Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಪ್ರೀತಿ ಪ್ರೇಮದ ಬದುಕಿನಲ್ಲಿ ನೋವು-ನಲಿವು

ಪ್ರೀತಿ ಪ್ರೇಮದ ಬದುಕಿನಲ್ಲಿ ನೋವು-ನಲಿವು

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ21 Oct 2019 4:59 PM IST
share
ಪ್ರೀತಿ ಪ್ರೇಮದ ಬದುಕಿನಲ್ಲಿ ನೋವು-ನಲಿವು

‘ನಿನ್ನ ಪ್ರೀತಿಯ ನೆರಳಿನಲ್ಲಿ...’’ ಲೇಖಕಿ ಎನ್. ಆರ್. ರೂಪಶ್ರೀ, ಶಿರಸಿ ಅವರೇ ಹೇಳುವಂತೆ ‘ನೋವು ನಲಿವಿನ ಸ್ಪಂದನ’. ‘ನಿಮ್ಮೆಲ್ಲರ ಮಾನಸ’ ಮಾಸ ಪತ್ರಿಕೆಯಲ್ಲಿ ಬರೆದ ಆಯ್ದ ಬರಹಗಳ ಸಂಕಲನ ಇದು. ಬದುಕಿನ ಪ್ರೀತಿಯ ಘಮವನ್ನು ತುಂಬಿಕೊಂಡ ಸಂಕಲನವಿದು. ಒಂದು ರೀತಿಯಲ್ಲಿ ಕತೆಯಂತೂ, ಪ್ರಬಂದತೆಯೂ, ಲೇಖನದಂತೆಯೂ ಇರುವ ಇಲ್ಲಿನ ಲೇಖನಗಳು ಅಂತಿಮವಾಗಿ ಮನುಷ್ಯ ಘನತೆಯನ್ನು ಎತ್ತಿ ಹಿಡಿಯುವಂಥವುಗಳು. ಮನುಷ್ಯನಲ್ಲಿ ಮಾನವೀಯ ಗುಣಗಳೇ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯಗಳೆಂಬ ಹುಟ್ಟನ್ನ ಹಿಡಿದು ದಾಟುವ ಪ್ರಯತ್ನವಿದು. ದುಡ್ಡು, ಅಧಿಕಾರ, ದರ್ಪದ ಮುಂದೆ ಸೋತರೂ ಆಂತರ್ಯದಲ್ಲಿ ಗೆಲುವಿನ ಸಂಭ್ರಮ, ಭಾವನೆಗಳ ಬೆಸುಗೆಯಲ್ಲಿ ನಿರಂತರ ಹಂಬಲಿಕೆ, ತುಡಿತ, ಕನಸಿಗಾಗಿ ಕನವರಿಸಿದ ಸುಂದರ ಕ್ಷಣಗಳು...ಹೀಗೆ ಹೃದಯದ ಪ್ರೀತಿಯ ಸ್ಫುರಣಗಳೆಲ್ಲ ‘ನಿನ್ನ ಪ್ರೀತಿಯ ನೆರಳಿನಲ್ಲಿ....’ ಪುಸ್ತಕದಲ್ಲಿ ಪಿಸುಗುಡುತ್ತಿವೆ.

 ಇಲ್ಲಿ ಒಟ್ಟು 27 ಬರಹಗಳಿವೆ. ಹೆಚ್ಚಿನವುಗಳು ಕಥನರೂಪದಲ್ಲಿದೆ. ನಿನ್ನ ಪ್ರೀತಿಯ ನೆರಳಿನಲ್ಲಿ ಪ್ರಬಂಧವೂ ಅದೇ ರೂಪದವು. ಅರಣ್ಯ, ಹೆಣ್ಣು, ಕಾಡು, ಪರಿಸರ ಪ್ರೀತಿ ಇವುಗಳನ್ನು ಇಟ್ಟುಕೊಂಡು ಬರೆಯಲಾಗಿದೆ. ವೌನ ಮುರಿಯದ ಪ್ರೀತಿ ಕೂಡ ಇದೇ ದಾಟಿಯದು. ಇದು ಕೂಡ ಸಿನೆಮಾ ದಾಟಿಯ ಅಥವಾ ಸಾಯಿಸುತೆ ಕಾದಂಬರಿಗಳಲ್ಲಿ ಬರುವ ಪ್ರೀತಿಯ ತರಹದ್ದು. ‘ಪ್ರೀತಿಯ ಪಾರಿಜಾತ ಪಸರಿಸುತ್ತಿದೆ...’ ದುರಂತ ಪ್ರೀತಿಗೆ ಸಂಬಂಧಪಟ್ಟುದು. ಪ್ರೀತಿಸಿದವಳ ನಿರೀಕ್ಷೆಯನ್ನು ಹುಸಿಯಾಗಿಸಿದವನ ಕತೆ. ಭಾವೋತ್ಕಟತೆಯಿಂದ ಹೊರಬಂದು, ವಾಸ್ತವವನ್ನು ಒಪ್ಪಿ ಹೊಸ ಬದುಕನ್ನು ಕಟ್ಟುವ ಹೆಣ್ಣಿನ ಕತೆ ಇದಾಗಿದೆ. ‘ಹೊಸ ವರ್ಷದ ಹೊಸ ಜೀವಂತಿಕೆಯಲ್ಲಿ’ ಮಹಿಳಾ ಹೋರಾಟಗಾರ್ತಿಯೊಬ್ಬಳ ವೈಯಕ್ತಿಕ ಬದುಕಿನ ತುಯ್ದಿಟಗಳನ್ನು ಇದುಹೇಳುತ್ತದೆ. ಇಲ್ಲೂ ಪುರುಷನ ಸ್ವಾರ್ಥವನ್ನು ಮೀರಿ, ಭಾವುಕತೆಗೆ ಬಲಿಯಾಗದೆ ಹೊಸ ಸೂರ್ಯನನ್ನು ಹುಡುಕಿಕೊಂಡು ಹೋಗುವ ಮಹಿಳೆಯನ್ನು ಕಾಣಬಹುದು. ಬಹುಶಃ ಇಲ್ಲಿರುವ ಹೆಚ್ಚಿನ ಕತೆಯಂತಹ ಬರಹಗಳು ಪ್ರೀತಿ, ಪ್ರೇಮ, ಹರೆಯ, ವಿರಹಗಳನ್ನು ಹೇಳುತ್ತಲೇ ಅವುಗಳನ್ನು ಮೀರಲು ಯತ್ನಿಸುವ ಮಹಿಳೆಯ ಕುರಿತಂತೆ ಹೇಳುತ್ತದೆ.

ಬೆನಕ ಬುಕ್ಸ್ ಬ್ಯಾಂಕ್ ಶಿವಮೊಗ್ಗ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 136. ಮುಖಬೆಲೆ 120 ರೂ. ಆಸಕ್ತರು 73384 37666 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X