ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕು: ಅಭಿಜಿತ್ ಬ್ಯಾನರ್ಜಿ ಕುರಿತು ಮಾಯಾವತಿ
ಹೊಸದಿಲ್ಲಿ, ಅ.20: ಅರ್ಥಶಾಸ್ತ್ರದಲ್ಲಿ ನೊಬೆಲ್ ಬಹುಮಾನವನ್ನು ಗೆದ್ದಿರುವುದಕ್ಕಾಗಿ ಭಾರತೀಯ ಮೂಲದ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿಯವರನ್ನು ಅಭಿನಂದಿಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು, ಈ ಸಾಧನೆಗಾಗಿ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಟ್ಟುಕೊಳ್ಳಬೇಕು ಮತ್ತು ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂದು ರವಿವಾರ ಟ್ವೀಟಿಸಿದ್ದಾರೆ.
ತನ್ನ ಫ್ರೆಂಚ್-ಅಮೆರಿಕನ್ ಪತ್ನಿ ಎಸ್ತರ್ ಡುಫ್ಲೊ ಮತ್ತು ಅಮೆರಿಕನ್ ಆರ್ಥಿಕ ತಜ್ಞ ಮೈಕೆಲ್ ಕ್ರೆಮರ್ ಅವರೊಂದಿಗೆ ನೊಬೆಲ್ ಬಹುಮಾನವನ್ನು ಗೆದ್ದಿರುವ ಬ್ಯಾನರ್ಜಿ (58) ಕೋಲ್ಕತಾ ಸಂಜಾತರಾಗಿದ್ದು,ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದಾರೆ.
Next Story