ಉಡುಪಿ: ವಸುಮತಿ ಭಟ್ಗೆ ಪಿಎಚ್ಡಿ
ಉಡುಪಿ: ಉಡುಪಿ ಎಂಜಿಎಂ ಕಾಲೇಜು ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಸುಮತಿ ಭಟ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪಿಎಚ್ಡಿ ಪದವಿ ನೀಡಿದೆ.
ಅವರು ಧಾರವಾಡ ವಿವಿಯ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್.ನಡೋಣಿ ಅವರ ಮಾರ್ಗದರ್ಶನದಲ್ಲಿ ಮುರಾರಿ ಕವಿ ಪ್ರಣೀತ ‘ಅನರ್ಘರಾಘವಮ್’ ನಾಟಕದ ಸಮೀಕ್ಷೆ ಎಂಬ ವಿಚಾರದಲ್ಲಿ ಮಹಾಪ್ರಬಂಧ ಮಂಡಿಸಿದ್ದರು.
ಮೂಲತಃ ಶಿರಸಿಯವರಾದ ಅವರು ದಿ.ಮಹಾಕಾಳಿ-ಗೋಪಾಲ ಭಟ್ ದಂಪತಿಗಳ ಪುತ್ರಿ, ಬಿಎಯಲ್ಲಿ ಐದನೇ ರ್ಯಾಂಕ್ ವಿಜೇತೆ ಹಾಗೂ ಎಂ.ಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
Next Story