Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 5 ನಿಮಿಷಗಳಲ್ಲಿ 3 ಹತ್ಯೆ: ಬಂಗಾಳ...

5 ನಿಮಿಷಗಳಲ್ಲಿ 3 ಹತ್ಯೆ: ಬಂಗಾಳ ತ್ರಿವಳಿ ಕೊಲೆಯ ಅಸಲಿ ಕಥೆ ಇಲ್ಲಿದೆ

ಬಿಜೆಪಿ, ಆರೆಸ್ಸೆಸ್ ಆರೋಪಗಳು ಸಂಪೂರ್ಣ ಸುಳ್ಳು

ವಾರ್ತಾಭಾರತಿವಾರ್ತಾಭಾರತಿ15 Oct 2019 11:09 PM IST
share
5 ನಿಮಿಷಗಳಲ್ಲಿ 3 ಹತ್ಯೆ: ಬಂಗಾಳ ತ್ರಿವಳಿ ಕೊಲೆಯ ಅಸಲಿ ಕಥೆ ಇಲ್ಲಿದೆ

ಅಕ್ಟೋಬರ್ 8ರಂದು ದುರ್ಗಾಪೂಜೆಯ ಕೊನೆಯ ದಿನ ಬಂಧು ಪ್ರಕಾಶ್ ಪಾಲ್ ಮತ್ತು ಅವರ ಕುಟುಂಬಕ್ಕೂ ಕೊನೆಯ ದಿನವಾಗಿತ್ತು. ಅಂದು ಮನೆಗೆ ಬಂದಿದ್ದ ಆರೋಪಿ ಉತ್ಪಲ್ ಬೆಹಾರ ಪ್ರಕಾಶ್ ಪಾಲ್, ಅವರ ಗರ್ಭಿಣಿ ಪತ್ನಿ ಮತ್ತು 6 ವರ್ಷದ ಪುತ್ರನನ್ನು ನಿರ್ದಯವಾಗಿ ಕೊಲೆಗೈದಿದ್ದ. 5 ನಿಮಿಷಗಳೊಳಗೆ 3 ಕೊಲೆಗಳು ನಡೆದಿತ್ತು.

ಈ ಹತ್ಯೆಗಳ ಬಗ್ಗೆ ದೇಶಾದ್ಯಂತ ಸುದ್ದಿಯಾಗುತ್ತಲೇ ಆನ್ ಲೈನ್ ನಲ್ಲಿ ದ್ವೇಷದ ಸಂದೇಶಗಳು ಹರಡಲಾರಂಭಿಸಿತು. ಹತ್ಯೆಯಾದ ಪ್ರಕಾಶ್ ಪಾಲ್ ಸಂಘಟನೆಯ ಕಾರ್ಯಕರ್ತ ಎಂದು ಆರೆಸ್ಸೆಸ್ ಪ್ರತಿಪಾದಿಸಿದರೆ, ಬಿಜೆಪಿಯು ಈ ಕೊಲೆ ಹಿಂದಿ 'ಜಿಹಾದಿ ಶಕ್ತಿ'ಗಳಿವೆ ಎಂದು ಆರೋಪಿಸಿತು. ಆದರೆ ಘಟನೆಗೆ ಸಂಬಂಧಿಸಿ ನಂತರ ಮಾತನಾಡಿದ್ದ ಪ್ರಕಾಶ್ ಪಾಲ್ ಅವರ ತಾಯಿ "ನನ್ನ ಪುತ್ರ ಆರೆಸ್ಸೆಸ್ ಕಾರ್ಯಕರ್ತನಲ್ಲ" ಎಂದು ಸ್ಪಷ್ಟಪಡಿಸಿದ್ದರು.

ಈ ಘಟನೆಗೆ ರಾಜಕೀಯ, ಧಾರ್ಮಿಕ ಬಣ್ಣ ಬಳಿಯುವ ಹಲವು ಪ್ರಯತ್ನಗಳು ಆನ್ ಲೈನ್ ನಲ್ಲಿ ನಡೆಯಿತು. ಇದಕ್ಕೆ ಪೂರಕವಾದ ಫೊಟೊಗಳು, ಪೋಸ್ಟ್ ಗಳು ಫೇಸ್ ಬುಕ್, ವಾಟ್ಸ್ಯಾಪ್, ಟ್ವಿಟರ್ ಗಳಲ್ಲಿ ವೈರಲ್ ಆದವು. ಆದರೆ ಇದೀಗ ಪೊಲೀಸರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ರಾಜಕೀಯ ಕಾರಣಕ್ಕೆ ನಡೆದ ಹತ್ಯೆಗಳಲ್ಲ. ಬದಲಾಗಿ, ಹಣಕಾಸಿನ ವಿಚಾರಣಕ್ಕೆ ನಡೆದ ಕೊಲೆಗಳು ಎಂದಿದ್ದಾರೆ.

ಈ ಘಟನೆಯ ಪ್ರಮುಖ ಆರೋಪಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಈತನ ಹೆಸರು ಉತ್ಪಲ್ ಬೆಹರಾ. ಈತ ಕೊಲೆಗೀಡಾದ ಪ್ರಕಾಶ್ ಪಾಲ್ ಅವರ ಮನೆ ಸಮೀಪದಲ್ಲೇ ವಾಸಿಸುತ್ತಿದ್ದ.

