ಮಾಡಿದಂತೆ ಚಕ್ರವರ್ತಿ ಸೂಲಿಬೆಲೆಯನ್ನು ಕಡೆಗಣಿಸಬೇಡಿ

- ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಸಂಸ್ಥಾಪಕ

► ಮೂಲೆಗಳೆಲ್ಲ ಭರ್ತಿಯಾಗಿದೆಯಂತೆ. ಇನ್ನೇನಿದ್ದರೂ ಕಸದಬುಟ್ಟಿಯೇ ಗತಿ.

---------------------

♦ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಮಧ್ಯೆ ಯಾವುದೇ ಬಿರುಕಿಲ್ಲ

- ಎಸ್. ಮುನಿಸ್ವಾಮಿ, ಸಂಸದ

► ಇವರ ನಡುವೆ ಇರುವುದು ಬಿರುಕು ಅಲ್ಲ, ಆರೆಸ್ಸೆಸ್‌ನ ಸಂತೋಷ್ ಅವರ ಜನಿವಾರ.

---------------------

♦ ಮೂರು ಸಾವಿರ ವರ್ಷಗಳ ಹಿಂದೆ ನಮ್ಮದೂ ಶಕ್ತಿಶಾಲಿ ದೇಶವಾಗಿತ್ತು

- ಡಾ. ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ

► ಹೌದು, ಆಗ ದೇಶ ಒಡೆಯುವ ಆರೆಸ್ಸೆಸ್‌ನಂತಹ ಸಂಘಟನೆಗಳಿರಲಿಲ್ಲ.

---------------------

♦ ನಟ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಪ್ರಕರಣದಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ

- ವಿ. ಸೋಮಣ್ಣ, ಸಚಿವ

► ಈ ಪ್ರಾಯದಲ್ಲಿ ನೋಡಬಾರದ್ದನ್ನು ನೋಡಿದರೆ ಇದೆಲ್ಲ ಸಹಜ.

---------------------

♦ ಸಂಸದ ನಳಿನ್ ಕುಮಾರ್ ಕಟೀಲು ಹೆಂಡದ ಅಂಗಡಿ ಮುಂದೆ ಕುಡಿದು ಮಾತನಾಡುವ ರೀತಿ ವರ್ತಿಸುತ್ತಿದ್ದಾರೆ

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

► ಅದು ಹೆಂಡದ ಅಂಗಡಿ ಅಲ್ಲ, ಆರೆಸ್ಸೆಸ್ ಅಂಗಡಿ.

---------------------

♦ ಬಿಜೆಪಿ ಎಷ್ಟೊಂದು ಪರಿಣತ ಪಕ್ಷವಾಗಿದೆಯೆಂದರೆ ಅದು ಚುನಾವಣೆಯಲ್ಲಿ ಸ್ಪರ್ಧಿಸದೆಯೇ ಸರಕಾರ ರಚಿಸಬಹುದಾಗಿದೆ

- ರಾಮಮಾಧವ, ಬಿಜೆಪಿ ಪ್ರಧಾನ ಕಾರ್ಯದರ್ಶಿ

► ಇವಿಎಂನಿಂದಾಗಿ ಬಿಜೆಪಿಯ ಆತ್ಮವಿಶ್ವಾಸ.

---------------------

♦ ನಾನು ವೀರಶೈವನೂ ಅಲ್ಲ, ಲಿಂಗಾಯತನೂ ಅಲ್ಲ, ಕುರುಬನಂತೂ ಅಲ್ಲವೇ ಅಲ್ಲ

- ಈಶ್ವರಪ್ಪ, ಸಚಿವ

► ಮನುಷ್ಯ ಹೌದೋ ಅಲ್ಲವೋ ಎನ್ನುವ ಬಗ್ಗೆಯೂ ಅನುಮಾನ ಇದೆಯಂತೆ.

---------------------

♦  ಗುಂಪು ಥಳಿತ ಎಂಬ ಪದ ಪಾಶ್ಚಿಮಾತ್ಯದ ಸೃಷ್ಟಿ

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

► ಪದ ವಿದೇಶಿ, ಆದರೆ ಥಳಿತ ಸ್ವದೇಶಿ.

---------------------

♦ ಯಾರು ಒಪ್ಪಲಿ, ಬಿಡಲಿ. ದೇಶದ ಆರ್ಥಿಕತೆ ಈಗ ಸರಿಯಿಲ್ಲ ಎನ್ನುವುದು ಸತ್ಯ

- ಉದ್ಧವ್ ಠಾಕ್ರೆ, ಶಿವಸೇನೆ ಮುಖ್ಯಸ್ಥ

►ಸರಿಯಿಲ್ಲದವರ ಜೊತೆಗೆ ಮತ್ತೇಕೆ ಮೈತ್ರಿ?

---------------------

♦ ಕಾಶ್ಮೀರ ಪಾಕಿಸ್ತಾನದ ರಕ್ತವಿದ್ದಂತೆ

- ಫರ್ವೇಝ್ ಮುಶರ್ರಫ್, ಪಾಕ್ ಮಾಜಿ ಅಧ್ಯಕ್ಷ

► ರಕ್ತದಾಹಿ ಪಾಕಿಸ್ತಾನ ಎಂದು ಕರೆಯಬಹುದೇ?

---------------------

♦ ಯೋಗವು ಮನಸ್ಸನ್ನು ಶಾಂತವಾಗಿರಿಸಿ ನೈತಿಕತೆಯ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗಿದೆ

- ನಳಿನ್ ಕುಮಾರ್ ಕಟೀಲು, ಸಂಸದ

► ಯೋಗ ಮಾಡಿಯಾದರೂ ಮನಸ್ಸನ್ನು ಶಾಂತವಿರಿಸಲು ಪ್ರಯತ್ನಿಸಿ.

