ನ.8: ‘ಮಧುಮೇಹ ಮುಕ್ತ ಭಾರತ’ ಜನಜಾಗೃತಿ ಅಭಿಯಾನ
ಮಂಗಳೂರು, ಅ.29: ಗಂಜಿಮಠದ ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ), ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ, ಮಂಗಳೂರು ಕೆಎಂಸಿ ಆಸ್ಪತ್ರೆ ಹಾಗೂ ಗಂಜಿಮಠದ ರಾಜ್ ಅಕಾಡಮಿಯ ಜಂಟಿ ಆಶ್ರಯದಲ್ಲಿ ನವೆಂಬರ್ 8ರಂದು ಮಧುಮೇಹ ಜಾಗೃತಿ ಮಾಸದಂಗವಾಗಿ ‘ಮಧುಮೇಹ ಮುಕ್ತ ಭಾರತ’ ಜನಜಾಗೃತಿ ಅಭಿಯಾನ ನಡೆಯಲಿದೆ.
ಗಂಜಿಮಠ ರಾಜ್ ಅಕಾಡಮಿ ಶಾಲೆಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 12:30ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಧುಮೇಹ ಮತ್ತು ಹೃದಯ ತಪಾಸಣಾ ಉಚಿತ ಶಿಬಿರ, ಮಧುಮೇಹ ಜಾಗೃತಿಯ ಕಿರು ನಾಟಕ, ಚಿತ್ರಕಲಾ ಪ್ರದರ್ಶನ, ವೈದ್ಯರೊಂದಿಗೆ ನೇರ ಸಂವಾದ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story