ಚಂಡಮಾರುತ: ನೂರಾರು ಮೀನುಗಾರಿಕಾ ಬೋಟ್ಗಳಿಗೆ ಎನ್ಎಂಪಿಟಿಯಲ್ಲಿ ರಕ್ಷಣೆ
![ಚಂಡಮಾರುತ: ನೂರಾರು ಮೀನುಗಾರಿಕಾ ಬೋಟ್ಗಳಿಗೆ ಎನ್ಎಂಪಿಟಿಯಲ್ಲಿ ರಕ್ಷಣೆ ಚಂಡಮಾರುತ: ನೂರಾರು ಮೀನುಗಾರಿಕಾ ಬೋಟ್ಗಳಿಗೆ ಎನ್ಎಂಪಿಟಿಯಲ್ಲಿ ರಕ್ಷಣೆ](https://www.varthabharati.in/sites/default/files/images/articles/2019/10/26/216486-1572063663.gif)
ಮಂಗಳೂರು, ಅ.26: ಭಾರತದ ಪಶ್ಚಿಮ ಕರಾವಳಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿರುವುದರಿಂದ ಮೀನುಗಾರಿಕೆಯಲ್ಲಿ ತೊಡಗಿದ್ದ 100ಕ್ಕೂ ಅಧಿಕ ಬೋಟುಗಳಿಗೆ ನವಮಂಗಳೂರು ಬಂದರ್(ಎನ್ಎಂಪಿಟಿ)ನಲ್ಲಿ ರಕ್ಷಣೆ ಒದಗಿಸಲಾಗಿದೆ.
ಅರಬಿ ಸಮುದ್ರದಲ್ಲಿನ ತೀವ್ರ ವಾಯುಭಾರ ಕುಸಿತವು ಕ್ಯಾರ್ ಚಂಡಮಾರುತವಾಗಿ ರೂಪುಗೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ನೂರಾರು ಬೋಟ್ಗಳಿಗೆ ಕೋಸ್ಟ್ ಗಾರ್ಡ್ ಸಹಕಾರದಲ್ಲಿ ಎನ್ಎಂಪಿಟಿಯಲ್ಲಿ ಆಶ್ರಯ ಒದಗಿಸಲಾಗಿದೆ. ಮೀನುಗಾರಿಕಾ ಬೋಟ್ಗಳಲ್ಲಿದ್ದ ಸಾವಿರಕ್ಕೂ ಅಧಿಕ ಮೀನುಗಾರರನ್ನು ರಕ್ಷಿಸಲಾಗಿದ್ದು, ಅವರಿಗೆ ಬಂದರ್ನ ಸುರಕ್ಷಿತ ವಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಎನ್ಎಂಪಿಟಿ ಪ್ರಕಟನೆ ತಿಳಿಸಿದೆ.
![](https://www.varthabharati.in/sites/default/files/images/galllery/2019/10/26/boat1.gif)
Next Story