ಪುತ್ತೂರು: ಅಭಿರಾಂ ಫ್ರೆಂಡ್ಸ್ ಕ್ರಿಕೆಟರ್ಸ್, ಬ್ಲಡ್ ಡೋನರ್ಸ್ ವತಿಯಿಂದ ರಕ್ತದಾನ ಶಿಬಿರ
![ಪುತ್ತೂರು: ಅಭಿರಾಂ ಫ್ರೆಂಡ್ಸ್ ಕ್ರಿಕೆಟರ್ಸ್, ಬ್ಲಡ್ ಡೋನರ್ಸ್ ವತಿಯಿಂದ ರಕ್ತದಾನ ಶಿಬಿರ ಪುತ್ತೂರು: ಅಭಿರಾಂ ಫ್ರೆಂಡ್ಸ್ ಕ್ರಿಕೆಟರ್ಸ್, ಬ್ಲಡ್ ಡೋನರ್ಸ್ ವತಿಯಿಂದ ರಕ್ತದಾನ ಶಿಬಿರ](https://www.varthabharati.in/sites/default/files/images/articles/2019/10/29/216856-1572349901.jpg)
ಪುತ್ತೂರು, ಅ.29: ಅಭಿರಾಮ್ ಫ್ರೆಂಡ್ಸ್ ಕ್ರಿಕೆಟರ್ಸ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ) ವತಿಯಿಂದ ರಕ್ತದಾನ ಶಿಬಿರವು ರವಿವಾರ ಪುತ್ತೂರಿನ ಲಯನ್ಸ್ ಕ್ಲಬ್ ಸಭಾಭವನದಲ್ಲಿ ನಡೆಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ವಿಶೇಷ ಶಿಬಿರದಲ್ಲಿ ಸ್ಥಳೀಯರು ರಕ್ತದಾನ ಮಾಡಿದರು. ಒಟ್ಟು 50 ಮಂದಿ ಎ.ಎಫ್.ಸಿ ತಂಡದ ಸದಸ್ಯರು ರಕ್ತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಭಿರಾಮ್ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದ ಶರತ್ ಕೇಪುಳು, ತೇಜ ಕೆಮ್ಮಾಯಿ, ಅವಿನಾಶ್, ಅಜಿತ್, ವಿನೋದ್, ಅಭಿಷೇಕ್, ಅಕ್ಷಯ್, ಕಿಶೋರ್, ಸನತ್,ಇಜಾಝ್, ಭರತ್, ರಾಜೇಶ್, ಇಂದವೀರ್ ಭಟ್ ಹಾಗೂ ಶ್ರೇಯಸ್ ಭಟ್ ಕೆದಿಲಾಯ ಉಪಸ್ಥಿತರಿದ್ದರು. ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಕಾರ್ಯನಿರ್ವಾಹಕರಾದ ರಝಾಕ್ ಸಾಲ್ಮರ, ಇಮ್ರಾನ್ ಉಪ್ಪಿನಂಗಡಿ, ಶಾಹುಲ್ ಹಮೀದ್ ಕಾಶಿಪಟ್ನ, ಫಾರೂಕ್ ಜ್ಯೂಸ್ ರೋಮ್ಯಾಂಟಿಕ್, ಜಮಾಲ್ ಕಲ್ಲಡ್ಕ ಭಾಗವಹಿಸಿದ್ದರು
ಕಾರ್ಯಕ್ರಮದದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ವತಿಯಿಂದ ಎ.ಎಫ್.ಸಿ ಪುತ್ತೂರು ತಂಡಕ್ಕೆ ದೀಪಾವಳಿಯ ವಿಶೇಷ ಉಡುಗೊರೆ ನೀಡಲಾಯಿತು.