Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ20 Oct 2019 11:49 PM IST
share
ಓ ಮೆಣಸೇ…

ನಾಯಕರಾದವರು ಹೊಂದಾಣಿಕೆ ರಾಜಕೀಯ ಮಾಡದೆ ನಾಡಿಗೆ ಒಳಿತಾಗುವ ಕೆಲಸ ಮಾಡಬೇಕು - ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ
ಹೊಂದಾಣಿಕೆ ರಾಜಕೀಯ ಮಾಡದೇ ಇದ್ದಿದ್ದರೆ ನೀವು ಮುಖ್ಯಮಂತ್ರಿ ಆಗುವುದು ಸಾಧ್ಯವಾಗುತ್ತಿರಲಿಲ್ಲ.

---------------------

ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಗುಟ್ಟಾಗಿ ಚರ್ಚಿಸಬಾರದು - ಕೆ.ಆರ್. ರಮೇಶ್ ಕುಮಾರ್, ಮಾಜಿ ಸ್ಪೀಕರ್
ಅವರು ಚರ್ಚಿಸುತ್ತಿರುವುದು ರಾಜ್ಯಕ್ಕೆ ಸಂಬಂಧಿಸಿದ ವಿಷಯವೆಂದು ನಿಮಗೆ ಹೇಳಿದವರು ಯಾರು?

---------------------

ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಗೆ ನೆರವಾಗಲು ಭಾರತೀಯ ಸೇನೆಯನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಾವು ಸಿದ್ಧ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಭಾರತದ ಸಂಘಪರಿವಾರ ನಿಗ್ರಹಕ್ಕೆ ಪಾಕಿಸ್ತಾನಿ ಸೇನೆಯ ನೆರೆವನ್ನು ಪಡೆದುಕೊಳ್ಳುವುದಾದರೆ ಅವರು ಒಪ್ಪಬಹುದು.

---------------------

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಲು 56 ಇಂಚು ಎದೆಯ ಪ್ರಧಾನಿ ನರೇಂದ್ರ ಮೋದಿಯೇ ಬರಬೇಕಾಯಿತು - ಅಮಿತ್ ಶಾ, ಕೇಂದ್ರ ಸಚಿವ
   ದೇಶದ ಸ್ಥಾನಮಾನವೇ ವಿಶ್ವದಲ್ಲಿ ರದ್ದಾಗಿರುವಾಗ ಇನ್ನು ಕಾಶ್ಮೀರದ ಬಗ್ಗೆ ಹೇಳುವುದೇನಿದೆ.

---------------------

ಯುವಕರು ಉದ್ಯೋಗ ಕೇಳಿದರೆ ಕೇಂದ್ರ ಸರಕಾರ ಚಂದಮಾಮನನ್ನು ತೋರಿಸುತ್ತ್ತಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಚಂದ್ರಯಾನ ಯಶಸ್ವಿಯಾಗಿದ್ದರೆ, ನಿರುದ್ಯೋಗಿಗಳನ್ನೆಲ್ಲ ಅಲ್ಲಿಗೇ ಕಳುಹಿಸುವ ಯೋಜನೆಯಿದೆಯಂತೆ.

---------------------

ಸಂಸದ ನಳಿನ್‌ಕುಮಾರ್ ಕಟೀಲು ಗೋಲಿ ಆಡುವ ಮಕ್ಕಳಂತೆ ವರ್ತಿಸುತ್ತಿದ್ದಾರೆ - ಸಿದ್ದರಾಮಯ್ಯ, ಮಾಜಿಮುಖ್ಯಮಂತ್ರಿ
ವರ್ತಿಸುವುದೇನೂ ಅಲ್ಲ, ತಮ್ಮ ವಿರಾಮದ ಹೊತ್ತಿನಲ್ಲಿ ಅವರು ಗೋಲಿ ಆಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

---------------------

370ನೇ ವಿಧಿ ರದ್ದತಿಯು ಅಂಬೇಡ್ಕರ್ ಮತ್ತು ಶಿವಾಜಿಗೆ ಸಲ್ಲಿಸಿದ ಗೌರವ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಇನ್ನು ಸಂವಿಧಾನ ರದ್ದತಿಯೊಂದು ಬಾಕಿ ಉಳಿದಿದೆ.

---------------------

ಭಾರತದಲ್ಲಿ ಮುಸ್ಲಿಮರು ತುಂಬಾ ಸಂತೋಷದಿಂದಿದ್ದಾರೆ ಇದಕ್ಕೆ ನಾವು ಹಿಂದೂಗಳಾಗಿರುವುದೇ ಕಾರಣ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ದಲಿತರು ಸಂತೋಷದಲ್ಲಿ ಇರದೇ ಇರುವುದಕ್ಕೆ ಯಾರು ಕಾರಣ?

