ಕೊಲ್ಲೂರು, ಅ.25: ತನ್ನ ಹೆಣ್ಣು ಮಕ್ಕಳ ಮದುವೆಗೋಸ್ಕರ ಮಾಡಿದ ಸಾಲಗಳ ಚಿಂತೆಯಿಂದ ಮಾನಸಿಕವಾಗಿ ನೊಂದ ಜಡ್ಕಲ್ ಗ್ರಾಮದ ಮೆಕ್ಕೆ ತಲ್ಕಣ ನಿವಾಸಿ ಶಿವ ಪೂಜಾರಿ(55) ಎಂಬವರು ಅ.25ರಂದು ಬೆಳಗ್ಗೆ ಮನೆ ಸಮೀಪದ ಅರಣ್ಯ ಇಲಾಖೆಯ ಜಾಗದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.