ಕಾಟನ್ ಪೇಟೆಯಲ್ಲಿ ಬೆಂಕಿ ಅವಘಢ: ಮಕ್ಕಳಿಬ್ಬರು ಮೃತ್ಯು; ತಂದೆ-ತಾಯಿ ಗಂಭೀರ
![ಕಾಟನ್ ಪೇಟೆಯಲ್ಲಿ ಬೆಂಕಿ ಅವಘಢ: ಮಕ್ಕಳಿಬ್ಬರು ಮೃತ್ಯು; ತಂದೆ-ತಾಯಿ ಗಂಭೀರ ಕಾಟನ್ ಪೇಟೆಯಲ್ಲಿ ಬೆಂಕಿ ಅವಘಢ: ಮಕ್ಕಳಿಬ್ಬರು ಮೃತ್ಯು; ತಂದೆ-ತಾಯಿ ಗಂಭೀರ](https://www.varthabharati.in/sites/default/files/images/articles/2019/10/21/215739-1571634016.gif)
ಬೆಂಗಳೂರು, ಅ.21: ಮನೆಯೊಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಇಬ್ಬರು ಮಕ್ಕಳು ಮೃತಪಟ್ಟು ತಂದೆತಾಯಿ ಗಂಭೀರ ಗಾಯಗೊಂಡ ಘಟನೆ ಕಾಟನ್ ಪೇಟೆಯ ಭಕ್ಷಿ ಗಾರ್ಡನ್ ಎಂಬಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಮೃತರನ್ನು ಶ್ರೀಕಾಂತ್(13) ಹಾಗೂ ಆತನ ಸಹೋದರಿ ಕಾವೇರಿ(21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇವರ ಹೆತ್ತವರಾದ ಮುರಳಿ ಹಾಗೂ ಗೀತಾ ಗಂಭೀರ ಗಾಯಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಈ ಬಗ್ಗೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story