ಭಾರೀ ಮಳೆ: ಮೂಡುಶೆಡ್ಡೆಯಲ್ಲಿ ಮನೆಗೆ ಹಾನಿ
ಮಂಗಳೂರು, ಅ.26: ತಿರುವೈಲು ಗ್ರಾಮದ ವಾಮಂಜೂರು ಸಮೀಪದ ಮೂಡುಶೆಡ್ಡೆಯ ಸೀತಾಲಕ್ಷ್ಮಿ ಎಂಬವರ ಮನೆಗೆ ಶನಿವಾರ ಮರ ವೊಂದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಈ ಮಧ್ಯೆ ಭಾಗಶ: ನಷ್ಟಕ್ಕೊಳಗಾದ ಸೀತಾಲಕ್ಷ್ಮಿಗೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅವರು 25 ಸಾವಿರ ರೂಪಾಯಿಯ ಚೆಕ್ ನೀಡಿ ವಿತರಿಸಿದ್ದಾರೆ.
ಈ ಸಂದರ್ಭ ಕಂದಾಯ ನಿರೀಕ್ಷಕ ನವೀನ್, ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಸದಸ್ಯೆ ಪ್ರಮೀಳಾ ಶೆಟ್ಟಿ ಮತ್ತಿತರರಿದ್ದರು.
Next Story





