ಚೆಮ್ನಾಡ್ ನಲ್ಲಿ ವಾಹನ ಅಪಘಾತ: ಚುನಾವಣೆ ಕರ್ತವ್ಯಕ್ಕೆ ತೆರಳುತ್ತಿದ್ದ ಸಹೋದರರಿಗೆ ಗಂಭೀರ ಗಾಯ
ಕಾಸರಗೋಡು, ಅ.21: ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಬೈಕ್ ಮತ್ತು ಕಾರು ನಡುವೆ ಉಂಟಾದ ಅಪಘಾತದಲ್ಲಿ ಸಹೋದರರಿಬ್ಬರು ಗಂಭೀರ ಗಾಯಗೊಂಡ ಘಟನೆ ಸೋಮವಾರ ಮುಂಜಾನೆ ಚೆಮ್ನಾಡ್ ಮುಂಡಕಯ ಎಂಬಲ್ಲಿ ನಡೆದಿದೆ.
ಗಾಯಗೊಂಡ ಬೇಕಲ ಚೆಂಬರಿಕ ನಿವಾಸಿಗಳಾದ ಟಿ.ಎಂ.ಅಶ್ರಫ್(45) ಮತ್ತು ಟಿ.ಎಂ.ಅಬ್ದುಲ್ ರಹ್ಮಾನ್( 43) ಎಂಬವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜೇಶ್ವರದ ಉಪಚುನಾವಣಾ ಕರ್ತವ್ಯಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ.
Next Story