Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೋಣಗಳು ಓಟಕ್ಕೆ ಸೂಕ್ತವಲ್ಲ: ಕಂಬಳದ...

ಕೋಣಗಳು ಓಟಕ್ಕೆ ಸೂಕ್ತವಲ್ಲ: ಕಂಬಳದ ವಿರುದ್ಧ ಮತ್ತೆ ಪೆಟಾ ತಕರಾರು

ವಾರ್ತಾಭಾರತಿವಾರ್ತಾಭಾರತಿ22 Oct 2019 11:13 PM IST
share
ಕೋಣಗಳು ಓಟಕ್ಕೆ ಸೂಕ್ತವಲ್ಲ: ಕಂಬಳದ ವಿರುದ್ಧ ಮತ್ತೆ ಪೆಟಾ ತಕರಾರು

ಬೆಂಗಳೂರು,ಅ.22: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಕ್ರೀಡೆ ಕಂಬಳದಲ್ಲಿ ಬಳಕೆಯಾಗುವ ಕೋಣಗಳು ಓಟದ ಸ್ಪರ್ಧೆಗೆ ದೈಹಿಕವಾಗಿ ಸೂಕ್ತವಾಗಿಲ್ಲ ಎಂದು ಪೆಟಾ ಇಂಡಿಯಾ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ತಾಜಾ ತನಿಖಾ ವರದಿಯಲ್ಲಿ ಆರೋಪಿಸಿದೆ.

ಪ್ರಾಣಿಗಳಿಗೆ ಕ್ರೌರ್ಯ ತಡೆ (ಕರ್ನಾಟಕ ಎರಡನೇ ತಿದ್ದುಪಡಿ) ಕಾಯ್ದೆ,2017ನ್ನು ಅನೂರ್ಜಿತಗೊಳಿಸುವಂತೆ ಕೋರಿ ತಾನು ದಾಖಲಿಸಿರುವ ಅರ್ಜಿಯ ಭಾಗವಾಗಿ ಪೆಟಾ ಈ ತನಿಖಾ ವರದಿಯನ್ನು ಸಲ್ಲಿಸಿದೆ. ಈ ಕಾಯ್ದೆಯು ರಾಜ್ಯದಲ್ಲಿ ಕಂಬಳ ಕ್ರೀಡೆಗಳಿಗೆ ಅವಕಾಶ ಕಲ್ಪಿಸಿದೆ.

ಈ ತನಿಖಾ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ 2018 ಡಿಸೆಂಬರ್ ಮತ್ತು 2019 ಜನವರಿ ಮಧ್ಯೆ ಉಡುಪಿಯ ಬಾರಾಡಿಬೀಡು,ಮೂಡುಬಿದಿರೆ,ಮಂಗಳೂರು ಮತ್ತು ತಿರುವೈಲುಗಳಲ್ಲಿ ನಡೆದ ನಾಲ್ಕು ಕಂಬಳಗಳನ್ನು ಪೆಟಾ ಅಧಿಕಾರಿಗಳ ತಂಡವು ವೀಕ್ಷಿಸಿತ್ತು. ಪೆಟಾ ಅಧಿಕಾರಿಗಳು ಕಂಬಳಗಳ ಚಿತ್ರ ಮತ್ತು ವೀಡಿಯೊ ಸಾಕ್ಷಗಳನ್ನೂ ಸಂಗ್ರಹಿಸಿದ್ದರು. ಹೆದರಿಕೊಂಡು ಓಟಕ್ಕೆ ಹಿಂದೇಟು ಹೊಡೆಯುವ ಕೋಣಗಳನ್ನು ಪದೇ ಪದೇ ಕೈಗಳಿಂದ ಹೊಡೆಯಲಾಗುತ್ತದೆ,ಮುಖಕ್ಕೆ ಬಡಿಯಲಾಗುತ್ತದೆ,ಒದೆಯುವುದು,ಚುಚ್ಚುವುದರ ಜೊತೆಗೆ ಕೋಲುಗಳಿಂದ ಥಳಿಸಲಾಗುತ್ತದೆ. ಐದರಿಂದ ಆರು ಜನರ ಗುಂಪು ಅದನ್ನು ಕಂಬಳದ ಓಟ ಆರಂಭಗೊಳ್ಳುವ ಸ್ಥಳಕ್ಕೆ ಎಳೆದೇ ಒಯ್ಯತ್ತಾರೆ ಮತ್ತು ಅದರತ್ತ ಬೊಬ್ಬೆ ಹೊಡೆಯುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಫೋಮ್ ಅಥವಾ ಫೈಬರ್‌ನ ಹೊದಿಕೆಯಿರುವ ಕೋಲುಗಳನ್ನು ಬಳಸಲಾಗುತ್ತದೆ ಎಂದು ಕಂಬಳದ ಸಂಘಟಕರು ಹೇಳಿಕೊಂಡಿದ್ದರೂ ಓಟದ ಸಂದರ್ಭದಲ್ಲಿ ಕೋಣಗಳನ್ನು ಬರಿಗೈಗಳಿಂದ ಮತ್ತು ಯಾವುದೇ ಹೊದಿಕೆಗಳಿಲ್ಲದ ಒರಟು ಕೋಲುಗಳಿಂದ ಥಳಿಸಲಾಗುತ್ತದೆ ಎಂದಿರುವ ಪೆಟಾ,ಥಳಿತಗಳಿಂದ ಕೋಣಗಳಿಗೆ ಆಗಿರುವ ಗಾಯಗಳನ್ನು ತೋರಿಸುವ ಚಿತ್ರಗಳನ್ನೂ ಸಲ್ಲಿಸಿದೆ. ಗಾಯಗಳಿಗೆ ಕಪ್ಪು ವಸ್ತುವನ್ನು ಲೇಪಿಸಿ ಅದನ್ನು ಮರೆಮಾಚಲಾಗುತ್ತದೆ ಎಂದೂ ಅದು ತನ್ನ ವರದಿಯಲ್ಲಿ ತಿಳಿಸಿದೆ.

 ಕಂಬಳಗಳಲ್ಲಿ ಕ್ರೌರ್ಯ ಅಂತರ್ಗತವಾಗಿದೆ. ಕೋಣಗಳು ಓಟದ ಸ್ಪರ್ಧೆಗೆ ದೈಹಿಕವಾಗಿ ಸೂಕ್ತವಾಗಿಲ್ಲ ಮತ್ತು ಎಷ್ಟೇ ನಿಯಂತ್ರಣವನ್ನು ಹೇರಿದರೂ ಈ ವೈಜ್ಞಾನಿಕ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪೆಟಾ ಇಂಡಿಯಾದ ಸಿಇಒ ಮಣಿಲಾಲ ವಲ್ಲಿಯೇಟ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X