Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಹುಲಿಯ ನೆತ್ತಿಗೆ ನೆರಳು: ಬೆಂಕಿ ಬಿದ್ದ...

ಹುಲಿಯ ನೆತ್ತಿಗೆ ನೆರಳು: ಬೆಂಕಿ ಬಿದ್ದ ಮನೆಗೆ ನೀರ ಚೆಲ್ಲಿ....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ25 Oct 2019 12:07 AM IST
share
ಹುಲಿಯ ನೆತ್ತಿಗೆ ನೆರಳು: ಬೆಂಕಿ ಬಿದ್ದ ಮನೆಗೆ ನೀರ ಚೆಲ್ಲಿ....

‘‘ನಾನು

ಒಂದು ಬೀಜವಾಗಲು ಬಯಸುತ್ತೇನೆ

ಕೆಳಗೆ ಬಿದ್ದರೂ

ಕಳೆದು ಹೋಗುವುದಿಲ್ಲ

ಒಡೆದು ಚಿಗುರುತ್ತೇನೆ

ನೆಲದಿಂದೆದ್ದು ಮೇಲೆ ಬರುತ್ತೇನೆ

ಹತ್ತಾರು ಬೀಜಗಳಿಗೆ

ಜನ್ಮ ನೀಡುತ್ತೇನೆ....’’

ಹೀಗೆ ವಿನಯ ವಿಧೇಯತೆಯ ಮಣ್ಣ ಸೊಗಡಿನಿಂದ ಬಿರಿದ ಬೀಜಗಳ ಮೊಳಕೆಗಳು ನದೀಮ ಸನದಿಯವರ ಪದ್ಯಗಳು. ‘ಬೆಂಕಿಬಿದ್ದ ಮನೆಯ ಪೇದೆ/ಜೀವ ಭಯದ ಹಂಗು ತೊರೆದು/ಗಲಭೆಕೋರನ ಮನೆಯ/ಬೆಂಕಿ ನಂದಿಸುತ್ತಿದ್ದ’

‘ಏಸು-ಪೈಗಂಬರ, ಈಶ-ದಿಗಂಬರ/ ನಮಗಿರಲಿ ಸಾವಿರ ಹಬ್ಬ/ಅರಿತರೆ ಒಳಿತು ಜಗಕೆ ಇರುವನು/ ಒಬ್ಬನೇ ಚಂದ್ರ, ಒಬ್ಬನೇ ಇಂದ್ರ’....ರಹಮತ್ ತರೀಕೆರೆ ಹೇಳುವಂತೆ ಇವೆಲ್ಲವೂ ‘ನಮ್ಮ ಕಾಲದ ಆರೋಗ್ಯವಂತ ಮನಸ್ಸೊಂದು ಲೋಕಕ್ಕೆ ಮಿಡಿದ ಸಾಕ್ಷದಂತಿರುವ ಕವನಗಳು. ದ್ವೇಷದ ಗೋಡೆಗಳನ್ನು ಕಟ್ಟುವ ಸಮಾಜದೊಳಗೆ ನಿಂತು ಜಾತಿ ಮತಗಳಾಚೆಗಿನ ದೇವರು ಧರ್ಮಗಳಾಚೆ ಮನುಷ್ಯ ಪ್ರೀತಿಯನ್ನು ಹಾರೈಸುವ ಕವನಗಳು. ರಹಮತ್ ತರೀಕೆರೆ ತಮ್ಮ ಬೆನ್ನುಡಿಯಲ್ಲಿ ಹೀಗೆ ಹೇಳುತ್ತಾರೆ: ‘‘...ಆಳವಾದ ಶ್ರದ್ಧೆಯಿಂದ ವ್ಯಕ್ತವಾಗುವ ಖಾಸಗಿ ಭಾವವು ನಾಡಿನ ರಾಜಕೀಯ ಕಾವ್ಯವೂ ಆಗಬಲ್ಲದು. ಸ್ವಂತಿಕೆಯು ಸಾರ್ವಜನಿಕವೂ ಆಗಬಲ್ಲದು ಎಂಬಂತೆ ಇಲ್ಲಿನ ಪ್ರೇಮ ಪದ್ಯಗಳಿವೆ’’

ಇಲ್ಲಿ ಒಟ್ಟು 31 ಪದ್ಯಗಳಿವೆ. ಕಾಡನ್ನೂ ಮೀರಿ ಕಾಡ್ಗಿಚ್ಚು ಹೇಗೆ ಮನೆ-ಮನಗಳನ್ನು ಆವರಿಸಿ ನಿಂತಿವೆ ಎನ್ನುವುದನ್ನು ಹೇಳುವ ‘ಕಾಡ್ಗಿಚ್ಚು’, ದ್ವೇಷವನ್ನು ಮಾನವೀಯತೆ ತನ್ನ ಜೀವ ಚೈತನ್ಯವನ್ನು ಒತ್ತೆಯಿಟ್ಟು ಹೇಗೆ ಗೆಲ್ಲುತ್ತದೆ ಎನ್ನುವುದನ್ನು ಹೇಳುವ ‘ಗಲಭೆ’, ಗಾಂಧಿಯ ಹೆಸರಿನಲ್ಲಿ ನಡೆಯುವ ವಿಪರ್ಯಾಸಗಳನ್ನು ಹೇಳುವ ‘ಗಾಂಧಿ ಸಿಕ್ಕಿದ್ದ’, ಮನುಷ್ಯತ್ವವೇ ಇಲ್ಲದ ವರ್ತಮಾನವನ್ನು ನೋಡಿ ನಿಟ್ಟುಸಿರಿಡುವ, ಅದಕ್ಕೆ ಸವಾಲು ಹಾಕುವ ‘ಗಲಭೆಯಲ್ಲಿ ಸತ್ತವನೊಬ್ಬನ ಅವಿಡವಿಟ್ಟು’...ಹೀಗೆ ಹೆಚ್ಚಿನ ಕವಿತೆಗಳು ರಾಜಕೀಯ ಕಾರಣಗಳಿಂದ ಜರ್ಝರಿತವಾಗಿರುವ ಮನುಷ್ಯ ಪ್ರೇಮದ ಕುರಿತಂತೆ ಕಾಳಜಿ ವ್ಯಕ್ತಪಡಿಸುತ್ತವೆ.

ಸಮಕಾಲೀನ ಪುಸ್ತಕ ಬೆಳಗಾವಿ, ಇವರು ಹೊರತಂದಿರುವ ಕೃತಿಯ ಒಟ್ಟು ಪುಟಗಳು 88. ಮುಖಬೆಲೆ 85 ರೂಪಾಯಿ. ಆಸಕ್ತರು 99720 94184 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X