ಉಡುಪಿ: ಸಾರ್ವಜನಿಕರಿಗೆ 5000 ಮಣ್ಣಿನ ಹಣತೆ ಉಚಿತ ವಿತರಣೆ
![ಉಡುಪಿ: ಸಾರ್ವಜನಿಕರಿಗೆ 5000 ಮಣ್ಣಿನ ಹಣತೆ ಉಚಿತ ವಿತರಣೆ ಉಡುಪಿ: ಸಾರ್ವಜನಿಕರಿಗೆ 5000 ಮಣ್ಣಿನ ಹಣತೆ ಉಚಿತ ವಿತರಣೆ](https://www.varthabharati.in/sites/default/files/images/articles/2019/10/26/216574-1572107031.jpg)
ಉಡುಪಿ, ಅ.26: ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್ ವತಿಯಿಂದ ಪುರುಷೋತ್ತಮ ಶೆಟ್ಟಿ ಸಹಕಾರದಲ್ಲಿ ಸುಮಾರು 5000 ಮಣ್ಣಿನ ಹಣತೆಗಳನ್ನು ಸಾರ್ವಜನಿಕರಿಗೆ ಉಡುಪಿ ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ಇಂದು ಉಚಿತವಾಗಿ ವಿತರಿಸ ಲಾಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪರ್ಯಾಯ ಪಲಿಮಾರು ಮಠಾ ಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ದೀಪಾವಳಿ ಎಂಬುದು ಬಡವರ ಹಬ್ಬವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ನೈಜ ಅರ್ಥ ದಲ್ಲಿ ಹಬ್ಬವನ್ನು ಆಚರಿಸಬೇಕು. ದೇಶದಲ್ಲಿ ಉದ್ಭವಿಸಿರುವ ಅತಿವೃಷ್ಟಿ ನಿವಾರಣೆಯಾಗಿ ದೇಶವು ಸುಭಿಕ್ಷವಾಗಬೇಕು ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕನ್ನರಪಾಡಿ ದೇವಳದ ಧರ್ಮದರ್ಶಿ ಕೃಷ್ಣಮೂರ್ತಿ ಆಚಾರ್ಯ, ಜಿಲ್ಲಾ ನಾಗರಿಕ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಮಠದ ಪಿಆರ್ಓ ಶ್ರೀಶ ಭಟ್ ಕಡೆಕಾರ್, ಸುಧಾಕರ ಒಳಕಾಡು, ಸತೀಶ್ ಕಲ್ಮಾಡಿ, ಡೇವಿಡ್, ಜಗದೀಶ್ ಶೆಟ್ಟಿ, ಗಣೇಶ್ ಪ್ರಸಾದ್, ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.