---------------------

ವಿದ್ಯುನ್ಮಾನ ಮತ ಯಂತ್ರದಲ್ಲಿ ಕಮಲ ಚಿಹ್ನೆಯ ಗುಂಡಿ ಒತ್ತಿದರೆ, ಪಾಕ್ ಮೇಲೆ ಅಣು ಬಾಂಬ್ ಹಾಕಿದಂತೆ - ಕೇಶವ್ ಪ್ರಸಾದ್ ವೌರ್ಯ, ಉ.ಪ್ರ. ಉಪಮುಖ್ಯಮಂತ್ರಿ
ಹಾಗೆಂದು ಹೇಳಿ ಗೆದ್ದು, ಈಗ ದೇಶದ ಜನರ ಮೇಲೆಯೇ ಬಾಂಬ್ ಹಾಕುತ್ತಿದ್ದಾರೆ.

---------------------

ಒಂದು ವೇಳೆ ನನ್ನ ಮೇಲೆ ಆದಾಯ ತೆರಿಗೆ ದಾಳಿಯಾದರೆ ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡರೇ ಕಾರಣ - ಕೆ.ಎನ್. ರಾಜಣ್ಣ, ಮಾಜಿ ಸಚಿವ
ಅಂದರೆ ಅವರ ಮನೆಯಲ್ಲಿರುವ ಅಕ್ರಮ ಹಣವನ್ನೆಲ್ಲ ನಿಮ್ಮ ಮನೆಯಲ್ಲಿ ಇಡಲು ಕೊಟ್ಟಿದ್ದಾರೆಯೇ?

---------------------
ನನ್ನ ಮನಸ್ಸಿನಲ್ಲಿ ತುಂಬಾ ನೋವಿದೆ, ಆದರೂ ರಾಜಕೀಯದಿಂದ ನಿವೃತ್ತಿ ಆಗಲಾರೆ - ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಯಾವುದಾದರೂ ನೋವಿನ ಎಣ್ಣೆ ಹಚ್ಚಿ ನೋಡಿ.

---------------------

ನಮ್ಮ ಪೂರ್ವಜರು ಕಂಡುಕೊಂಡ ಒಂದೊಂದು ವಿದ್ಯೆಯೂ ಪಾಶ್ಚಿಮಾತ್ಯ ದಾಳಿಯ ಪ್ರಭಾವಕ್ಕೆ ಸಿಲುಕಿ ರೂಪುಗೆಟ್ಟಿದೆ - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಶೀಲಗೆಟ್ಟ ಸಂಬಂಧ ಪಾಶ್ಚಿಮಾತ್ಯರ ಕೊಡುಗೆಯೋ, ಪೂರ್ವಜರದೋ?

---------------------

ಆರ್ಥಿಕ ಕುಸಿತ ಇಲ್ಲ ಎಂದು ನಿರಾಕರಿಸುತ್ತಿರುವವರು, ಚಕ್ರವರ್ತಿ ನಗ್ನನಾಗಿದ್ದಾರೆ ಎಂದು ತಿಳಿಯದವರು
- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಅವರು ದುಬಾರಿ ಬಟ್ಟೆ ಹಾಕಿದರೂ ಟೀಕಿಸುತ್ತೀರಿ, ಇದೀಗ ನಗ್ನರಾದರೂ ಟೀಕಿಸುತ್ತೀರಿ?

---------------------

ಚೀನಾವನ್ನು ವಿಭಜಿಸಲು ಯತ್ನಿಸಿದರೆ ದೇಹಗಳು ಚೂರು ಚೂರು, ಎಲುಬುಗಳು ಪುಡಿ ಪುಡಿಯಾಗುತ್ತವೆ - ಕ್ಸಿ ಜಿನ್ ಪಿಂಗ್, ಚೀನಾ ಅಧ್ಯಕ್ಷ
ತಿಯಾನೈನ್ ಚೌಕ ಹತ್ಯಾಕಾಂಡ ಪುನರಾವರ್ತನೆಯಾಗುವ ಸೂಚನೆ ನೀಡುತ್ತಿದ್ದಾರೆ.