ಇನ್ಶೂರೆನ್ಸ್ ವ್ಯವಹಾರ ನಡೆಸುತ್ತಿದ್ದ ಪ್ರಕಾಶ್ ಪಾಲ್ ಅವರಿಂದ ಉತ್ಪಲ್ ಬೆಹ್ರಾ ಎರಡು ಎಲ್‌ಐಸಿ ಪಾಲಿಸಿಗೆ ಹಣ ಪಾವತಿಸಿದ್ದ.  ಪಾಲ್ ಮೊದಲ ಪಾಲಿಸಿಗೆ ರಶೀದಿ ನೀಡಿದ್ದರು. ಆದರೆ, ಎರಡನೇ ಪಾಲಿಸಿಗೆ ರಶೀದಿ ನೀಡಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಕೆಲವು ವಾರಗಳ ಕಾಲ ಪಾಲ್ ಹಾಗೂ ಬೆಹ್ರಾ ನಡುವೆ ಜಗಳ ಕೂಡ ನಡೆದಿತ್ತು. ಪಾಲ್ ಬೆಹ್ರಾನನ್ನು ಅವಮಾನಿಸಿದ್ದರು. ಇದರಿಂದ ಕ್ರೋಧಗೊಂಡಿದ್ದ ಬೆಹ್ರಾ ಹತ್ಯೆಗೆ ಸಂಚು ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಧ್ಯಾಹ್ನ 12:06ರಿಂದ 12:11ರ ನಡುವೆ ಎಲ್ಲಾ ಕೊಲೆಗಳು ನಡೆದಿವೆ. ಮನೆಯೊಳಗೆ ಪ್ರವೇಶಿಸುತ್ತಲೇ ಆತ ಈ ಕೃತ್ಯವೆಸಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಪೊಲೀಸರೇ ಆರೋಪಿಯನ್ನು ಬಂಧಿಸಿ, ಆತ ಸ್ವತಃ ತಪ್ಪೊಪ್ಪಿಕೊಂಡ ನಂತರವೂ ಆರೆಸ್ಸೆಸ್ ತನ್ನ ಪ್ರತಿಪಾದನೆಯನ್ನು ಬಿಟ್ಟಿಲ್ಲ. ರಾಜ್ಯದ ಬಿಜೆಪಿ ನಾಯಕರಂತೂ ಈ ಕೊಲೆಗಳ ಹಿಂದೆ 'ಜಿಹಾದಿಗಳ ಕೈವಾಡವಿದೆ' ಎಂದು ಆರೋಪಿಸುತ್ತಿದ್ದಾರೆ.

"ನಾವು ಈ ತನಿಖೆಯನ್ನು ನಂಬುವುದಿಲ್ಲ. ಬಿಜೆಪಿ ಕಾರ್ಯಕರ್ತರ ಹತ್ಯೆಯಾದರೆ ಪೊಲೀಸರು ಅದನ್ನು ಆತ್ಮಹತ್ಯೆ ಅಥವಾ ಕುಟುಂಬ ಕಲಹ ಎನ್ನುತ್ತಾರೆ. ನಾವು ನಮ್ಮ ಆರೋಪಗಳಿಗೆ ಬದ್ಧರಾಗಿದ್ದೇವೆ. ಈ ಘಟನೆಯ ಹಿಂದೆ ಜಿಹಾದಿಗಳು ಇದ್ದಾರೆ" ಎಂದು ರಾಜ್ಯದ ಬಿಜೆಪಿ ನಾಯಕ ಸಯಾಂತನ್ ಬಸು ಹೇಳಿದ್ದಾಗಿ 'ದ ಪ್ರಿಂಟ್' ವರದಿ ಮಾಡಿದೆ.

ಆದರೆ ಘಟನೆ ನಡೆದು ಕೆಲ ದಿನಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಪ್ರಕಾಶ್ ಪಾಲ್ ಕುಟುಂಬಸ್ಥರು, ಪ್ರಕಾಶ್ ಪಾಲ್ ಯಾವುದೇ ರಾಜಕೀಯ ಪಕ್ಷ ಯಾ ಸಂಘಟನೆಯ ಜತೆ ನಂಟು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

"ಆತ ಒಂದು ಬಿಳಿ ಕಾಗದದಂತಿದ್ದ. ಆತ ಬಿಜೆಪಿ ಸದಸ್ಯನೆಂದು ನಿಮಗೆ ಯಾರು ಹೇಳಿದ್ದು?, ಆತ ಯಾವತ್ತೂ ಬಿಜೆಪಿ ಅಥವಾ ತೃಣಮೂಲ ಕಾಂಗ್ರೆಸ್ ಜತೆ ಸಂಬಂಧ ಹೊಂದಿರಲಿಲ್ಲ. ಆತ ಯಾವತ್ತೂ ಆರೆಸ್ಸೆಸ್ ಜತೆಗಿರಲಿಲ್ಲ. ಸುಳ್ಳನ್ನು ಹರಡಲಾಗುತ್ತಿದೆ'' ಎಂದು ಪ್ರಕಾಶ್ ಪಾಲ್ ತಾಯಿ, 68 ವರ್ಷದ ಮಾಲಾ ಪಾಲ್ ಆಕ್ರೋಶದಿಂದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X