---------------------

♦ ನನ್ನಿಂದಾಗಿ ಯಡಿಯೂರಪ್ಪ ಇಂದು ಮುಖ್ಯಮಂತ್ರಿಯಾಗಿದ್ದಾರೆ

- ಎಚ್. ವಿಶ್ವನಾಥ್, ಅನರ್ಹ ಶಾಸಕ

► ಅನರ್ಹರಿಂದ ಮುಖ್ಯಮಂತ್ರಿಯಾಗಿರುವುದರಿಂದ ಅವರನ್ನು ಅನರ್ಹ ಮುಖ್ಯಮಂತ್ರಿ ಎಂದು ಕರೆಯಬಹುದೇ?

---------------------

♦ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ

- ಸಿ.ಟಿ. ರವಿ, ಸಚಿವ

► ಬದಲಾವಣೆ ಮಾಡಲಿಕ್ಕಿದೆಯೇ ಎಂದು ನಿಮ್ಮನ್ನು ಪ್ರಶ್ನಿಸಿದವರು ಯಾರು?

---------------------

♦ ಪಾಕ್-ಚೀನಾ ಸಂಬಂಧ ಬಂಡೆಯಷ್ಟು ಗಟ್ಟಿಯಾಗಿದೆ

- ಜಿನ್ ಪಿಂಗ್, ಚೀನಾ ಅಧ್ಯಕ್ಷ

► ಬಂಡೆಯ ಕೆಳಗೆ ನಿಂತು ಮೋದಿಯ ಜೊತೆಗೆ ಮಾತುಕತೆ ನಡೆಸಿದಾಗಲೇ ಅದು ಗೊತ್ತಾಗಿತ್ತು.

---------------------

♦ ಪ್ರಧಾನಿಯ 56 ಇಂಚಿನ ಎದೆಯಲ್ಲಿ ತಾಯಿ ಹೃದಯವಿಲ್ಲ

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

► ತಾಯಿಯದೋ, ತಂದೆಯದೋ ಒಟ್ಟಿನಲ್ಲಿ ಅಲ್ಲಿ ಹೃದಯ ಇದೆಯೇ ಎನ್ನುವುದೇ ಪ್ರಶ್ನೆಯಾಗಿದೆ.

---------------------

♦ ನಮ್ಮ ಒಬ್ಬ ಯೋಧ ಹುತಾತ್ಮನಾದರೆ ಶತ್ರು ಪಾಳಯದ ಹತ್ತು ಮಂದಿಯನ್ನು ಕೊಲ್ಲುತ್ತೇವೆ

- ಅಮಿತ್ ಶಾ, ಕೇಂದ್ರ ಸಚಿವ

► ನಮ್ಮ ಯೋಧರಿರುವುದು ನಿಮ್ಮ ರಾಜಕೀಯ ಚಿತ್ರಕತೆಗಾಗಿ ಹುತಾತ್ಮರಾಗುವುದಕ್ಕಾಗಿ ಅಲ್ಲ.

---------------------

♦ ಉತ್ತರ ಪ್ರದೇಶ ರಾಮರಾಜ್ಯವಲ್ಲ, ಈಗ ನಾಥೂರಾಮ್ ರಾಜ್ಯವಾಗಿದೆ

- ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

► ಕ್ರಿಮಿನಲ್‌ಗಳ ಪಾಲಿಗೆ ರಮ್ ರಾಜ್ಯ

---------------------

♦ ಜನಧನ್ ಖಾತೆಗಳು ಬಡವರ ಸಶಶ್ತೀಕರಣದ ಕೀಲಿ ಕೈಗಳಾಗುತ್ತಿವೆ

- ಪ್ರತಾಪ ಸಿಂಹ, ಸಂಸದ

► ಖಾಲಿ ಕೈಗಳ ಪಾಲಿಗೆ ಖಾತೆಗಳ ಕೀಲಿಕೈಯಿಂದ ಏನು ಪ್ರಯೋಜನ?

---------------------

♦ ಬಿಜೆಪಿ ನನಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದಿದ್ದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತೇನೆ

- ರಾಜು ಕಾಗೆ, ಮಾಜಿ ಶಾಸಕ

► ಜೆಡಿಎಸ್‌ನಿಂದಲೂ ಒಂದು ಟಿಕೆಟ್ ಬುಕ್ ಮಾಡಿಕೊಳ್ಳಿ.

---------------------

♦ ನಮ್ಮ ಸಂಪ್ರದಾಯದಲ್ಲಿ ಅತ್ಯಾಚಾರಿಗೆ ಶಿಕ್ಷೆ ನೀಡುವ ಕಾನೂನು ಅಥವಾ ಪದ್ಧತಿ ಇಲ್ಲ

- ರಾಖೇಶ್ ಸಿನ್ಹಾ, ಆರೆಸ್ಸೆಸ್ ಚಿಂತಕ

► ಹೌದು, ಇಲ್ಲಿ ಅತ್ಯಾಚಾರಿ ಒಂದೋ ಸಂಸದ, ಇಲ್ಲವೇ ಮುಖ್ಯಮಂತ್ರಿಯಾಗುತ್ತಾನೆ. ಅದೇ ಇಲ್ಲಿನ ಶಿಕ್ಷೆಯ ರೀತಿ.

---------------------

share
ಪಿ.ಎ.ರೈ
ಪಿ.ಎ.ರೈ
Next Story
X