ಕಂಟೈನರ್ ಗೆ ಕಾರು ಢಿಕ್ಕಿ: ಮಂಡ್ಯ ಉಪವಿಭಾಗಾಧಿಕಾರಿ ಪ್ರಾಣಾಪಾಯದಿಂದ ಪಾರು
![ಕಂಟೈನರ್ ಗೆ ಕಾರು ಢಿಕ್ಕಿ: ಮಂಡ್ಯ ಉಪವಿಭಾಗಾಧಿಕಾರಿ ಪ್ರಾಣಾಪಾಯದಿಂದ ಪಾರು ಕಂಟೈನರ್ ಗೆ ಕಾರು ಢಿಕ್ಕಿ: ಮಂಡ್ಯ ಉಪವಿಭಾಗಾಧಿಕಾರಿ ಪ್ರಾಣಾಪಾಯದಿಂದ ಪಾರು](https://www.varthabharati.in/sites/default/files/images/articles/2019/10/14/214763-1571071859.jpeg)
ಮಂಡ್ಯ, ಅ.14: ತಾಲೂಕಿನ ಹೊಸಬೂದನ ಬಳಿ ಸೋಮವಾರ ಮಧ್ಯಾಹ್ನ ಕಂಟೈನರ್ ಲಾರಿಗೆ ಕಾರು ಢಿಕ್ಕಿಯಾಗಿ ಕಾರಿನಲ್ಲಿದ್ದ ಮಂಡ್ಯ ಉಪ ವಿಭಾಗಾಧಿಕಾರಿ ಸೂರಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಿಂದಿನ ತಡರಾತ್ರಿ ಹೊಸಬೂದನೂರು ಬಳಿ ಅಪಘಾತವಾಗಿ ಹೆದ್ದಾರಿಗೆ ಉರುಳಿದ್ದ ವಾಹನವನ್ನು ಸೋಮವಾರ ಕಾರ್ಯಾಚರಣೆ ಮೂಲಕ ತೆರವು ನಡೆಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ವಾಹನ ತೆರವಿಗಾಗಿ ಏಕಮುಖ ಸಂಚಾರ ವ್ಯವಸ್ಥೆ ಇತ್ತು. ಮುಂದೆ ಹೋಗುತ್ತಿದ್ದ ಕಂಟೈನರ್ ಲಾರಿ ಚಾಲಕ ದಿಢೀರ್ ಬ್ರೇಕ್ ಹಾಕಿದಾಗ ಎಸಿ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಕಂಟೈನರ್ ಗೆ ಢಿಕ್ಕಿ ಹೊಡೆಯಿತು.
ಕಾರು ಜಖಂಗೊಂಡಿದ್ದು, ಎಸಿ ಸೂರಜ್ ಬೇರೆ ವಾಹನದಲ್ಲಿ ತೆರಳಿದರು. ಸಿಪಿಐ ನೇಮಿರಾಜ್ ಸ್ಥಳಕ್ಕೆ ಭೇಟಿ ನೀಡಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story