ಗಾಂಜಾ ಸೇವನೆ ಆರೋಪ: ಒಂಭತ್ತು ಮಂದಿ ವಶಕ್ಕೆ
ಮಣಿಪಾಲ, ಅ.23: ಮಣಿಪಾಲ ಹಾಗೂ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ ಒಂಭತ್ತು ಮಂದಿಯನ್ನು ವಶಕ್ಕೆ ಪೆಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅ.19ರಂದು ಮಣಿಪಾಲ ಗ್ರೀನ್ವುಡ್ ಅಪಾರ್ಟ್ಮೆಂಟ್ ಬಳಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಸಾಗರ್ ಮಹಾದೇವನ್(21), ಮುಹಮ್ಮದ್ ಹಮ್ರಾ(22), ರಾಹುಲ್ ರಾಜೀವ್(21), ಕಾಸರಗೋಡು ಜಿಲ್ಲೆಯ ಸೋನು ನಾರಯಣನ್(21), ಕೊಚ್ಚಿಯ ಅರವಿಂದ ಕೃಷ್ಣ(23) ಎಂಬವರನ್ನು ಮಣಿಪಾಲ ಪೊಲೀರು ವಶಕ್ಕೆ ಪಡೆದುಕೊಂಡಿದ್ದಾರೆ.
ಅ.22ರಂದು ಸಂಜೆ ವೇಳೆ ಶಿರ್ವ ಮಸೀದಿ ಬಳಿ ಸ್ಥಳೀಯ ನಿವಾಸಿಗಳಾದ ಮುಹಮ್ಮದ್ ಅಶ್ರಫ್(24), ಮಹಮ್ಮದ್ ಅಸ್ಲಂ(24) ಹಾಗೂ ಶಿರ್ವದ ಮುಹ್ಮಮದ್ ಶೋಯೆಬ್(19), ಕೊಲ್ಲಬೆಟ್ಟುವಿನ ಅಬ್ದುಲ್ ಸಮ್ಮದ್(26) ಎಂಬವರನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿ ಪರೀಕ್ಷಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story