ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಏರಿದ ಲಾರಿ
![ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಏರಿದ ಲಾರಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಏರಿದ ಲಾರಿ](https://www.varthabharati.in/sites/default/files/images/articles/2019/10/19/215469-1571488224.jpg)
ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮೇಲೆ ಗೊಬ್ಬರ ತುಂಬಿದ ಲಾರಿ ಹತ್ತಿ ಅವಾಂತರ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆದಿದೆ.
ಸತ್ಯಮಂಗಲಂ ಮುಖ್ಯರಸ್ತೆ ಹಾದುಹೋಗುವ ನಗರದ ಸೋಮವಾರಪೇಟೆ ಬಳಿ ಬೆಳಗಿನ ಜಾವ ಘಟನೆ ಸಂಭವಿಸಿದ್ದು, ಚಾಲಕ ನಿದ್ರೆಯ ಮಂಪರು ಇಲ್ಲವೇ ಕುಡಿದು ಲಾರಿ ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ.
ಲಾರಿ ತಡೆಗೋಡೆಗೆ ಗುದ್ದಿರುವ ರಭಸಕ್ಕೆ ಮುಂದಿನ ಎರಡು ಚಕ್ರಗಳು ನಜ್ಜುಗುಜ್ಜಾಗಿ, ಡೀಸೆಲ್ ಟ್ಯಾಂಕ್ ಕಳಚಿ ಬಿದ್ದಿದೆ. ಘಟನೆಯಿಂದ ಮುಕ್ತ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡಿದೆ. ಲಾರಿಯಲ್ಲಿ ಗೊಬ್ಬರವಿದ್ದು, ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಘಟನೆ ನಡೆದ ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಸಂಚಾರಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
![](https://www.varthabharati.in/sites/default/files/images/galllery/2019/10/19/IMG-20191019-WA0044.jpg)
Next Story