---------------------

ಪಾಕಿಸ್ತಾನದ ರಾಜ್ಯನೀತಿ ಭಯೋತ್ಪಾದಕರಿಗೆ ಸುರಕ್ಷಿತ ಸಂತಾನೋತ್ಪತ್ತಿಯನ್ನು ಒದಗಿಸುತ್ತದೆ - ಅಜಿತ್‌ದೋವಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ
ಭಾರತದಲ್ಲಿ ಬೆಳೆಯುತ್ತಿರುವ ಸಂಘಪರಿವಾರ ಭಯೋತ್ಪಾದಕರ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರು ತಲೆಕೆಡಿಸಿಕೊಳ್ಳುವುದು ಯಾವಾಗ?

---------------------

ಬಿಜೆಪಿ ಸಹಿತ ಯಾವುದೇ ಪಕ್ಷದವರು ಕಾಂಗ್ರೆಸ್‌ಗೆ ಬಂದರೂ ಸ್ವಾಗತ - ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ
ಇಡೀ ಕಾಂಗ್ರೆಸ್ ಪಕ್ಷ ಬಿಜೆಪಿ ಸೇರಿದರೆ ಸಾಕು, ಸುಮ್ಮನೆ ಅವರೇಕೆ ಬರುವುದು?

---------------------

ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಪ್ರಶ್ನೆಯೇ ಇಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ
ಸಾಲಮನ್ನಾ ಮಾಡುವ ಹಣವನ್ನೆಲ್ಲ ಅನರ್ಹ ಶಾಸಕರಿಗೆ ನೀಡಿ ಸಾಲ ಸಂದಾಯ ಮಾಡಿರಬೇಕು.

---------------------

ದೇಶೀ ಶಸತ್ತ್ತ್ರಾಸ್ತ್ರ ಬಳಸಿಯೇ ಭಾರತ ಮುಂದಿನ ಯುದ್ಧ ಗೆಲ್ಲಲಿದೆ - ಬಿಪಿನ್ ರಾವತ್, ಸೇನೆಯ ಮುಖ್ಯಸ್ಥ
ಅಂದರೆ ನಿಂಬೆ ಹಣ್ಣಿನ ಬಗ್ಗೆ ಹೇಳುತ್ತಿದ್ದಾರೆ.

---------------------

ನನ್ನನ್ನು 25 ಕೋಟಿ ರೂ.ಗೆ ಖರೀದಿಸಿದ ಮಗ ಇದ್ದರೆ ಆತನನ್ನು ತೋರಿಸಿ - ಎಚ್. ವಿಶ್ವನಾಥ್, ಅನರ್ಹಶಾಸಕ
ಅಂದರೆ ಅಷ್ಟೂ ಬೆಲೆಬಾಳುವುದಿಲ್ಲವೇ?

---------------------

ನಾನು ಸೂಕ್ತ ಸಮಯದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ - ಮಾಯಾವತಿ, ಬಿಎಸ್ಪಿ ವರಿಷ್ಠೆ
  ಹಾಗಾದರೆ ಈಗ ಯಾವ ಧರ್ಮದಲ್ಲಿದ್ದೀರಿ?

---------------------

ನಟರು ಮತ್ತು ನಿರ್ದೇಶಕರ ನಡುವಿನ ಸಂಬಂಧ ಚೆನ್ನಾಗಿದ್ದಾಗ ಒಳ್ಳೆಯ ಚಿತ್ರ ನಿರ್ಮಾಣವಾದ ಸಾಕಷ್ಟು ಉದಾಹರಣೆಗಳಿವೆ - ಆಲಿಯಾ ಭಟ್, ನಟಿ
ನಟಿಯರ ಜೊತೆಗೆ ಸಂಬಂಧವಿರುವುದು ಬೆಳಕಿಗೆ ಬಂದಿತ್ತು, ನಟರೂ ಸಂಬಂಧವಿಡುವುದು ಅಗತ್ಯವೆನ್ನುವುದು ಗೊತ್ತಾಯಿತು.

---------------------

ಕೇವಲ ವಿಪಕ್ಷಗಳ ಮೇಲೆ ಆರೋಪ ಮಾಡುವುದರಿಂದ ಆರ್ಥಿಕತೆ ಹಳಿಗೆ ಬರುವುದಿಲ್ಲ - ಡಾ. ಮನಮೋಹನ್ ಸಿಂಗ್, ಮಾಜಿ ಪ್ರಧಾನಿ
ಹಳಿಗೆ ಬರದಿದ್ದರೂ ಪರವಾಗಿಲ್ಲ, ತಮ್ಮ ಕುತ್ತಿಗೆಗೆ ಬರಬಾರದು ಎನ್ನುವುದು ಅವರ ಉದ್ದೇಶ.

---------------------

share
ಪಿ.ಎ.ರೈ
ಪಿ.ಎ.ರೈ
Next Story
X