ಗಾಂಜಾ ಸೇವನೆ: ನಾಲ್ವರು ವಶಕ್ಕೆ
ಬ್ರಹ್ಮಾವರ, ಅ.16: ಗಾಂಜಾ ಸೇವನೆಗೆ ಸಂಬಂಧಿಸಿ ಬ್ರಹ್ಮಾವರ ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅ.15ರಂದು ಬೆಳಗ್ಗೆ ಬ್ರಹ್ಮಾವರ ಗಾಂಧಿ ಮೈದಾನದ ಬಳಿ ಚಾಂತಾರು ಗ್ರಾಮದ ಅಗ್ರಹಾರದ ಆದರ್ಶ ನಾಯಿರಿ(24) ಮತ್ತು ಅ.14ರಂದು ರಾತ್ರಿ 11ಗಂಟೆ ಸುಮಾರಿಗೆ ಕುಮ್ರಗೋಡು ಶಾಲೆಯ ಬಳಿ ಸ್ಥಳೀಯ ನಿವಾಸಿ ವಿನಾಯಕ ಪ್ರಭು(30) ಎಂಬವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಅದೇ ರೀತಿ ಅ.12ರಂದು ಸಂಜೆ ವೇಳೆ ಅಲೆವೂರು ಗ್ರಾಮದ ಪ್ರಗತಿನಗರ ಬಳಿ ಸ್ಥಳೀಯ ನಿವಾಸಿ ಪ್ರತಾಪ್(20) ಮತ್ತು ರಾತ್ರಿ ವೇಳೆ ಹೆರ್ಗಾ ಗ್ರಾಮದ ಈಶ್ವರನಗರದ ಬಳಿ ಮಣಿಪಾಲ ಎಂಐಟಿ ಹಾಸ್ಟೆಲ್ನ ವೈಷ್ಣವ್(19) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಇದರಿಂದ ಎಲ್ಲರು ಗಾಂಜಾ ಸೇವಿಸಿರುವುದು ದೃಢ ಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ.
Next Story