ಗಾಂಜಾ ಸೇವನೆ: ನಾಲ್ವರು ವಶಕ್ಕೆ
ಉಡುಪಿ, ಅ.28: ಗಾಂಜಾ ಸೇವನೆಗೆ ಸಂಬಂಧಿಸಿ ಅ.26ರಂದು ಐದು ಮಂದಿಯನ್ನು ಉಡುಪಿ ಸೆನ್ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ದರಿಯೋಸ್ ಆ್ಯಂಟೋನಿ ಡಯಾಸ್, ಹೆರ್ಗಾ ಗ್ರಾಮದ ಐಡಿಯಲ್ ರೆಸಿಡೆನ್ಸಿ ಬಳಿ ಜೆರಾಲ್ಡ್ ವಿಕಾಸ್ ಇ. ಮತ್ತು ಧ್ರುವ ಕೋದಂಡ ದೇವಯ್ಯ, ಮಣಿಪಾಲ ಆದಿತ್ಯಾಪರ್ವ ಅಪಾರ್ಟ್ಮೆಂಟ್ ಬಳಿ ಅನುಭವ್ ಭಾಜಪೇಯಿ, ರಾಜ್ದೀಪ್ ಚೌಹಾನ್ ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಫಾರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವರದಿಯಲ್ಲಿ ಇವರು ಗಾಂಜಾ ಸೇವನೆ ಮಾಡಿರು ವುದು ಖಚಿತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story